Don't Miss!
- Automobiles Bangaluru: ನಮ್ಮ ಯಾತ್ರಿ ಕ್ಯಾಬ್ ಸೇವೆ ಆರಂಭ.. ಎಷ್ಟಿದೆ ದರ?
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- News ಚಾಮರಾಜನಗರ: ಚೊಂಬುಗಳ ಪಾರ್ಟಿ ಕಾಂಗ್ರೆಸ್
- Lifestyle ಮಸಾಲ ಭರಿತ ಬಿಸಿ ಬಿಸಿ ಪೊಂಗಲ್ ಮಾಡೋದು ಹೇಗೆ..? ಏನಿದರ ರೆಸಿಪಿ?
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶರಣೆಂಬೆ ಜಾನಕಿಗೆ! ಶರಣೆಂಬೆ ಕಲಾಸರಸ್ವತಿಗೆ!ಎಸ್.ಜಾನಕಿ ಗಾನಸಾಮ್ರಾಜ್ಯಕ್ಕೆ ಭರ್ತಿ ಐವತ್ತು!
ಒಂದಲ್ಲ
ಎರಡಲ್ಲ,
ನೂರಲ್ಲ..
ಸಾವಿರವಲ್ಲ..
20ಸಾವಿರ!
ಹೌದು
20ಸಾವಿರ
ಹಾಡುಗಳ
ಹಾಡಿದ
ಗಾನಕೋಗಿಲೆ;
ಎಸ್.ಜಾನಕಿ.
ತಮ್ಮ
ಸುಮಧುರ
ಕಂಠದಿಂದ
ಕೇಳುಗರ
ಹೃದಯ
ಕದ್ದವರು
ಅವರು.
ಜಾನಕಿ
ಗಾನಲೋಕ
ಪ್ರವೇಶಿಸಿ
ಏ.4ಕ್ಕೆ
ಭರ್ತಿ
ಐವತ್ತು
ವರ್ಷಗಳು
ತುಂಬಿವೆ.
ಈ
ಹಿನ್ನೆಲೆಯಲ್ಲಿ
ಕಲಾಸರಸ್ವತಿಯ
ಸಾಧನೆಗೆ
ನಮ್ಮೆಲ್ಲರ
ಅಕ್ಷರ
ಚಪ್ಪಾಳೆ.
- ಮೀರಾ ಕೃಷ್ಣ, ಕ್ಯಾಲಿಫೋರ್ನಿಯ
ಪೆಂಡ್ಯಾಲ ನಾಗೇಶ್ವರರಾವ್ ಅವರ ಸಂಗೀತ ನಿರ್ದೇಶನದಲ್ಲಿ ‘ಶ್ರೀ ಕೃಷ್ಣಗಾರುಡಿ’ ಚಿತ್ರಕ್ಕಾಗಿ ಪೆಂಡ್ಯಾಲ ನಾಗೇಶ್ವರರಾವ್ ಅವರೊಂದಿಗೇ ಹಾಡಿದ ‘ಭಲೇ ಭಲೇ ಗಾರುಡಿ ಬರುತಿಹ ನೋಡಿ’ ಎಂಬ ಶೀರ್ಷಿಕೆ ಗೀತೆಯಿಂದ ಅವರ ಪಯಣ, ಕನ್ನಡ ಚಿತ್ರರಂಗದಲ್ಲಿ ಆರಂಭವಾಯಿತು. ಈ 50 ವರ್ಷಗಳಲ್ಲಿ ಈ ಗಾಯಕಿಯ ಸಾಧನೆ ಅಪಾರ. ಅದರಲ್ಲೂ ನಮ್ಮ ಕನ್ನಡ ಚಿತ್ರರಂಗಕ್ಕೆ ಇವರು ಸಲ್ಲಿಸಿರುವ ಸೇವೆ ಶ್ಲಾಘನೀಯ.
