Don't Miss!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುನೀತ್ ಹುಟ್ಟುಹಬ್ಬಕ್ಕೆ ಅನ್ನದಾಸೋಹ
ಅಂತೂ'ಹ್ಯಾಟ್ರಿಕ್ ಹೀರೋ" ಎನ್ನುವ ಯಶಸ್ಸಿನ ಗರಿ ಅಣ್ಣನಂತೆ ತಮ್ಮನಿಗೂ ದಕ್ಕುವ ದಿನ ಪಾಲಿಗೆ ಹತ್ತಿರವಾಗಿದೆ. ಪುನೀತ್ ರಾಜ್ಕುಮಾರ್ ಅಭಿನಯದ 'ವೀರ ಕನ್ನಡಿಗ" ದಿನ ಶತ ದಿನೋತ್ಸವದತ್ತ ಹೆಜ್ಜೆಯಿಟ್ಟಿದೆ.
ಭರ್ಜರಿ ಓಪನಿಂಗ್ನ ನಂತರ ಮಂಕಾಗಿದ್ದ 'ವೀರ ಕನ್ನಡಿಗ" ನಂತರದ ದಿನಗಳಲ್ಲಿ ಚೇತರಿಸಿಕೊಂಡಿದ್ದಾನೆ. ನೂರರ ಹೊಸ್ತಿಲಿಗೂ ಬಂದಿದ್ದಾನೆ. ಪುನೀತ್ ಖುಷಿಯಾಗಲಿಕ್ಕೆ ಇನ್ನೇನು ಬೇಕು. ಹ್ಞಾಂ, ಪುನೀತ್ ಖುಷಿಗೆ ಇನ್ನೂ ಒಂದು ಕಾರಣವಿದೆ. ಅದು ಹುಟ್ಟುಹಬ್ಬದ ಸಂಭ್ರಮ. ಮಾ.17ರಂದು ಪುನೀತ್ ಜನುಮದಿನ.
ಪುನೀತ್ ರಾಜ್ಕುಮಾರ್ ತಮ್ಮ ಹುಟ್ಟುಹಬ್ಬ ಹೇಗೆ ಆಚರಿಸುತ್ತಾರೋ ಗೊತ್ತಿಲ್ಲ . ಅವರ ಅಭಿಮಾನಿಗಳಿಗಂತೂ ನಾಯಕ ನಟನ ಹುಟ್ಟುಹಬ್ಬ ವಿಭಿನ್ನವಾಗಿರಬೇಕು ಅಂತ ನಿರ್ಧರಿಸಿಬಿಟ್ಟಿದ್ದಾರೆ.
'ರಾ-ಶಿ-ರಾ-ಪು" ಅಭಿಮಾನಿ ಬಳಗವು ಪುನೀತ್ರ 29ನೇ ಹುಟ್ಟುಹಬ್ಬದ ಸಲುವಾಗಿ ಮಾರ್ಚ್ ಹದಿನೇಳರ ಬುಧವಾರ ಮಲೆ ಮಹದೇಶ್ವರ ಸ್ವಾಮಿಗೆ ತಮ್ಮ ನೆಚ್ಚಿನ ನಟನ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಿದೆ. ಅಂದು ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಅನ್ನ ದಾಸೋಹವೂ ಇದೆ. ಬೆಳಗಿನಿಂದ ಸಂಜೆಯವರೆಗೆ ಈ ಅನ್ನ ದಾಸೋಹ ನಿರಂತರವಾಗಿ ನಡೆಯಲಿದೆ. ಅನ್ನದಾನ ಮಹಾದಾನ ಅಲ್ಲವೇ !
ಅಂತೆಯೇ, ಪುನೀತ್ ನಿವಾಸದ ಬಳಿ ಅಭಿಮಾನಿಗಳಿಗಾಗಿ ಸಿಹಿ ಹಂಚುವ ವ್ಯವಸ್ಥೆ ಕೂಡ ಮಾಡಲಾಗಿದೆ.
ಪುನೀತ್ಗೆ ಶುಭಾಶಯಗಳು. ಮಲೆ ಮಾದೇಶ್ವರ ಅವರಿಗೆ ಒಳ್ಳೆಯದು ಮಾಡಲಿ. ಅಂದಹಾಗೆ, ಪುನೀತ್ರ ಮುಂದಿನ ಸಿನಿಮಾ ಯಾವಾಗ ? ವಿವರಗಳನ್ನು ನಿರೀಕ್ಷಿಸಿ.