ನಾನೇ ಬೇರೆ... ನನ್ನ ಸ್ಟೈಲೇ ಬೇರೆ... -ಗುರುಪ್ರಸಾದ್
- ‘ಮಠ’ ಬಂದ ಮೇಲೆ ಏನಾಯಿತು?
- ಜಗ್ಗೇಶ್ಗೆ ಪೋಷಕ ನಟ ಪ್ರಶಸ್ತಿ ಬಂದಿದೆ. ಚಿತ್ರದಲ್ಲಿ ಅವರು ನಾಯಕರಾ? ಪೋಷಕ ನಟರಾ?
- ನಿಮ್ಮ ಹೊಸ ಚಿತ್ರ ‘ಎದ್ದೇಳು ಮಂಜುನಾಥ’ . ಈ ಸಿನಿಮಾ ಬಗ್ಗೆ ಹೇಳಿ...
- ಚಿತ್ರದ ಕತೆ ಏನು?
ಭಾರತ-ಜಪಾನ್ಗೆ ವ್ಯತ್ಯಾಸವಿದೆ. ಅಲ್ಲಿ ಒಂದು ಗಂಟೆ ಹೆಚ್ಚಿಗೆ ದುಡಿದು, ದೇಶಕ್ಕೆ ಒಳ್ಳೆಯದಾಯಿತು ಎನ್ನುತ್ತಾರೆ. ಇಲ್ಲಿ ಯಾಕೆ ದುಡಿಯಬೇಕು ಎನ್ನುತ್ತಾರೆ. ಅಪ್ಪ-ಅಮ್ಮನ ಆಸ್ತಿ ನಂಬಿ ಬದುಕುವ ಜನ. ಕೆಲಸ ಶ್ರೇಷ್ಠ ಎಂಬ ಕಲ್ಪನೆ ನಮ್ಮಲ್ಲಿ ಬಂದಿಲ್ಲ. ಹೀಗಾಗಿ ಪ್ರಗತಿ ಕಷ್ಟ. ಇಂತಹ ಅಂಶಗಳೆಲ್ಲವೂ ಚಿತ್ರದಲ್ಲಿರುತ್ತವೆ.
- ಈಗಿನ ಸಿನಿಮಾಗಳ ಬಗ್ಗೆ ಏನನ್ನುವಿರಿ? ನೀವು ಬೇರೆಯವರಿಗಿಂತಲೂ ಹೇಗೆ ಭಿನ್ನ?
ಕರುಣಾ ರಸ ಭಾರತಕ್ಕೆ ಸೀಮಿತ. ಅದನ್ನು ಸೃಷ್ಟಿಸುವುದು ಸುಲಭ. ಅದೇ ಅಪರೂಪದ ಭಾವಗಳಾದ ರೋಮಾಂಚಕ, ವಿಚಾರಪೂರ್ಣ, ಥ್ರಿಲ್, ಸ್ಫೂರ್ತಿದಾಯಕ ಚಿತ್ರಗಳ ನಿರ್ಮಾಣ ಕಷ್ಟ. ಇಂಥ ಚಿತ್ರ ಮಾಡುವುದೇ ನಿರ್ದೇಶಕರ ಕೆಲಸ.
ಈಗಿನ ನಿರ್ಮಾಪಕರು ಮತ್ತು ನಿರ್ದೇಶಕರು, ಇರುವ ಮಾರುಕಟ್ಟೆಯನ್ನು ಕುಲಕೆಡಿಸುತ್ತಿದ್ದಾರೆ. ನಾನು ಇಲ್ಲದ ಮಾರುಕಟ್ಟೆಯನ್ನು ಸೃಷ್ಟಿಸುತ್ತೇನೆ(ಗುರು ಮಾತಲ್ಲಿ ಆತ್ಮವಿಶ್ವಾಸ ತುಂಬಿತುಳುಕುತ್ತಿತ್ತು).
