Don't Miss!
- News ಹಾಸನದ ಬೀದಿಗಳಲ್ಲಿ ಚೆಲ್ಲಾಡುತ್ತಿರುವ ಪೆನ್ಡ್ರೈವ್ ಬಗ್ಗೆ ಹೇಳಿ? ಹೆಚ್ಡಿ ಕುಮಾರಸ್ವಾಮಿಗೆ ಕಾಂಗ್ರೆಸ್ ಪ್ರಶ್ನೆ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮರುಕಳಿಸಿದ ಮಿನುಗು ತಾರೆ ಕಲ್ಪನಾ ನೆನಪು
ಬೆಳ್ಳಿ ಮೋಡ, ಗೆಜ್ಜೆ ಪೂಜೆ, ಹಣ್ಣೆಲೆ ಚಿಗುರಿದಾಗ, ಶರಪಂಜರ, ಉಯ್ಯಾಲೆ, ಎರಡು ಕನಸು, ಕರುಳಿನ ಕರೆ, ದೇವರ ಮಕ್ಕಳು, ಬಯಲು ದಾರಿ, ಕಪ್ಪು ಬಿಳುಪು...ಚಿತ್ರಗಳನ್ನು ನೋಡಿದಾಗ ಈ ದುರಂತ ನಾಯಕಿಯ ನಟನಾ ಪ್ರೌಢಿಮೆ ಇಂದಿಗೂ ಅದ್ಭುತ ಎನ್ನಿಸುತ್ತದೆ. ಬಿ ಆರ್ ಪಂತುಲು ಅವರ 'ಸಾಕು ಮಗಳು'ಚಿತ್ರದ ಮೂಲಕ ಕಲ್ಪನಾ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ಎಸ್ ಆರ್ ಪುಟ್ಟಣ್ಣ ಕಣಗಾಲ್ ಅವರ ಮಾಂತ್ರಿಕ ಸ್ಪರ್ಶದ 'ಬೆಳ್ಳಿ ಮೋಡ'ಚಿತ್ರದ ಮೂಲಕ ಮಿನುಗು ತಾರೆಯಾಗಿ ಹೆಸರಾದರು. ಒಂದು ದಶಕಕ್ಕೂಹೆಚ್ಚು ಕಾಲ ಕನ್ನಡ ಚಿತ್ರರಂಗ ಕಲ್ಪನಾರಿಗೆ ನಂಬರ್ 1 ಪಟ್ಟದಲ್ಲಿ ಕೂರಿಸಿತ್ತು.
ಬೆಂಗಳೂರಿನ ಫ್ರೆಜರ್ ಟೌನ್ ನಲ್ಲಿ ವಾಸವಾಗಿದ್ದ ಕಲ್ಪನಾ ಅವರ ಮನೆ ಕಲಾತ್ಮಕ ಬದುಕಿಗೆ ಕನ್ನಡಿ ಹಿಡಿಯುವಂತಿತ್ತು. ಇದೇನು ಸಭ್ಯತೆ...ಇದೇನು ಸಂಸ್ಕೃತಿ ಎಂದು ಹಾಡಿದ ಗೀತೆ ಅವರ ಬಾಳಿನಲ್ಲಿ ನಿಜವಾಗಲಿಲ್ಲ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು. ಅವರ ವೈಯಕ್ತಿಕ ಬದುಕು ಅದೇನೇ ಇರಲಿ, ಬಯಲು ದಾರಿ ಚಿತ್ರದಲ್ಲಿ ಅನಂತನಾಗ್ ಹಾಡಿದ ಎಲ್ಲಿರುವೆ...ಮನವ ಕಾಡುವ ರೂಪಸಿಯೇ...ಎಂಬ ಹಾಡು ಮಾತ್ರ ಸದಾ ಕಲ್ಪನಾ ಅವರ ನೆನಪನ್ನು ಕಾಡದೆ ಬಿಡುವುದಿಲ್ಲ. ಅಂತಹ ನಟಿಯ ಬಗ್ಗೆ ಇಂದಿನ ತಾರೆಗಳು ಏನನ್ನುತ್ತಾರೆ?
ರಕ್ಷಿತಾ: ಭಾರತೀಯ ಚಿತ್ರರಂಗ ಇದುವರೆಗೂ ಕಲ್ಪನಾರಂತಹ ಪ್ರತಿಭಾವಂತ ನಟಿಯನ್ನು ಖಂಡಿಲ್ಲ. ತನ್ನ ಪಾತ್ರ ಪೋಷಣೆಯಲ್ಲಿ ಅದ್ಭುತ ಪ್ರೌಢಿಮೆ ಮೆರೆದಂತಹ ನಟಿ. ಹಾಗಾಗಿಯೇ ಜನ ಇಂದಿಗೂ ಅವರನ್ನು ನೆನಪಿಟ್ಟುಕೊಂಡಿದ್ದಾರೆ. ನನ್ನ ಮಟ್ಟಿಗೆ 'ಶರಪಂಜರ'ಚಿತ್ರ ಇಂದಿಗೂ ಅತ್ಯುತ್ತಮ ಚಿತ್ರ.ಈ ಚಿತ್ರವನ್ನು ನಾನು ಎಷ್ಟು ಇಷ್ಟಪಟ್ಟಿದ್ದೇನೆ ಎಂದರೆ ಆ ಪಾತ್ರವನ್ನು ನಾನೂ ಮಾಡಬೇಕು ಎಂಬಷ್ಟು.
