Don't Miss!
- Lifestyle ದೇಹದಲ್ಲಿ ಈ 7 ಭಾಗದಲ್ಲಿ ಊತ ಉಂಟಾದರೆ ಅದು ಫ್ಯಾಟಿ ಲಿವರ್ನ ಲಕ್ಷಣವಾಗಿದೆ, ನಿರ್ಲಕ್ಷ್ಯ ಮಾಡಬೇಡಿ
- Finance ನೀರಿನ ಬಿಕ್ಕಟ್ಟು: ಬೆಂಗಳೂರು ತೊರೆಯಲು ಮುಂದಾದ ಅನೇಕ ನಿವಾಸಿಗಳು!
- Technology ಇಂದು ಒನ್ಪ್ಲಸ್ನ ಈ ಸ್ಪೆಷಲ್ ಮೊಬೈಲ್ನ ಫಸ್ಟ್ ಸೇಲ್!..ಬೆಲೆ ಎಷ್ಟು ಅಂತೀರಾ?
- News ಚಾಮರಾಜನಗರ: 12 ವರ್ಷಗೊಳಿಗೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಎಲ್ಲರನ್ನೂ ಬಯ್ಯೋದೇ ವಿಶೇಷ.!-ಬೈಗಳು ಹೇಗಿರುತ್ತವೆ ಗೊತ್ತಾ?
- Automobiles ಭಾರತದ ರಸ್ತೆಯಲ್ಲಿ ಘರ್ಜಿಸಲು ಬಂದ ಪವರ್ಫುಲ್ ಎಪ್ರಿಲಿಯಾ ಬೈಕ್ ವಿತರಣೆ ಮಾಹಿತಿ ಬಹಿರಂಗ
- Sports ಆರ್ಸಿಬಿ ಸ್ಟಾರ್ ಶ್ರೇಯಾಂಕಾ ಪಾಟೀಲ್ ಬಗ್ಗೆ ನಿಮಗೆಷ್ಟು ಗೊತ್ತು?; ಶಿಕ್ಷಣ, ವಯಸ್ಸು, ಕೌಟುಂಬಿಕ ಹಿನ್ನೆಲೆ ಬಗ್ಗೆ ಮಾಹಿತಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿಂಪೋನಿಯಲ್ಲಿ ದುಬಯ್ ಬಾಬು
ಶೈಲೇಂದ್ರ ಪ್ರೊಡಕ್ಷನ್ಸ್ ಲಾಂಛನದಲ್ಲಿ ಖ್ಯಾತ ನಿರ್ಮಾಪಕ ಶೈಲೇಂದ್ರ ಬಾಬು ನಿರ್ಮಿಸುತ್ತಿರುವ 'ದುಬಯ್ ಬಾಬು' ಚಿತ್ರಕ್ಕೆ ಸಂಗೀತ ನಿರ್ದೇಶಕ ವಿ.ಶ್ರೀಧರ್ ಸಾರಥ್ಯದಲ್ಲಿ ಹಿನ್ನಲೆ ಸಂಗೀತ ಪ್ರಕ್ರಿಯೆ ನಗರದ ಸಿಂಪೋನಿ ಸ್ಟುಡಿಯೋದಲ್ಲಿ ನಡೆಯುತ್ತಿದೆ.
ಕಳೆದ ವಾರ ಹೈದರಾಬಾದ್ನ ಪ್ರಸಿದ್ಧ ಆಡಿಯೋ ಸಂಸ್ಥೆ ಆದಿತ್ಯ ಮ್ಯೂಸಿಕ್ ಹೊರತಂದ ಚಿತ್ರದ ಧ್ವನಿಸುರುಳಿಗಳು ಮಾರುಕಟ್ಟೆಯಲ್ಲಿ ಭರದಿಂದ ಮಾರಾಟವಾಗುತ್ತಿದೆ. ಖರ್ಚಿನಲ್ಲಿ ಎಲ್ಲರಿಂದ ದುಬಾರಿ ಬಾಬು ಎಂದು ಕರೆಯಲ್ಪಡುತ್ತಿರುವ ಈ ದುಬಯ್ ಬಾಬು ಗುಣಮಟ್ಟದಲ್ಲೂ ಸಿರಿವಂತ.