ನನ್ನ ಮೊದಲ ಚಿತ್ರ ಪಿವಿಆರ್ನಲ್ಲಿ ಆರು ವಾರ ಪ್ರದರ್ಶನ ಕಂಡಿದೆ. ಕನ್ನಡ ಚಿತ್ರಗಳಿಂದ ದೂರವಿರುವ ಸಂಪಿಗೆ ಟಾಕೀಸ್ನಲ್ಲಿ ನಾಲ್ಕು ವಾರ ಓಡಿದೆ. ಎಲ್ಲರ ಪ್ರಶಂಸೆ ಸಿಕ್ಕಿದೆ. ಇಷ್ಟು ಸಾಕು ನನಗೆ.
- ರೀಮೇಕ್ ಅಂದ್ರೆ ಏನು? ಅದು ಬೇಕಾ? ಬೇಡ್ವಾ?
ಏಳು ಜ್ಞಾನಪೀಠ, ರಾಜ್ಕುಮಾರ್, ಪುಟ್ಟಣ ಕಣಗಾಲ್ರನ್ನು ಹೊಂದಿದ ನಮ್ಮ ಚಿತ್ರರಂಗ ಗತಿಗೆಟ್ಟಂತೆ ವರ್ತಿಸಬಾರದು. ಯಾವುದೋ ಒಂದು ಚಿತ್ರ ಹಿಟ್ ಆದರೆ ಎಲ್ಲಾ ಚಿತ್ರಗಳು ಹಿಟ್ ಆಗುವುದಿಲ್ಲ. ಕುರಿ ಬಿದ್ದ ಜಾಡು ಎಂಬಂತೆ ಆಗಬಾರದು. ಇಲ್ಲಿ ಸ್ವಂತಿಕೆಗೆ ಬೆಲೆಯೇ ಇಲ್ಲವೇ? ರೀಮೇಕ್ ಸಿನಿಮಾಗಳು ಸಿನಿಮಾಗಳೇ ಅಲ್ಲ. ನಾನು ರೀಮೇಕ್ ವಿರೋಧಿ. ಕ್ರಿಯಾಶೀಲತೆ ಇರುವಂಥದ್ದೇ ನಿಜವಾದ ಸಿನಿಮಾ.
- ಚಿತ್ರರಂಗದೊಳಗಿನ ಸದ್ಯದ ಬಿಕ್ಕಟ್ಟು-ಇಕ್ಕಟ್ಟಿಗೆ ನೀವು ಸೂಚಿಸುವ ಪರಿಹಾರ?
ಹಣ ಮಾಡುವುದಷ್ಟೇ ಒಳ್ಳೆಚಿತ್ರ ಎಂಬ ನಂಬಿಕೆ ನಮ್ಮವರಲ್ಲಿದೆ. ಚಿತ್ರ ನಿರ್ಮಾಣ ವ್ಯವಹಾರವಾಗಿದೆ. ಲಾಭವಷ್ಟೇ ಮುಖ್ಯವಾಗಿದೆ. ನಿರ್ಮಾಪಕ, ಹಂಚಿಕೆದಾರ, ಹೂಡಿಕೆದಾರ(ಫೈನಾನ್ಸಿಯರ್), ನಾಯಕ ಎಂಬ ನಾನಾ ಪಾತ್ರಗಳನ್ನು ಒಬ್ಬನೇ ವ್ಯಕ್ತಿ ಮಾಡಲು ಹೋದಾಗ, ಇಂತಹ ಕಗ್ಗಂಟುಗಳು ನಿರ್ಮಾಣವಾಗುತ್ತವೆ. ವೃತ್ತಿಪರತೆಯ ಕೊರತೆ ನಮ್ಮವರಿಗಿದೆ.
- ಮತ್ತೇನಾದ್ರೂ ವಿಶೇಷ... ?
ಗುರು ಅವರಿಗೆ ಹಾಯ್ ಹೇಳಬೇಕೇ? ಅವರ ಇ-ಮೇಲ್ ವಿಳಾಸಗಳು ಇಲ್ಲಿವೆ :
[email protected]
[email protected]


Click it and Unblock the Notifications