Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಂಜುನಾಥ್ ನಿರ್ದೇಶನದ ಚಿತ್ರದಲ್ಲಿ ಇಂದ್ರಜಿತ್ ನಾಯಕ!
ರಣಧೀರಚಿತ್ರದ ಏನ್ ಹುಡ್ಗಿರೋ, ಇದ್ಯಾಕಿಂಗೆ ಆಡ್ತೀರೋ? ಹಾಡಿನಲ್ಲಿ ಮಿಂಚಿದ್ದ ಮಾಸ್ಟರ್ ಮಂಜುನಾಥ್, ಈಗ ಮಿಸ್ಟರ್ ಮಂಜುನಾಥ್! ಅವರು ಕೊನೆಗೂ ತಮ್ಮ ಅಜ್ಞಾತವಾಸ ಮುಗಿಸಿ, ಬಣ್ಣದ ಬದುಕಿಗೆ ಮರಳಿದ್ದಾರೆ! ಆದರೆ ನಟರಾಗಿ ಅಲ್ಲ, ನಿರ್ದೇಶಕರಾಗಿ..
ಅಶೋಕ್ ಖೇಣಿ ಅವರ ನೈಸ್ ಕಂಪನಿಯಲ್ಲಿ ಒಳ್ಳೆ ಉದ್ಯೋಗ ಮಾಡುತ್ತಾ, ಸಮಾಧಾನ(?)ದ ಸಂಬಳ ಎಣಿಸುತ್ತಿರುವ ಮಂಜುನಾಥ್ ತಲೆಯಲ್ಲಿ, ಹತ್ತಾರು ಯೋಜನೆ ಮತ್ತು ಯೋಚನೆಗಳಿವೆ. ಅವುಗಳಲ್ಲಿ ಮೊದಲ ಯೋಜನೆ ಕಾರ್ಯರೂಪಕ್ಕೆ ಬರುತ್ತಿದೆ. ಅಂದ ಹಾಗೆ ಮಂಜುನಾಥ್ ನಿರ್ದೇಶಿಸಲಿರುವ ಚಿತ್ರದ ನಾಯಕ; ಇಂದ್ರಜಿತ್ ಲಂಕೇಶ್!
ಚಿತ್ರದ ಬಗ್ಗೆ ಇಂದ್ರಜಿತ್ ಮತ್ತು ಮಂಜುನಾಥ್ ಶುಕ್ರವಾರ ಚರ್ಚೆ ನಡೆಸಿ, ಅಂತಿಮ ರೂಪುರೇಷೆಗಳನ್ನು ಸಿದ್ಧ ಪಡಿಸಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಉಪೇಂದ್ರ, ಪ್ರೇಮ್ ಮತ್ತಿತರ ನಿರ್ದೇಶಕರು ನಾಯಕರಾದ ಉದಾಹರಣೆಗಳು ಸ್ಯಾಂಡಲ್ವುಡ್ನಲ್ಲಿವೆ. ಆ ಸಾಲಿಗೆ ಹೊಸ ಸೇರ್ಪಡೆ ಇಂದ್ರಜಿತ್ ಲಂಕೇಶ್. ಚಿತ್ರದಲ್ಲಾದರೂ ಇಂದ್ರಜಿತ್ರ ಇಳಿಜಾರಿನ ಬೋಳುತಲೆಯಲ್ಲಿ ಕೂದಲು ಮೊಳಕೆ ಹೊಡೆಯಲಿ!
ಈ ಬೆಳವಣಿಗೆ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.