ನಾಯಕ ಉಪೇಂದ್ರ ಈ ಚಿತ್ರದಲ್ಲಿ 16ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ವಿಶೇಷವಾದರೆ, ನಿರ್ಮಾಪಕ ಶೈಲೇಂದ್ರ ಬಾಬು, ನಿರ್ದೇಶಕ ನಾಗಣ್ಣ ಹಾಗೂ ನಾಯಕ ಉಪೇಂದ್ರ ಸಂಗಮದ ಮೂರನೇ ಚಿತ್ರ ಯಶಸ್ಸು ಕಾಣುವುದೇ ಎಂಬ ಕಾತುರ ಎಲ್ಲರಲ್ಲೂ ಮನೆ ಮಾಡಿದೆ. ಹಿಂದೆ ಈ ತ್ರಿವಳಿಗಳ 'ಗೌರಮ್ಮ, 'ಕುಟುಂಬ ಚಿತ್ರಗಳು ಭರ್ಜರಿ ಯಶಸ್ಸು ಕಂಡಿದ್ದು ಗಮನಾರ್ಹ ಸಂಗತಿ.
ಉಪೇಂದ್ರ, ನಿಖಿತಾ, ಸಲೋನಿ, ಕುಮಾರ್ ಗೋವಿಂದ್, ಆರ್ಯನ್ ವೈದ್, ಸುಂದರರಾಜ್, ರಾಜೇಶ್, ದ್ವಾರಕೀಶ್, ಸೂರ್ಯ ಪಲ್ಲಕ್ಕಿ, ಎಂ.ಎಸ್.ಉಮೇಶ್ ಚಿತ್ರದ ತಾರಾಗಣದಲ್ಲಿದ್ದಾರೆ. ನಾಗಣ್ಣ ಚಿತ್ರಕತೆ ಬರೆದು ನಿರ್ದೇಶಿಸುತ್ತಿರುವ 'ದುಬಯ್ ಬಾಬು ಚಿತ್ರಕ್ಕೆ ಮುಂಬೈನ ಅನಿಲ್ ಜವೇರಿ ಅವರ ಛಾಯಾಗ್ರಹಣವಿದೆ. 'ಮುಸ್ಸಂಜೆ ಮಾತು ಖ್ಯಾತಿಯ ವಿ.ಶ್ರೀಧರ್ ಅವರ ಸಂಗೀತ, ಗೋವರ್ದನ್ ಸಂಕಲನ, ಥ್ರಿಲ್ಲರ್ ಮಂಜು ಸಾಹಸ, ಅಣ್ಣಯ್ಯ ಕಲೆ, ಕೇಶವಾದಿತ್ಯ ಸಂಭಾಷಣೆ, ತ್ರಿಭುವನ್ ನೃತ್ಯ, ಪ್ರಶಾಂತ್ ಸಹ ನಿರ್ದೇಶನ, ಮುರುಳಿ ನಿರ್ಮಾಣ ನಿರ್ವಹಣೆಯಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ದುಬಯ್
ಬಾಬು
ಚಿತ್ರದ
ಹಾಡುಗಳು
ಹೇಗಿವೆ?
ಹದಿನೇಳರ
ಗೆಟಪ್ಪಿನಲ್ಲಿ
ಸೂಪರ್
ಸ್ಟಾರ್
ಉಪೇಂದ್ರ
ಕರ್ನಾಟಕಕ್ಕೆ
ಕಾಲಿಟ್ಟ
ಆಂಧ್ರ
ಆಡಿಯೋ
ಕಂಪನಿ
ದುಬೈ
ಬಾಬುನಲ್ಲಿ
ಒಂದಾದ
ಉಪೇಂದ್ರ,ಗೋವಿಂದ