Don't Miss!
- Finance ಬಾಬಾ ರಾಮ್ದೇವ್ಗೆ ಖುದ್ದು ಹಾಜರಾಗುವಂತೆ ಖಡಕ್ ಸೂಚನೆ ನೀಡಿದ ಸುಪ್ರೀಂ ಕೋರ್ಟ್
- News Bengaluru Peripheral Ring Road: 73 ಕಿಲೋ ಮೀಟರ್ ಯೋಜನೆಗೆ ಬಿಡ್ ಮಾಡಿದ್ದು ಕೇವಲ ಒಂದೇ ಕಂಪನಿ .!-ವೆಚ್ಚ ಎಷ್ಟು?
- Lifestyle ಈರುಳ್ಳಿ ಹಾಕದೆ 3 ಪದಾರ್ಥ ಹಾಕಿ 5 ನಿಮಿಷದಲ್ಲಿ ಚಟ್ನಿ ಮಾಡಬಹುದು.! ಇಲ್ಲಿದೆ ರೆಸಿಪಿ
- Automobiles ಭರ್ಜರಿ ಮೈಲೇಜ್, ಬಹುಬೇಡಿಕೆಯ ಮಾರುತಿ ಕಾರಿನ ಮೇಲೆ ಭರ್ಜರಿ ಡಿಸ್ಕೌಂಟ್
- Sports ಜೆರ್ಸಿ ನಂ.18, ವಿರಾಟ್ ಕೊಹ್ಲಿ ಜೊತೆಗಿನ ಹೋಲಿಕೆ ಬಗ್ಗೆ ಸ್ಮೃತಿ ಮಂಧಾನ ಹೇಳಿದ್ದೇನು?
- Technology Lenovo: ಲೆನೊವೊದಿಂದ ಎಐ ಚಾಲಿತ ಲೀಜನ್ ಗೇಮಿಂಗ್ ಲ್ಯಾಪ್ಟಾಪ್ಗಳು ಲಾಂಚ್; ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭೂಗತ ಲೋಕದಿಂದ ಪದೇ ಪದೇ ಬಂದ ಅನಾಮಧೇಯ ಕರೆ
ಭೂಗತ ಲೋಕದ ಎಡಬಿಡದ ನೆರಳು ಬಾಲಿವುಡ್ ಬಗಲಲ್ಲೇ ಇನ್ನೂ ಇದೆ ಅನ್ನೋದಕ್ಕೆ ಇದು ತಾ-ಜಾ ನಿದರ್ಶನ- 'ಬಾಬಾ" ಚಿತ್ರೀಕರಣಕ್ಕೆಂದು ಚೆನ್ನೈಗೆ ನಿಗದಿತ ಶೆಡ್ಯೂಲ್ಗೆ ನಟಿ ಮೊನಿಷಾ ಕೊಯಿರಾಲ ಏನಾದರೂ ಹೋಗಿದ್ದಿದ್ದರೆ, ಇಷ್ಟೊತ್ತಿಗೆ ಅವರ ಅಪಹರಣವಾಗಿರುತ್ತಿತ್ತು !
ವಾರಗಳ ಹಿಂದೆಯೇ ರೂಪಿತವಾಗಿದ್ದ ಈ ಕಿಡ್ನ್ಯಾಪ್ ಪ್ಲಾಟ್ ವಾಸನೆ ಪೊಲೀಸರಿಗೆ ಈಗ ಹೊಡೆದಿದೆ. ಮೊನಿಷಾ ಒತ್ತಡ ಎಷ್ಟರ ಮಟ್ಟಿಗಿತ್ತು ಅನ್ನೋದು ಇದರಿಂದ ಗೊತ್ತಾಗುತ್ತದೆ. ಯಾವುದೋ ಅನಾಮಧೇಯ ಫೋನು ಕರೆಯಾಂದು ಮೊನಿಷಾಗೆ ಪದೇ ಪದೇ ಬರತೊಡಗಿತ್ತು. ಹುಷಾರಾದ ಮೊನಿಷಾ, 'ಬಾಬಾ" ಶೂಟಿಂಗ್ ಶೆಡ್ಯೂಲನ್ನು ಮೂರು ದಿನ ಹಿಂದಕ್ಕೆ ಹಾಕಿಕೊಂಡು, ಬೇಗ ಕೆಲಸ ಮುಗಿಸಿ ಬಂದರು. ಅಷ್ಟೂ ಕೆಲಸವನ್ನು ಮಾಡುವಾಗ ಅವರು ಉಸಿರನ್ನು ಬಿಗಿ ಹಿಡಿದಿದ್ದರು. ಅಪಹರಣದ ಆತಂಕದಿಂದ ಪಾರಾಗಿ ಬಂದವರೇ ಹೇಗೋ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಈಗ ಅವರಿಗೆ ಪೊಲೀಸರ ಸರ್ಪಗಾವಲು.
ಅಪಹರಣದ ಹುನ್ನಾರ ಹೂಡಿದ್ದು ಯಾರು ಅಂತ ಪೊಲೀಸರು ಪತ್ತೆ ಮಾಡುತ್ತಿದ್ದಾರೆ. ರಿkುೕ ಟಿವಿಯ 'ಸವಾಲ್ ದಸ್ ಕರೋಡ್ ಕಾ" ಎಂಬ ಫ್ಲಾಪ್ ಕಾರ್ಯಕ್ರಮದಲ್ಲಿ ಮೊನಿಷಾ ಕಂಡಾಪಟ್ಟೆ ದುಡ್ಡು ಮಾಡಿದ್ದಾರೆಂಬ ಕಾರಣಕ್ಕೇ ಅದರ ಮೇಲೆ ಭೂಗತ ಲೋಕದವರು ಕಣ್ಣಿಟ್ಟಿದ್ದಾರೆ ಎಂಬುದು ಪೊಲೀಸರ ಶಂಕೆ. ಈಗಲೂ ಮೊನಿಷಾ ಅಪಹರಣದ ಬೆದರಿಕೆಯಲ್ಲೇ ಇದ್ದಾರೆ !