ವಿನಯಾ ಪ್ರಸಾದ್: ಕಲ್ಪನಾ ಅವರ ಎಲ್ಲ ಪಾತ್ರಗಳು ರೋಚಕ ಮತ್ತು ರಮ್ಯವಾಗಿದ್ದವು. ಅವರು ನಮ್ಮಂತಹ ಕಲಾವಿದರಿಗೆ ಇಂದಿಗೂ ಮಾದರಿ.ಬೆಳ್ಳಿ ಮೋಡ, ಗೆಜ್ಜೆ ಪೂಜೆ ಚಿತ್ರಗಳು ನನಗಿಷ್ಟ. ಶರಪಂಜರ ಚಿತ್ರದ ಅವರ ಪಾತ್ರ ನನ್ನನ್ನು ಸದಾ ಕಾಡುತ್ತಿರುತ್ತದೆ. ಆ ಪಾತ್ರ ಎಂತಹ ಕಲಾವಿದರಿಗೂ ಸವಾಲಿದ್ದಂತೆ. ಆ ರೀತಿ ನಟಿಸುವುದು ಅಷ್ಟು ಸುಲಭವಲ್ಲ. ನನ್ನ ಜೀವನದಲ್ಲಿ ಒಮ್ಮೆಯಾದರೂ ಆ ರೀತಿಯ ಪಾತ್ರ ಮಾಡಬೇಕು ಎಂದು ಹಂಬಲಿಸುತ್ತಿದ್ದೇನೆ.
ಪೂಜಾಗಾಂಧಿ: ಕಲ್ಪನಾ ಅವರು ಪ್ರತಿಭಾವಂತ ನಟಿ. ಚಿತ್ರರಂಗಕ್ಕೆ ಬರುವ ಹೊಸಬರಿಗೆ ಗೆಜ್ಜೆ ಪೂಜೆ ನೋಡಲು ನಾನು ಯಾವಾಗಲೂ ಸಲಹೆ ನೀಡುತ್ತಿರುತ್ತೇನೆ. ಪಾತ್ರ ಪೋಷಣೆಗಾಗಿ ಅವರು ತನ್ನನ್ನು ತಾನು ತೊಡಗಿಸಿಕೊಳ್ಳುತ್ತಿದ್ದ ರೀತಿ, ಅಚ್ಚುಕಟ್ಟಾದ ನಿರ್ವಹಣೆಯನ್ನು ಕೇಳಿ ತಿಳಿದುಕೊಂಡಿದ್ದೇನೆ. ಅವರು ಅಭಿನಯಿಸಿರುವ ಯಾವುದೇ ಚಿತ್ರದಲ್ಲಿ ನಾನೂ ನಟಿಸಬೇಕೆಂಬ ಆಸೆ ಇದೆ.
ಭಾವನಾ ರಾವ್: ಕಲ್ಪನಾ ಅವರನ್ನುನೆನಸಿಕೊಂಡಾಗಲೆಲ್ಲಾ ಗೆಜ್ಜೆ ಪೂಜೆ ನೆನಪಾಗುತ್ತದೆ. ಅವರ ನಟನೆ ಸಹಜ ಸುಂದರವಾಗಿರುತ್ತಿತ್ತು. ಅವರ ಪಾತ್ರಗಳನ್ನು ಮಾಡುವುದೆಂದರೆ ನಿಜಕ್ಕೂ ಒಂದು ದೊಡ್ಡ ಸವಾಲು.
ನೀತೂ: ನನ್ನ ಮೆಚ್ಚಿನ ಹಳೆ ತಾರೆಗಳಲ್ಲಿ ಕಲ್ಪನಾ ಅವರಿಗೆ ಮೊದಲ ಸ್ಥಾನ. ಒಂದು ವೇಳೆ ಚಾನ್ಸ್ ಸಿಕ್ಕಿದರೆ ಅವರ ಎಲ್ಲ ಪಾತ್ರಗಳಲ್ಲೂ ನಟಿಸುತ್ತೇನೆ. ಮುಖ್ಯವಾಗಿ ಹೇಳಬೇಕಾದರೆ ಬೆಳ್ಳಿಮೋಡ, ಬಯಲು ದಾರಿ, ಎರಡು ಕನಸು ಹಾಗೆಯೇ ಗೆಜ್ಜೆ ಪೂಜೆ ಚಿತ್ರಗಳು ನನ್ನನ್ನು ಯಾವಗಲೂ ಕಾಡುತ್ತಿರುತ್ತವೆ.
ಇದನ್ನೂ
ಓದಿ
ಧ್ವನಿಸುರುಳಿಯಾಗಿ
ರಜನಿಕಾಂತ್
ಕನ್ನಡ
ಕೃತಿ!
ಶತಕ
ಬಾರಿಸಿದ
ಅಂಬಾರಿ;
ರು.5
ಕೋಟಿ
ಲಾಭ!
ಸದ್ಯಕ್ಕೆ
ಬೀಸೋದೊಣ್ಣೆಯಿಂದ
ಪಾರಾದ
ಶ್ರುತಿ!