Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಾಂಧಿನಗರಕ್ಕೆ ಮತ್ತೆ ಬಂದ ಲೀಲಾವತಿ-ವಿನೋದ್ರಾಜ್
ಗಿಡ, ಹಸಿರು ತರಕಾರಿ, ಸೊಪ್ಪು ಎಂದೆಲ್ಲ ಪುರಸೊತ್ತಿಲ್ಲದೆ ಇಷ್ಟು ದಿನ, ನಟಿ ಲೀಲಾವತಿ ಮತ್ತು ಅವರ ಪುತ್ರ ವಿನೋದ್ರಾಜ್ ದುಡಿಯುತ್ತಿದ್ದರು. ಈಗ ಗಾಂಧಿನಗರಕ್ಕೆ ಅಮ್ಮ-ಮಗನ ಜೋಡಿ ಮರಳಿ ಬಂದಿದೆ. ಅಲ್ಲೊಂದು ಕಛೇರಿ ಆರಂಭಿಸಿದೆ. ಅಷ್ಟು ಮಾತ್ರವಲ್ಲ ತಮ್ಮ ಬ್ಯಾನರ್ನ ಹೊಸ ಚಿತ್ರವನ್ನೂ ಈ ಜೋಡಿ ಘೋಷಿಸಿದೆ.
ಚಿತ್ರದ ಹೆಸರು ‘ಕನ್ನಡ ಕಂದ’. ಹಿಂದೆ ಮಾಡಿದಂತೆಯೇ ತಮ್ಮ ಮಗನ ಹೊಸ ಸಿನಿಮಾಕ್ಕಾಗಿ ಜಮೀನು ಮಾರುತ್ತಿರುವುದಾಗಿ ಲೀಲಾವತಿ, ಸುದ್ದಿಗಾರರಿಗೆ ತಿಳಿಸಿದ್ದಾರೆ.
‘ನನ್ನ ಮಗ ಡ್ಯಾನ್ಸ್ ಚೆನ್ನಾಗಿ ಮಾಡ್ತಾನೆ. ನಟನೆ ಎಲ್ಲಾ ಓಕೆ. ಆದರೆ ಛಾನ್ಸ್ ಮಾತ್ರ ಸಿಕ್ತಾ ಇಲ್ಲ ಯಾಕೆ ಅನ್ನೋದು ಅವರ ಪ್ರಶ್ನೆ. ಚಿತ್ರರಂಗದಲ್ಲಿ ನಮ್ಮನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿದೆ. ಇದ್ಯಾಕೆ? ನಾವೇನ್ ತಪ್ಪು ಮಾಡಿದ್ದೇವೆ ಅನ್ನೋದು ಇನ್ನೊಂದು ಪ್ರಶ್ನೆ.
ನಾನು ಮತ್ತು ವಿನೋದ್ರಾಜ್ ಬಿಟ್ಟರೆ, ಚಿತ್ರದ ತುಂಬ ಹೊಸ ಮುಖಗಳೇ ತುಂಬಿರುತ್ತವೆ. ನಾಯಕಿ ಮಾಧುರಿಯೂ ಸೇರಿದಂತೆ ಬಹುತೇಕ ಹೊಸಮುಖಗಳಿಗೆ, ಚಿತ್ರದಲ್ಲಿ ಅವಕಾಶ ನೀಡುತ್ತಿದ್ದೇವೆ. ಸಿನಿಮಾ ನಮಗೆ ನಲಿವಿಗಿಂತಲೂ ನೋವನ್ನೇ ಜಾಸ್ತಿ ನೀಡಿದೆ. ಆದರೂ ಬಣ್ಣದ ಹಂಬಲ ನಮ್ಮಿಂದ ದೂರವಾಗಿಲ್ಲ ಎಂದರು ಲೀಲಾವತಿ.
‘ಕನ್ನಡ ಕಂದ’ ಚಿತ್ರದ ಕತೆ ಲೀಲಾವತಿ ಅವರದು. ‘ಗೆಜ್ಜೆನಾದ’ ಸಿನಿಮಾ ನಿರ್ದೇಶಕ ವಿಜಯಕುಮಾರ್, ಈ ಚಿತ್ರದ ನಿರ್ದೇಶಕರು. ಹಳೆಯ ಚಿತ್ರಗಳ ಹಾಸ್ಯನಟ ದಿ.ಹನುಮಂತಾಚಾರ್ ಅವರ ಪುತ್ರ ಗುರುನಾಥ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.
ಮುಖಪುಟ / ಸ್ಯಾಂಡಲ್ವುಡ್