Don't Miss!
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- News Realme Narzo 70: ಭರ್ಜರಿ ಕ್ಯಾಮೆರಾ ಫೀಚರ್ಗಳೊಂದಿಗೆ ರಿಯಲ್ಮಿ ನಾರ್ಜೊ 70 ಗ್ರ್ಯಾಂಡ್ ಲಾಂಚ್
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೌನಿ, ಸಿಂಗಾರೆವ್ವನಿಗೂ ಗೌರವ
- ವಿಶಾಖ ಎನ್.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಿತ್ರಗಳಾದ ‘ಸಿಂಗಾರೆವ್ವ ಮತ್ತು ಅರಮನೆ’ ಹಾಗೂ ‘ಮೌನಿ’ ರಾಜ್ಯ ಪ್ರಶಸ್ತಿ ಪಟ್ಟಿಯಲ್ಲಿ ಅವಗಣನೆಗೆ ಗುರಿಯಾಗಿರುವುದರ ಬಗ್ಗೆ ಸಿನಿಮಾ ಪತ್ರಕರ್ತರ ಸಂಘ ‘ಬಳಗ’ ಗುರುವಾರ (ಡಿ. 11) ಸಚಿವರ ಗಮನ ಸೆಳೆದಾಗ, ವೀರಭದ್ರಪ್ಪ ಅದಕ್ಕೆ ಸ್ಪಂದಿಸಿದರು.
ಬಳ್ಳಾರಿಯಲ್ಲಿ ಇದೇ ತಿಂಗಳ 27ನೇ ತಾರೀಕು ನಡೆಯಲಿರುವ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಎರಡೂ ಚಿತ್ರಗಳನ್ನು ಗೌರವಿಸುವುದಾಗಿ ಅಲ್ಲಂ ಹೇಳಿದರು. ಇದೇ ವರ್ಷದಿಂದ ಸಾಧನೆ ಮಾಡಿರುವ ಸಿನಿಮಾ ಪತ್ರಕರ್ತರೊಬ್ಬರನ್ನು ಗುರುತಿಸಿ ಪ್ರಶಸ್ತಿ ಕೊಡುವುದಾಗಿಯೂ ಅವರು ತಿಳಿಸಿದರು.
ಸಿನಿಮಾ ಪತ್ರಕರ್ತರಿಗೆ ವಾರ್ತಾ ಇಲಾಖೆಯ ಮಾನ್ಯತೆ ದೊರಕಿಸಿಕೊಡುವ ಬಗ್ಗೆ ಪರಿಶೀಲಿಸುವುದಾಗಿಯೂ ಅಲ್ಲಂ ಭರವಸೆ ಕೊಟ್ಟರು. ರೀಮೇಕ್ ಚಿತ್ರಗಳಿಗೆ ಪ್ರಶಸ್ತಿ ಕೊಡುವುದು ಸುತಾರಾಂ ಬೇಡ ಎಂಬ ‘ಬಳಗ’ದ ಆಗ್ರಹಕ್ಕೆ ಪ್ರತಿಕ್ರಿಯಿಸಿದ ವೀರಭದ್ರಪ್ಪ, ಇದರ ಒಳಿತು- ಕೆಡಕುಗಳ ಬಗ್ಗೆ ಚರ್ಚಿಸಲಾಗುತ್ತಿದೆ. ಸದ್ಯದಲ್ಲೇ ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು.
ಎಡದಿಂದ ಬಲಕ್ಕೆ : ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ರೈ ( ಉದಯವಾಣಿ), ಸದಾಶಿವ ಶೆಣೈ ( ಲಂಕೇಶ್ ಪತ್ರಿಕೆ), ಉದಯಕುಮಾರ್ ( ಪ್ರಜಾವಾಣಿ) , ಪ್ರೇಂಕುಮಾರ್ ಹರಿಯಬ್ಬೆ ( ಪ್ರಜಾವಾಣಿ) , ಬಳಗದ ಅಧ್ಯಕ್ಷ ಗಿರೀಶ್ ರಾವ್ (ಜೋಗಿ-ಕನ್ನಡಪ್ರಭ), ಕೆ. ಎಂ.ವೀರೇಶ್ ( ಚಿತ್ರಲೋಕ ಡಾಟ್ಕಾಂ), ಉದಯ ಮರಕಿಣಿ ( ಕನ್ನಡಪ್ರಭ), ಕೆ. ಎಚ್. ಸಾವಿತ್ರಿ ( ಸಂಯುಕ್ತ ಕರ್ನಾಟಕ) ಸಚಿವರನ್ನು ಭೇಟಿ ಮಾಡಿದ ಪತ್ರಕರ್ತರು.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್