Don't Miss!
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜ್ಕುಮಾರ್ ಮನಸ್ಸಿಗೆ ಆಘಾತ
‘ನನಗೆ
ಮಂಡಿನೋವು
ಇರಬಹುದು.
ಆದರೆ
ಮನಸ್ಸಿನಲ್ಲಿ
ಇನ್ನೂ
ಉತ್ಸಾಹ
ಹಾಗೇ
ಇದೆ.
ಚಿತ್ರೋದ್ಯಮದ
ಹಿತಕ್ಕಾಗಿ
ಎಂಥ
ತ್ಯಾಗ
ಬಲಿದಾನಕ್ಕೂ
ಸಿದ್ಧ’.
ವರನಟ
ಡಾ.ರಾಜ್ಕುಮಾರ್
ಹೀಗೆ
ಹೇಳುವಾಗ
ಮಾತಿನಲ್ಲಿ
ವಿಷಾದ
ಮಡುಗಟ್ಟಿತ್ತು.
ಸಿನಿಮಾದ
ಸೌಹಾರ್ದ
ವಾತಾವರಣದ
ಹಸಿರಿನ
ದಿನಗಳನ್ನು
,
ಈ
ಹಿಂದೆ
ತಾವು
ನಡೆಸಿದ
ಹೋರಾಟಗಳನ್ನು
ಅವರು
ಮೆಲುಕು
ಹಾಕಲೂ
ಕಾರಣವಿತ್ತು.
ನಿರ್ಮಾಪಕರು
ಮತ್ತು
ಪ್ರದರ್ಶಕರ
ನಡುವಿನ
ಬಗೆಹರಿಯದ
ಬಿಕ್ಕಟ್ಟು
ಮತ್ತು
ಇದೇ
ನೆವದಲ್ಲಿ
ನಿರ್ಮಾಪಕರ
ಸಂಘ
ಬಿರುಕು
ಬಿಟ್ಟಿರುವುದು
ರಾಜ್
ಮನಸ್ಸಿಗೆ
ಆಘಾತವಾಗಿದೆ.
ತಮ್ಮ ಕೊನೆಯ ಮಗ ಪುನೀತ್ ರಾಜ್ಕುಮಾರ್ ಅಭಿನಯದ ಎರಡನೇ ಚಿತ್ರ ‘ಅಭಿ’ಯ ನೂರು ದಿನದ ಯಶಸ್ವಿ ಓಟವನ್ನು ಬೆಂಗಳೂರಿನಲ್ಲಿ ಮಂಗಳವಾರ (ಆ. 12) ಆಚರಿಸಿದಾಗ ರಾಜ್ಕುಮಾರ್ ಕಳಕಳಿ ಹೊರಗೆ ಬಿತ್ತು.
ತಮ್ಮ ಕಾಲದಲ್ಲಿ ಕಡಿಮೆ ಬಜೆಟ್ಟಿನ ಚಿತ್ರಗಳು ಭರ್ಜರಿಯಾಗಿ ಓಡುತ್ತಿದ್ದುದನ್ನು ಸ್ಮರಿಸಿಕೊಂಡ ರಾಜ್ಕುಮಾರ್, ಇವತ್ತು ಕೋಟಿ ಕೋಟಿ ಸುರಿದರೂ ಮಾರುಕಟ್ಟೆ ಭಣಭಣ ಅನ್ನುತ್ತಿದೆ ಎಂದರು. ದ್ವೇಷ ಅಸೂಯೆಗಳ ಮಡುವಾಗಿರುವ ಸಿನಿಮಾ ಲೋಕದಲ್ಲಿ ಸುಮಧುರ ವಾತಾವರಣವನ್ನು ಟಾರ್ಚು ಹಾಕಿಕೊಂಡು ಹುಡುಕಬೇಕಾಗಿದೆ ಎಂದು ಬೇಜಾರು ತೋಡಿಕೊಂಡರು.
ಸಿನಿಮಾ ಲೋಕಕ್ಕೆ ಒಳ್ಳೆಯದನ್ನು ಮಾಡಲು ತಾವು ಯಾವುದೇ ರೀತಿಯ ತ್ಯಾಗಕ್ಕೆ ಸಿದ್ಧ ಎಂದು ರಾಜ್ ಪದೇಪದೇ ಹೇಳಿದಾಗ ಜೋರು ಚಪ್ಪಾಳೆ. ‘ಅಭಿ’ ಯಶಸ್ಸಿನಲ್ಲಿ ಭಾಗಿಗಳಾಗಲು ಜಯಂತಿ, ರಮೇಶ್, ಸಾಹುಕಾರ್ ಜಾನಕಿ, ಶ್ರೀನಾಥ್, ಕೇಂದ್ರ ವಲಯ ಐಜಿಪಿ ಕೆ. ರವೀಂದ್ರನಾಥ ಠ್ಯಾಗೂರ್ ಮುಂತಾದವರು ಸೇರಿದ್ದರು. ಚಿತ್ರದ 211 ಕಲಾವಿದ/ತಂತ್ರಜ್ಞರಿಗೆ ನೆನಪಿನ ಕಾಣಿಕೆ ಸಲ್ಲಿಸಿದ್ದು ಸಮಾರಂಭದ ವಿಶೇಷ.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್