ಇವರು ಹಾಡಿರುವ ಅನೇಕ ಜನಪ್ರಿಯ ಗೀತೆಗಳಲ್ಲಿ ಒಂದಕ್ಕಿಂತ ಒಂದು ಆಣಿಮುತ್ತುಗಳು. ಅದರಲ್ಲಿ ‘ನಂದಾದೀಪ’ ಚಿತ್ರದ ‘ಗಾಳಿಗೋಪುರಾ ನಿನ್ನಾಶಾತೀರ’, ‘ಪ್ರೇಮಕ್ಕೂ ಪರ್ಮಿಟ್ಟೆ’ ಚಿತ್ರದ ‘ಎಚ್ಚರವಿರಬೇಕು ಮೈಯಲಿ ಎಚ್ಚರವಿರಬೇಕು’, ‘ನವಜೀವನ’ ಚಿತ್ರದ ‘ಕರೆಯೇ ಕೋಗಿಲೇ ಮಾಧವನಾ’,‘ಉಪಾಸನೆ ಚಿತ್ರದ ‘ಭಾರತ ಭೂಷಿರ ಮಂದಿರ ಸುಂದರಿ’, ‘ಬಯಲು ದಾರಿ’ ಚಿತ್ರದ ‘ಬಾನಲ್ಲು ನೀನೇ ಭುವಿಯಲ್ಲು ನೀನೇ’, ಮತ್ತು ‘ಹೇಮಾವತಿ’ ಚಿತ್ರದ ‘ಶಿವ ಶಿವ ಎನ್ನದ ನಾಲಿಗೆ ಏಕೆ’ ಇತ್ಯಾದಿ ಇತ್ಯಾದಿ.. ಯಾವ ಹಾಡಿಗಾದರೂ ಅದರ ಅರ್ಥಕ್ಕೆ ತಕ್ಕಂತೆ ಭಾವ ತುಂಬಿ ಹಾಡುವುದರಲ್ಲಿ ಎತ್ತಿದ ಕೈ ಅವರದು.
ಆ ಹಾಡು ಭಕ್ತಿಗೀತೆಯಾಗಲಿ, ಪ್ರಣಯಗೀತೆಯಾಗಲಿ ಅಥವಾ ಶೋಕಗೀತೆಯಾಗಿರಲಿ ಅದಕ್ಕೆ ತಕ್ಕಂತೆ ಹಾಡುವುದರಲ್ಲಿ ನಿಸ್ಸೀಮರು. ನಿರ್ಭಾವ ಮುಖದಿಂದ ಮೈಕ್ ಮುಂದೆ ನಿಂತು ಆ ಗೀತೆಗೆ ಮಾತ್ರ ಭಾವ ತುಂಬುತ್ತಾರೆ.
ಇವರು 50ರ ದಶಕದ ಪೆಂಡ್ಯಾಲ ನಾಗೇಶ್ವರರಾವ್ ಅವರಿಂದ ಮೊದಲುಗೊಂಡು 90ರ ದಶಕದ ಹಂಸಲೇಖಾರವರ ತನಕ ಎಲ್ಲಾ ಖ್ಯಾತ ಸಂಗೀತ ನಿರ್ದೇಶನದಲ್ಲೂ ಹಾಡಿದ್ದಾರೆ. ಸರಾಸರಿ 15ಕ್ಕೂ ಹೆಚ್ಚು ಭಾಷೆಗಳಲ್ಲಿ ಸುಮಾರು 20,000 ಹಾಡುಗಳನ್ನು ಹಾಡಿರುವ ಖ್ಯಾತಿ ಇವರದು. ನಾಲ್ಕು ಬಾರಿ ರಾಷ್ಟಪ್ರಶಸ್ತಿಗಳನ್ನು ಪಡೆದಿರುವ ಇವರು ತೆಗೆದುಕೊಂಡ ರಾಜ್ಯ ಪ್ರಶಸ್ತಿಗಳು ಲೆಕ್ಕವಿಲ್ಲದಷ್ಟು.
ಕೇರಳ ರಾಜ್ಯಸರ್ಕಾರದಿಂದ 14, ತಮಿಳುನಾಡು ಸರ್ಕಾರದಿಂದ 7, ಮತ್ತು ಆಂಧ್ರಪ್ರದೇಶದಿಂದ ಕೂಡ 10 ಬಾರಿ ರಾಜ್ಯಪ್ರಶಸ್ತಿಗಳನ್ನು ಪಡೆದಿದ್ದಾರೆ. ಇದಲ್ಲದೆ ತಮಿಳುನಾಡಿನ ಶ್ರೇಷ್ಠ ಪ್ರಶಸ್ತಿ ಎನಿಸಿದ ‘ಕಲೈಮಾಮಣಿ’ ಮತ್ತು, ‘ಸುರ್ ಸಿಂಗಾರ್’ ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದಾರೆ.