Don't Miss!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫಿಲಂ ಚೇಂಬರ್ನಲ್ಲಿ ನಕಲಿ ಸಿಡಿಗಳ ಮಾರಣಹೋಮ
ರೇಸ್ ಕೋರ್ಸ್ ರಸ್ತೆಯಲ್ಲಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಬುಧವಾರ(ಜ.12) ಮಟ ಮಟ ಮಧ್ಯಾಹ್ನ ಒಂದು ಅಚ್ಚರಿ ಕಾದಿತ್ತು. ನಕಲಿ ಸಿಡಿ, ಡಿವಿಡಿಗಳನ್ನು ತಂದು ರಾಶಿ ಹಾಕಲಾಗಿತ್ತು. ಫಿಲಂ ಚೇಂಬರ್ ಏನಾದರೂ ಕುಟುಕು ಕಾರ್ಯಾಚರಣೆ ನಡೆಸಿತ್ತೇ ಎಂಬ ಅನುಮಾನದ ನಡುವೆ ಇನ್ನೊಂದು ಅಚ್ಚರಿ ಕಾದಿತ್ತು!
ಕನ್ನಡ ಚಿತ್ರರಂದ ಮಟ್ಟಿಗೆ ಇದೊಂದು ಅದ್ಭುತ ಬೆಳವಣಿಗೆ ಎಂದೇ ಹೇಳಬೇಕು. ನಕಲಿ ಆಡಿಯೋ, ವಿಡಿಯೋ ಸಿಡಿಗಳನ್ನು ತಯಾರಿಸುತ್ತಿದ್ದವರೇ ಗೃಹ ಸಚಿವ ಆರ್ ಅಶೋಕ್ ಬಳಿ ಬಂದು ಶರಣಾಗಿದ್ದಾರೆ. ಇವರೆಲ್ಲಾ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬಂದು ರಾಶಿ ರಾಶಿ ನಕಲಿ ಸಿಡಿಗಳನ್ನು ಹಿಂತಿರುಗಿಸಿದರು.
ನಕಲಿ ಸಿಡಿ ಹಾವಳಿಯಿಂದ ಮುಖ್ಯವಾಗಿ ಮೈಸೂರು ಭಾಗದ ನಿರ್ಮಾಪಕರಿಗೆ ಭಾರಿ ಹೊಡೆತ ಬಿದ್ದಿತ್ತು. ಪೈರಸಿ ದಂಧೆಯಲ್ಲಿ ಭಾಗಿಯಾಗಿದ್ದ ಇವರೆಲ್ಲಾ ಸ್ವ್ವಯಂಪ್ರೇರಿತರಾಗಿ ಶರಣಾಗಿರುವುದು ಇಡೀ ಕನ್ನಡ ಚಿತ್ರದ್ಯೋಮವನ್ನು ಮೂಕವಿಸ್ಮಯಗೊಳಿಸಿದೆ. "ತಮ್ಮ ತಪ್ಪು ಈಗ ಅರಿವಾಗಿದೆ. ಇನ್ನು ಮುಂದೆ ಈ ಲುಚ್ಚಾ ಕೆಲಸ ಮಾಡಲ್ಲ" ಎಂದು ಅವರೆಲ್ಲಾ ಅಶೋಕ್ ಮುಂದೆ ತಮ್ಮ ತಪ್ಪನ್ನು ಒಪ್ಪಿಕೊಂಡರು.
ಕನ್ನಡ ಹಾಗೂ ವಿವಿಧ ಭಾಷೆಯ ಸರಿಸುಮಾರು 20,000ಕ್ಕೂ ಅಧಿಕ ನಕಲಿ ಡಿವಿಡಿಗಳನ್ನು ಆರ್ ಅಶೋಕ್, ಕೆಎಫ್ ಸಿಸಿ ಅಧ್ಯಕ್ಷ ಬಸಂತ ಕುಮಾರ್ ಪಾಟೀಲ್ ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಮುಂದೆ ನಾಶಪಡಿಸಲಾಯಿತು. ಈ ಬೆಳವಣಿಗೆಯನ್ನು ಸಚಿವರು ಸ್ವಾಗತಿಸಿದರು.
ಪೈರಸಿಯನ್ನು ತಡೆಗಟ್ಟಲು ಗೂಂಡಾ ಕಾಯಿದೆ ಜಾರಿಗೆ ತರಲು ರಾಜ್ಯ ಸರ್ಕಾರವೇನೋ ಮುಂದಡಿಯಿಟ್ಟಿದೆ. ಆದರೆ ಕೇಂದ್ರ ಸರಕಾರದಆದೇಶಕ್ಕಾಗಿ ಕಾಯಲಾಗುತ್ತಿದೆ. ಈ ಬಗ್ಗೆ ಕೇಂದ್ರ ಸರಕಾರ ಶೀಘ್ರ ಸ್ಪಂದಿಸುವಂತೆ ವಿನಂತಿಸಿಕೊಳ್ಳುವುದಾಗಿ ಅಶೋಕ್ ತಿಳಿಸಿದರು.
ಬೆಂಗಳೂರಿನಲ್ಲಿ ಫೆಬ್ರವರಿ 4ರಿಂದ 6ರವೆಗೆ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ನುಡಿಹಬ್ಬಕ್ಕೆ ಸಿನಿಮಾ ತಾರೆಗಳನ್ನು ಆಹ್ವಾನಿಸಲು ಕೆಎಫ್ಸಿಸಿ ಕಚೇರಿಗೆ ಅಶೋಕ್ ಬಂದಿದ್ದರು. ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಲ್ಲೂರು ಪ್ರಸಾದ್ ಉಪಸ್ಥಿತರಿದ್ದರು. [ಪೈರಸಿ]