Don't Miss!
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮದುವೇನಾ, ಥೂ ಇಲ್ಲಪ್ಪಾ - ವಸುಂಧರಾ
*ದಟ್ಸ್ಕನ್ನಡ ಬ್ಯೂರೋ
‘ಲಂಕೇಶ್ ಪತ್ರಿಕೆ’ ನಾಯಕಿ ವಸುಂಧರಾ ದಾಸ್ ಮದುವೆಯಾಗುತ್ತಿದ್ದಾರೆ. ಡೇಟಿನ್ನೂ ಫಿಕ್ಸ್ ಆಗಿಲ್ಲ. ಹುಡುಗ- ಇಟಲಿಯಲ್ಲಿ ಹುಟ್ಟಿ, ಥೈಲ್ಯಾಂಡ್ನಲ್ಲಿ ಬೆಳೆದು, ಬೆಂಗಳೂರಲ್ಲಿ ಓದಿದ ರಾಬರ್ಟೊ ನಾರಾಯಣ್. ಈತ ಆರ್ಯ ಆರ್ಕೆಸ್ಟ್ರಾಗೆ ಡ್ರಂ ಬಾರಿಸುತ್ತಾನೆ.
ವಸುಂಧರಾ ಹಾಗೂ ನಾರಾಯಣ್ ನಡುವೆ ಬಹುದಿನಗಳಿಂದ ಪ್ರೀತಿ ಪ್ರೇಮ ಪ್ರಣಯ ಇತ್ತು ಅಂತ ಕುಟುಂಬದ ಮೂಲಗಳು ಹೇಳುತ್ತಿವೆ. ಉಭಯ ಕುಟುಂಬಗಳೂ ಮದುವೆಗೆ ಹಸಿರು ನಿಶಾನೆ ತೋರಿಸಿರುವುದರಿಂದ ದಾಸ್ಗೆ ಶೀಘ್ರವೇ ಕಂಕಣ ಭಾಗ್ಯ ಅನ್ನೋದು ಸುದ್ದಿ.
ಹೇ ರಾಮ್ ಚಿತ್ರದಲ್ಲಿ ಕಮಲಹಾಸನ್ ಪರಿಚಯಿಸಿದ ವಸುಂಧರಾಗೆ ನಾಯಕಿ ಆಗೋದಕ್ಕಿಂತ ಗಾಯಕಿಯಾಗಿ ಉಳಿಯುವುದೇ ಮೆಚ್ಚು. ಈಕೆಯ ‘ಶಕಲಕ ಬೇಬಿ’ ಹಾಡು ಜನಪ್ರಿಯ ನಾಯಕಿಯನ್ನಾಗಿಸಿತು. ತಮಿಳು, ಬಂಗಾಳಿ ಚಿತ್ರಗಳಲ್ಲೂ ನಟಿಸುವ ಅವಕಾಶಗಳು ಹುಡುಕಿಕೊಂಡು ಬಂದವು. ಯಾವುದೇ ಕಾರಣಕ್ಕೂ ಡಯಟ್ ಮಾಡೋಲ್ಲ ಎಂಬ ಧೋರಣೆಯ ವಸುಂಧರ ನಿಲುವು ‘ಲಂಕೇಶ್ ಪತ್ರಿಕೆ’ಯಲ್ಲಿ ಪರದೆಯ ಅಗಲಕ್ಕೂ ಹರಡಿತ್ತು !
ತನ್ನದೇ ಆದ ಪಾಪ್ ಆಲ್ಬಂ ಕೂಡ ಹೊರತಂದಿರುವ ವಸುಂಧರಾ ಸಂಗೀತದ ಹಲವಾರು ಯೋಜನೆಗಳ ಕನಸುಗಳ ಜೊತೆಗೆ ರಾಬರ್ಟೋ ನಾರಾಯಣ್ರ ಧ್ಯಾನದಲ್ಲಿದ್ದಾರಾ?ಹಾಗಂತ ವಸುಂಧರಾ ದಾಸ್ ಅವರನ್ನು ಕೇಳಿದರೆ, ಮುಖ ಸಿಂಡರಿಸಿಕೊಳ್ಳುತ್ತಾರೆ. ಮದುವೇನೂ ಇಲ್ಲ, ಎಂಥದ್ದೂ ಇಲ್ಲ. ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಅಷ್ಟೆ ಅಂತಾರೆ. ರಾಬರ್ಟೋ ನಾರಾಯಣ್ ಅವರನ್ನು ದಾಸ್ ಪ್ರೀತಿಯಿಂದ ಬಾಬ್ ಅಂತ ಕರೆಯುತ್ತಾರೆ.
ಮುಖಪುಟ / ಸ್ಯಾಂಡಲ್ವುಡ್