twitter
    For Quick Alerts
    ALLOW NOTIFICATIONS  
    For Daily Alerts

    ಬೆಳಗಾವಿಯಲ್ಲಿ ತಾರೆಗಳ ಗುಂಡಿನ ಮತ್ತೇ ಗಮ್ಮತ್ತು

    By Rajendra
    |

    Vishwa Kannada Sammelana, Belgaum
    ವಿಶ್ವಕನ್ನಡ ಸಮ್ಮೇಳನಕ್ಕೆ ಆಗಮಿಸಿದ್ದ ಸಿನಿಮಾ ತಾರೆಗಳಲ್ಲಿ ಕೆಲವರು ರಾತ್ರಿಯಲ್ಲಾ ಗುಂಡಿನ ಮತ್ತಿನಲ್ಲಿ ಕಳೆದದ್ದು ಸಖತ್ ಸುದ್ದಿಯಾಗಿದೆ. ಇನ್ನೂ ಕೆಲವರು ಇಸ್ಪೀಟ್ ಆಟ ಆಡುತ್ತಾ ಎಕ್ಕಾ ರಾಜ ರಾಣಿ ನನ್ನ ಕೈಯೊಳಗೆ....ದೇವ್ರನ್ಮೆ ನೀಡು ಕಾರ್ಡು ಹೊಡಿ ಎಂದು ಆಡಿದ್ದಾಗಿ ಬೆಳಗಾವಿಯಿಂದ ಮಾಹಿತಿ ಬಂದಿದೆ.

    ರಾತ್ರಿಯಲ್ಲಾ ಗುಂಡು ಜೊತೆಗೆ ಭರ್ಜರಿ ತುಂಡು ಎಕ್ಕ ರಾಜ ರಾಣಿ ಎಂದು ಆಡಿದ ನಲಿದ ಕಲಾವಿದರಿಗೆ ಸೂರ್ಯೋದಯವಾಗಿದ್ದೇ ಬೆಳಗ್ಗೆ 10 ಗಂಟೆಯ ಮೇಲೆ. ಜನಪ್ರಿಯ ನಟರೊಬ್ಬರು ಇಸ್ಪೀಟ್ ಆಟ ಬಿಟ್ಟು ಕಡೆಗೂ ಸಮ್ಮೇಳನಕ್ಕೆ ಬರಲೇ ಇಲ್ಲ. ಇಸ್ಪ್ಪೀಟ್ ಆಟ ನಡೆಯುವಷ್ಟು ಹೊತ್ತೂ ಅವರು ತಂಗಿದ್ದ ಹೋಟೆಲ್‌ ಕೊಠಡಿಯಲ್ಲಿ ಪಾನಗೋಷ್ಠಿ ನಡದೇ ಇತ್ತು ಎನ್ನಲಾಗಿದೆ.

    ಏತನ್ಮಧ್ಯೆ ನಟಿ ತಾರಾ ಅವರು ಮಹಿಳಾ ವೈದ್ಯರು ಇಲ್ಲ ಎಂಬ ಕಾರಣಕ್ಕೆ ಬೆಂಗಳೂರು ಬಸ್ ಹತ್ತಿ ವಾಪಸ್ಸಾಗಿದ್ದಾರೆ. ಅವರು ಯಾವುದೋ ಇಂಜಕ್ಷನ್ ತೆಗೆದುಕೊಳ್ಳಲು ಮಹಿಳಾ ವೈದ್ಯರೇ ಬೇಕಾಗಿತ್ತ್ತಂತೆ. ಆದರೆ ಅಲ್ಲಿ ಮಹಿಳಾ ವೈದ್ಯರಿಲ್ಲದೆ ಪುರುಷ ವೈದ್ಯರಿದ್ದದ್ದೇ ತಾರಾ ಮೇಡಂ ಗರಂ ಆಗಲು ಕಾರಣ ಎನ್ನಲಾಗಿದೆ. ಇದ್ಯಾವುದನ್ನೂ ತಲೆಗೆ ಹಾಕಿಕೊಳ್ಳದ ಶಶಿಕುಮಾರ್ ಗಡದ್ದಾಗಿ ಮಧ್ಯಾಹ್ನ 1 ಗಂಟೆ ತನಕ ನಿದ್ದೆ ಹೊಡೆದಿರುವುದು ಹಲವರ ನಿದ್ದೆ ಕೆಡಿಸಿದೆ.

    English summary
    Here is the some interesting news relating to Vishwa Kannada Sammelana, Belgaum. Sources says that some sandalwood stars boycott the programme and enjoyed boozing in Belgaum. Some spent whole night by playing cards. As a result few stars got up late at 10 am. Especially actor Shashikumar woke up at 1 pm.
    Saturday, March 12, 2011, 16:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X