Don't Miss!
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- News Bird Flu: ಮೊಟ್ಟೆ-ಕೋಳಿ ತಿನ್ನುವವರೇ ಹುಷಾರ್!- ಹೆಚ್ಚಾಗಿದೆ ಹಕ್ಕಿಜ್ವರ
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗೊಂದಲದ ಗೂಡಾದ ಚಂದ್ರಮುಖಿ ನಯನತಾರಾ
ನಟಿ ನಯನತಾರಾ ಚಿತ್ರರಂಗಕ್ಕೆ ವಿದಾಯ ಹೇಳಿದ್ದು ಗೊತ್ತೆ ಇದೆ. ತೆಲುಗಿನ 'ಶ್ರೀರಾಮರಾಜ್ಯಂ' ಚಿತ್ರವೇ ತಮ್ಮ ಅಭಿನಯದ ಕೊನೆಯ ಚಿತ್ರ ಎಂದು ಸ್ವತಃ ನಯನಿ ಘೋಷಿಸಿದ್ದರು. ಡ್ಯಾನ್ಸ್ ರಾಜ ಪ್ರಭುದೇವ ಅವರನ್ನು ಮದುವೆಯಾಗುತ್ತಿರುವ ಉದ್ದೇಶದಿಂದ ನಯನತಾರಾ ಈ ನಿರ್ಧಾರಕ್ಕೆ ಬಂದಿದ್ದರು.
'ಶ್ರೀರಾಮರಾಜ್ಯಂ' ಚಿತ್ರದ ಬಳಿಕ ಆಕೆಗೆ ತೆಲುಗು, ತಮಿಳಿನಿಂದ ಸಾಲು ಸಾಲು ಆಫರ್ಗಳು ಬರುತ್ತಿವೆ. ಇತ್ತೀಚೆಗೆ 'ಶ್ರೀರಾಮರಾಜ್ಯಂ' ಚಿತ್ರದ 50 ಡೇಸ್ ಕಾರ್ಯಕ್ರಮ ನಡೆಯಿತು. ನಯನತಾರಾ ಕೂಡ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ನಯನತಾರಾಗೆ ತೆಲುಗು ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದಾಸರಿ ನಾರಾಯಣ ರಾವ್ ಕಿವಿಮಾತು ಹೇಳಿದರು.
"ಇದೇ ಕೊನೆಯ ಚಿತ್ರ ಎಂದು ಕೊಳ್ಳಬೇಡ. ಮದುವೆಯಾದ ಬಳಿಕವೂ ಅಭಿನಯಿಸಬಹುದು" ಎಂದಿದ್ದಾರೆ ದಾಸರಿ. ಅವರು ಹಾಗೆ ಹೇಳಿದ್ದೇ ತಡ ತಮಿಳಿನ ವಿಜಯ್, ವೆಂಕಟ್ ಹಾಗೂ ಲಿಂಗುಸ್ವಾಮಿ ಎಂಬ ನಿರ್ಮಾಪಕರು ನಯನತಾರಾ ಮುಂದೆ ಕಾಲ್ಶೀಟ್ ಹಿಡಿದಿದ್ದಾರೆ. ಆದರೆ ನಯನತಾರಾ ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಮತ್ತೆ ಬಣ್ಣ ಹಚ್ಚು ಬೇಕೆ ಬೇಡವೆ ಎಂಬ ಗೊಂದಲದಲ್ಲಿ ನಯನತಾರಾ ಇದ್ದಾರೆ. (ಏಜೆನ್ಸೀಸ್)