Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಣ್ಣು ಕೊಟ್ಟ ‘ಬೇಡರ ಕಣ್ಣಪ್ಪ’ : ಇಬ್ಬರು ಅಂಧರಿಗೆ ಬೆಳಕು
ಬೆಂಗಳೂರು : ರಾಜ್ಕುಮಾರ್ ಜೀವಂತವಾಗಿ ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಬಯಕೆಯ ಪರಿಣಾಮ, ಅವರ ಕಣ್ಣುಗಳು ನಮ್ಮೊಂದಿಗೆ ಉಳಿದಿವೆ!
ನಿಧನದ ನಂತರ ತಮ್ಮ ಕಣ್ಣುಗಳನ್ನು ದೃಷ್ಟಿಹೀನರಿಗೆ ಅಳವಡಿಸಬೇಕೆಂಬ ರಾಜ್ ಬಯಕೆ ಕಾರ್ಯರೂಪಕ್ಕೆ ಬಂದಿದೆ. ಅವರ ವಿಚಾರಪೂರ್ಣ ಮುಂದಾಲೋಚನೆಯಿಂದ ಇಬ್ಬರು ಅಂಧರು ಗುರುವಾರ ದೃಷ್ಟಿ ಪಡೆದಿದ್ದಾರೆ.
ನಾರಾಯಣ ನೇತ್ರಾಲಯದ ವೈದ್ಯರು, ರಾಜ್ ನಿಧನದ ನಂತರ ಬುಧವಾರ 3.15ರ ಸುಮಾರಿನಲ್ಲಿ ಎರಡೂ ಕಣ್ಣುಗಳನ್ನು ಸಂಗ್ರಹಿಸಿದರು. ಅವರ ಕಣ್ಣುಗಳನ್ನು ಗುರುವಾರ ಬಾಲಕ(15) ಮತ್ತು ವೃದ್ಧ(55)ನಿಗೆ ವೈದ್ಯರು ಕಸಿ ಮಾಡಿದ್ದಾರೆ.
ಶಿವನಿಗೆ ತಮ್ಮ ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ಕಣ್ಣುಕೊಟ್ಟಿದ್ದ ರಾಜ್, ತಮ್ಮ ನಿಜ ಬದುಕಿನಲ್ಲೂ ಕಣ್ಣಪ್ಪನ ಮನಸ್ಥಿತಿಯನ್ನು ಬಿಂಬಿಸಿದ್ದಾರೆ.
ಬಯಕೆ : ತಮ್ಮ ಕಡೆಯ ಅವಧಿಯನ್ನು ಹುಟ್ಟೂರಾದ ಗಾಜನೂರಿನಲ್ಲಿ ಕಳೆಯಲು ರಾಜ್ ನಿರ್ಧರಿಸಿದ್ದರು. ತಮ್ಮ ಜೀವಿತಾವಧಿಯಲ್ಲಿ ಮಾನಸ ಸರೋವರ ಕಾಣುವ ಆಸೆ ಸಹಾ ಅವರಿಗಿತ್ತು. ಆದರೆ ಈ ಎರಡು ಬಯಕೆಗಳು ಬಯಕೆಗಳಾಗಿಯೇ ಉಳಿದಿವೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್