Don't Miss!
- Sports ಟಿ20 ವಿಶ್ವಕಪ್ 2024: ಟೀಮ್ ಇಂಡಿಯಾಗೆ ದೊಡ್ಡ ಚಿಂತೆಯಾದ ಈ ಆರಂಭಿಕನ ಫಾರ್ಮ್
- Technology iPhone: ಐಫೋನ್ 16 ಸರಣಿಯ ಕ್ಯಾಮೆರಾ ಫೀಚರ್ಸ್ ಲೀಕ್! ಏನೆಲ್ಲಾ ವಿಶೇಷತೆ ಇವೆ?..
- News Tamarind Fruit Juice: ಬಾಯಾರಿಕೆ ನೀಗಿಸಲು ಹುಣಸೆ ಹಣ್ಣಿನ ಪಾನಕ ಪರಿಚಯಿಸಿದ ಆಯುಷ್ ಇಲಾಖೆ, ಮಾಡುವುದು ಹೇಗೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಕ್ಕಳ ಫ್ಯಾನ್ 'ನಮ್ಮಣ್ಣ ಡಾನ್' ರಮೇಶ್ ಅರವಿಂದ್
ಇದು ನಿಜಕ್ಕೂ ಹೌದು. ಖ್ಯಾತ ನಟ, ನಿರ್ದೇಶಕ ರಮೇಶ್ ಅರವಿಂದ್ ಅವರ 'ನಮ್ಮಣ್ಣ ಡಾನ್' ಮಕ್ಕಳಿಗೆಲ್ಲಾ ಬಿಡುಗಡೆಗೆ ಮುಂಚೆಯೇ ಸಖತ್ ಸಂತೋಷ ನೀಡಿ ಅವರೆಲ್ಲರು ಚಿತ್ರದ ಫ್ಯಾನ್ ಆಗಿ ಬಿಟ್ಟಿದ್ದಾರೆ. ಕಳೆದ ವಾರ ಒಂದು ವಿಶೇಷ ಸಂದರ್ಭವನ್ನು ಈ ಚಿತ್ರಕ್ಕಾಗಿ ಕಲ್ಪಿಸಲಾಯಿತು.
800 ಮಕ್ಕಳನ್ನು ಒಟ್ಟಾರೆ ಸೇರಿಸಿ ಅವರುಗಳಿಂದ 'ನಮ್ಮಣ್ಣ ಡಾನ್' ನಿಮಗೆ ಹೇಗೆ ಅನ್ನಿಸುತ್ತದೆ ಎಂಬುದನ್ನು ಗ್ರಹಿಸಿ ಮಕ್ಕಳಿಗಾಗಿಯೇ ವಿಶೇಷ ಸಿನಿಮಾ ಪೋಸ್ಟರ್ ತಯಾರಿಸುವುದು ನಿರ್ದೇಶಕರ ಹಂಬಲ. ಮಕ್ಕಳ ಮನಸ್ಸಿನಲ್ಲಿ ಚಿತ್ರದ ಬಗ್ಗೆ ಏನಿದೆ ಎಂದು ತಿಳಿದುಕೊಳ್ಳವುದಕ್ಕೂ ಮುಂಚೆ ಜಾಣ ನಟ, ನಿರ್ದೇಶಕ ರಮೇಶ್ ಅರವಿಂದ್ ಚಿತ್ರದ ಕಿರುಪರಿಚಯವನ್ನು ನೀಡುವುದರ ಜೊತೆಗೆ ಸುಮಾರು 40 ಮಕ್ಕಳ ಜೊತೆಯಲ್ಲಿ ಹೃದಯ ಚಿಕಿತ್ಸೆ ಮಾಡುವ ವೈದ್ಯರ ಪಾತ್ರದಲ್ಲಿ ತಾವು ಅಭಿನಯಿಸಿರುವುದಾಗಿ ಹೇಳಿಕೊಂಡರು.
ಈ ಆಧಾರದ ಮೇಲೆ 800 ಮಕ್ಕಳು ಮಲ್ಲೇಶ್ವರದಲ್ಲಿ ಶನಿವಾರ (ಡಿ.10) ಸೇರಿದ್ದ ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯವನ್ನು ವ್ಯಕ್ತ ಮಾಡಿದ್ದಾರೆ. 'ಹೆಲ್ತ್ ಕೇರ್ ಫಾರ್ ಪೀಪಲ್ ಫಸ್ಟ್, ಪ್ರಾಫಿಟ್ ನೆಕ್ಸ್ಟ್' ಎಂಬುದು ಚಿತ್ರದ ಘೋಷ ವಾಕ್ಯ.
ಈಗಾಗಲೇ ನಮ್ಮಣ್ಣ ಡಾನ್ ಅಂತರ್ಜಾಲದಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದಿದ್ದು ಚಿತ್ರದ ಬರುವಿಕೆಗಾಗಿ ಎಲ್ಲರೂ ಕಾಯುತ್ತಿದ್ದಾರೆ. ಲವ್ಕುಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರವಿಜೋಶಿ ಅವರು ನಿರ್ಮಿಸಿರುವ 'ನಮ್ಮಣ್ಣ ಡಾನ್' ಹಾಸ್ಯ ಪ್ರಧಾನ ಚಿತ್ರದ ನಿರ್ದೇಶನವನ್ನೂ ರಮೇಶ್ ಅವರೇ ಮಾಡಿದ್ದಾರೆ. ಮೋನಾಪರವರೇಶ್, ಸನಾತನಿ, ರಾಜುತಾಳಿಕೋಟೆ, ಎಂ.ಎಸ್.ಉಮೇಶ್, ಅಚ್ಯುತಕುಮಾರ್, ರಾಜೇಂದ್ರಕಾರಂತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಮ್ಯಾಥ್ಯೂಸ್ ಮನು ಸಂಗೀತ ನೀಡಿರುವ 'ನಮ್ಮಣ್ಣ ಡಾನ್'ಗೆ ಕೃಷ್ಣಕುಮಾರ್ ಅವರ ಛಾಯಾಗ್ರಹಣವಿದೆ. ಸೌಂದರ್ರಾಜ್ ಸಂಕಲನವಿರುವ ಈ ಚಿತ್ರಕ್ಕೆ ರಮೆಶ್ಅರವಿಂದ್ ಹಾಗೂ ಡಿ.ಬಿ.ಚಂದ್ರಶೇಖರ್ ಸಂಭಾಷಣೆ ಬರೆದಿದ್ದಾರೆ. ರಮೇಶ್ ದೇಸಾಯಿ ಕಲಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. (ಒನ್ಇಂಡಿಯಾ ಕನ್ನಡ)