Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತಿಮ್ಮಪ್ಪನ ಲಾಡುಗಿಂತ ಡಾ.ರಾಜ್ ಲಾಡು ರುಚಿ, ಏನಂತೀರಿ?
ಬಂಗಾರದ ಪಂಜರ ಚಿತ್ರದಲ್ಲಿ ರಾಜಕುಮಾರ್ ಲಾಡು ತಿನ್ನುವ ಒಂದು ಸನ್ನಿವೇಶವಿದೆ. ಈ ಚಿತ್ರದ ಚಿತ್ರೀಕರಣದ ನಂತರ ಅಣ್ಣಾವ್ರಿಗೆ ಲಾಡು ಎಂದರೆ ಪಂಚಪ್ರಾಣವಾಯಿತಂತೆ. ಮೊದಲೇ ರಾಜ್ ಅಭಿಮಾನಿಯಾಗಿರುವ ಸದಾಶಿವ ರಾವ್ ತಮ್ಮ ಪಾಕದ ಮನೆಯಲ್ಲಿ ಡಾ.ರಾಜ್ ಲಾಡು ತಯಾರಿಸಿ ಅಣ್ಣಾವ್ರ ಮನೆಗೆ ಹೋಗಿ ಅವರಿಗೆ ವಿನಯಪೂರ್ವಕವಾಗಿ ನೀಡಿದರಂತೆ.
ಅಂದಿನಿಂದ ನಾನು ಅಣ್ಣಾವ್ರ ಅಭಿಮಾನಿಯಾದರೆ ಅವರು ನಾನು ತಯಾರಿಸುವ ಲಾಡುವಿನ ಅಭಿಮಾನಿ ಆದರು. ಹೀಗಾಗಿ ಇದಕ್ಕೆ ಡಾ.ರಾಜ್ ನಾಮಕರಣ ಆಯಿತು ಎಂದು ರಾವ್ ಭಾವುಕರಾಗಿ ಹೇಳುತ್ತಾರೆ.
ಈ ಲಾಡು ತಿರುಪತಿ ತಿಮ್ಮಪ್ಪನ ಲಾಡುಗಿಂತ ರುಚಿ. ಇದನ್ನು ರಾಜ್ ಅವರ ಜನ್ಮದಿನದಂದು ಉಚಿತವಾಗಿ ಅಭಿಮಾನಿಗಳಿಗೆ ವಿತರಿಸುತ್ತೇನೆ ಎಂದು ಹೆಮ್ಮೆಯಿಂದ ಹೇಳುವ ರಾವ್, ಇಂದಿಗೂ ರಾಜ್ ಕುಟುಂಬ ತಮ್ಮ ಈ ಲಾಡುಗಳನ್ನು ತಪ್ಪದೆ ಖರೀದಿಸುತ್ತಿದೆ ಎನ್ನುತ್ತಾರೆ.
ಡಾ. ರಾಜ್ ಲಾಡು ಮತ್ತು ಮೈಸೂರು ಪಾಕ್ ಈ ಅಂಗಡಿಯ ಸ್ಪೆಷಲ್ ಐಟಂ. ಈ ಲಾಡುಗಳನ್ನು ಬೆಂಗಳೂರು ಮೂಲದ ಹಲವು ಅನಿವಾಸಿ ಭಾರತೀಯರು ಕೊಂಡೊಯ್ಯುತ್ತಿದ್ದು, ವಿದೇಶದಲ್ಲೂ ಈ ಲಾಡು ಮೂಲಕ ಅಣ್ಣಾವ್ರ ಸವಿ ಸವಿ ನೆನಪು ಮತ್ತೆ ಮತ್ತೆ ಮೂಡುತ್ತದೆ ಎಂದು ಸದಾಶಿವ ರಾವ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅಂದ ಹಾಗೆ, ಈ ಅಂಗಡಿ ಚಾಮರಾಜಪೇಟೆಯ ಈದ್ಗಾ ಮೈದಾನದ ಎದುರಿಗಿದೆ. ನೀವೂ ಒಂದು ಸಲ ಟ್ರೈ ಮಾಡಿ ಮತ್ತೆ.