Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಿಮ್ಮಪ್ಪನ ಲಾಡುಗಿಂತ ಡಾ.ರಾಜ್ ಲಾಡು ರುಚಿ, ಏನಂತೀರಿ?
ಬಂಗಾರದ ಪಂಜರ ಚಿತ್ರದಲ್ಲಿ ರಾಜಕುಮಾರ್ ಲಾಡು ತಿನ್ನುವ ಒಂದು ಸನ್ನಿವೇಶವಿದೆ. ಈ ಚಿತ್ರದ ಚಿತ್ರೀಕರಣದ ನಂತರ ಅಣ್ಣಾವ್ರಿಗೆ ಲಾಡು ಎಂದರೆ ಪಂಚಪ್ರಾಣವಾಯಿತಂತೆ. ಮೊದಲೇ ರಾಜ್ ಅಭಿಮಾನಿಯಾಗಿರುವ ಸದಾಶಿವ ರಾವ್ ತಮ್ಮ ಪಾಕದ ಮನೆಯಲ್ಲಿ ಡಾ.ರಾಜ್ ಲಾಡು ತಯಾರಿಸಿ ಅಣ್ಣಾವ್ರ ಮನೆಗೆ ಹೋಗಿ ಅವರಿಗೆ ವಿನಯಪೂರ್ವಕವಾಗಿ ನೀಡಿದರಂತೆ.
ಅಂದಿನಿಂದ ನಾನು ಅಣ್ಣಾವ್ರ ಅಭಿಮಾನಿಯಾದರೆ ಅವರು ನಾನು ತಯಾರಿಸುವ ಲಾಡುವಿನ ಅಭಿಮಾನಿ ಆದರು. ಹೀಗಾಗಿ ಇದಕ್ಕೆ ಡಾ.ರಾಜ್ ನಾಮಕರಣ ಆಯಿತು ಎಂದು ರಾವ್ ಭಾವುಕರಾಗಿ ಹೇಳುತ್ತಾರೆ.
ಈ ಲಾಡು ತಿರುಪತಿ ತಿಮ್ಮಪ್ಪನ ಲಾಡುಗಿಂತ ರುಚಿ. ಇದನ್ನು ರಾಜ್ ಅವರ ಜನ್ಮದಿನದಂದು ಉಚಿತವಾಗಿ ಅಭಿಮಾನಿಗಳಿಗೆ ವಿತರಿಸುತ್ತೇನೆ ಎಂದು ಹೆಮ್ಮೆಯಿಂದ ಹೇಳುವ ರಾವ್, ಇಂದಿಗೂ ರಾಜ್ ಕುಟುಂಬ ತಮ್ಮ ಈ ಲಾಡುಗಳನ್ನು ತಪ್ಪದೆ ಖರೀದಿಸುತ್ತಿದೆ ಎನ್ನುತ್ತಾರೆ.
ಡಾ. ರಾಜ್ ಲಾಡು ಮತ್ತು ಮೈಸೂರು ಪಾಕ್ ಈ ಅಂಗಡಿಯ ಸ್ಪೆಷಲ್ ಐಟಂ. ಈ ಲಾಡುಗಳನ್ನು ಬೆಂಗಳೂರು ಮೂಲದ ಹಲವು ಅನಿವಾಸಿ ಭಾರತೀಯರು ಕೊಂಡೊಯ್ಯುತ್ತಿದ್ದು, ವಿದೇಶದಲ್ಲೂ ಈ ಲಾಡು ಮೂಲಕ ಅಣ್ಣಾವ್ರ ಸವಿ ಸವಿ ನೆನಪು ಮತ್ತೆ ಮತ್ತೆ ಮೂಡುತ್ತದೆ ಎಂದು ಸದಾಶಿವ ರಾವ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅಂದ ಹಾಗೆ, ಈ ಅಂಗಡಿ ಚಾಮರಾಜಪೇಟೆಯ ಈದ್ಗಾ ಮೈದಾನದ ಎದುರಿಗಿದೆ. ನೀವೂ ಒಂದು ಸಲ ಟ್ರೈ ಮಾಡಿ ಮತ್ತೆ.