Don't Miss!
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
‘ಸೂರ್ಯ’ನ ಅಪ್ಪುಗೆಯಲ್ಲಿ ಜ್ಯೋತಿಕಾ!
ಕನ್ನಡದ ‘ನಾಗರಹಾವು’ ಚಿತ್ರದಲ್ಲಿ ನಟ ಉಪೇಂದ್ರ ಜೊತೆ ಬಳುಕುತ್ತ ಅಭಿನಯಿಸಿದ್ದ ನಟಿ ಜ್ಯೋತಿಕಾ, ದಾಂಪತ್ಯ ಪ್ರವೇಶಿಸಿದ್ದಾರೆ. ಎಲ್ಲಾ ಮದುವೆಯಾದ ನಟಿಯರಂತೆ, ಅಭಿನಯಕ್ಕೆ ಜ್ಯೋತಿಕಾ ವಿದಾಯ ಹೇಳುವರೇ ಎಂಬ ಸಂಗತಿ ಇನ್ನೂ ಪ್ರಕಟಗೊಂಡಿಲ್ಲ.
ಚೆನ್ನೈನಲ್ಲಿ ನಡೆದ ಸರಳ ವಿವಾಹ ಸಮಾರಂಭದಲ್ಲಿ ತಮಿಳುನಟ ಸೂರ್ಯ (ನಟ ಶಿವಕುಮಾರ್ರ ಪುತ್ರ)ಅವರನ್ನು ಬಾಳಸಂಗಾತಿಯಾಗಿ ಜ್ಯೋತಿಕಾ ಸ್ವೀಕರಿಸಿದರು. ಮುಖ್ಯಮಂತ್ರಿ ಎಂ.ಕರುಣಾನಿಧಿ, ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ, ನಟ ರಜನಿಕಾಂತ್, ಕಮಲಹಾಸನ್ ಸೇರಿದಂತೆ ಅನೇಕ ಗಣ್ಯರು, ನೂತನ ವಧುವರರಿಗೆ ಶುಭಕೋರಿದರು.
ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆಯಲ್ಲಿರುವ ಸೂರ್ಯ ಮತ್ತು ಜ್ಯೋತಿಕಾ ನಡುವಿನ ಗಾಳಿಸುದ್ದಿಗಳಿಗೆ ಮದುವೆಯಿಂದ ತೆರೆಬಿದ್ದಿದೆ. ಹೊಸ ತಾರಾ ಜೋಡಿಗೆ ಶುಭವಾಗಲಿ. ಅಂದ ಹಾಗೇ ಜ್ಯೋತಿಕಾ, ನಟಿ ನಗ್ಮಾಳ ಸಹೋದರಿ.
ನಗ್ಮಾ ಮದುವೆ ಸುದ್ದಿಯೂ ಎಲ್ಲೆಡೆ ಚಾಲ್ತಿಯಲ್ಲಿದೆ. ಈ ಬಗ್ಗೆ ನಗ್ಮಾ ಮೌನವಹಿಸಿದ್ದಾರೆ. ಮೌನಂ ಸಮ್ಮತಿ ಲಕ್ಷಣಂ ಎಂದು ಭಾವಿಸಿರುವ ಪಡ್ಡೆಗಳು ‘ಅಕ್ಕ ನಿನ್ ಗಂಡ ಹೆಂಗಿರಬೇಕು’ ಎಂದು ಮುಂಬೈನಲ್ಲಿ ಕೇಳುತ್ತಿದ್ದಾರಂತೆ!