Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೌಂದರ್ಯದ ಬಗ್ಗೆ ಅತಿ ಕಾಳಜಿಯನ್ನು ತೋರುವ ಸಿನಿಮಾ
'ನಾನು
ನರ್ಷಕ್ಕೆ
ನಾಲ್ಕು
ಬಾರಿ
ರಕ್ತದಾನ
ಮಾಡುತ್ತೇನೆ!"
-
ತಾರಾ
ಇದು ಸಿನಿಮಾ ಡೈಲಾಗಲ್ಲ . ಡೈಲಾಗ್ ಡೆಲಿವರಿಯಾದದ್ದು ಸಿನಿಮಾ ಸೆಟ್ಟಿನಲ್ಲೂ ಅಲ್ಲ . ಸ್ಥಳ : ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ನ ಸಮ್ಮುಖ ನರ್ಸಿಂಗ್ ಹೋಂ. ಸಂದರ್ಭ : ಸಮ್ಮುಖ ನರ್ಸಿಂಗ್ ಹೋಂ ಹಾಗೂ ರೋಟರಿ ಬೆಂಗಳೂರು ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ.
ತಾರಾ ಆಗಷ್ಟೇ ರಕ್ತ ನೀಡಿದ್ದರು. ಅವರ ಮುಖದಲ್ಲಿ ಬಳಲಿಕೆಯಿರಲಿಲ್ಲ ; ಧನ್ಯತಾಭಾವ ನೆಲೆಸಿತ್ತು . ಅನ್ನದಾನದಿಂದ ಹೊಟ್ಟೆ ತುಂಬುತ್ತದೆ. ವಿದ್ಯಾದಾನದಿಂದ ಜ್ಞಾನ ಹೆಚ್ಚುತ್ತದೆ. ಆದರೆ ರಕ್ತದಾನದಿಂದ ಇನ್ನೊಬ್ಬರ ಜೀವ ಉಳಿಯುತ್ತದೆ. ಆ ಕಾರಣದಿಂದಲೇ ರಕ್ತದಾನ ಮಹಾದಾನ ಎಂದು ತಾರಾ ಬಣ್ಣಿಸಿದರು.
ಜೀವವೊಂದನ್ನು ಉಳಿಸುವ ಸಂದರ್ಭದಲ್ಲಿ ಎದುರಾಗುವ ಕಷ್ಟ ನಷ್ಟಗಳ ಅನುಭವ ನನಗಿದೆ ಎಂದ ತಾರಾ, ವರ್ಷದಲ್ಲಿ ಮೂರ್ನಾಲ್ಕು ಬಾರಿ ತಾವು ರಕ್ತದಾನ ಮಾಡುವುದಾಗಿ ತಿಳಿಸಿದರು.
ರಕ್ತದಾನದ ಬಗೆಗಿನ ಮೂಢನಂಬಿಕೆಗಳನ್ನು ಕುರಿತು ರೋಟರಿ ಸಂಸ್ಥೆಯ ಶ್ರೀಕಾಂತ್ ಮಾತನಾಡಿದರು. ರಕ್ತದಾನದಿಂದ ನಿಶ್ಯಕ್ತಿ ಉಂಟಾಗುತ್ತದೆ, ವ್ಯಕ್ತಿ ಸಣ್ಣಗಾಗುತ್ತಾನೆ, ರಕ್ತ ಕಡಿಮೆಯಾಗುತ್ತದೆ ಎನ್ನುವುದೆಲ್ಲ ಮೂಢನಂಬಿಕೆ. ರಕ್ತದಾನನಿಂದ ಹೊರಹೋದ ರಕ್ತವನ್ನು ಶರೀರ ತಂತಾನೇ ತುಂಬಿಕೊಳ್ಳುತ್ತದೆ. ರಕ್ತ ಕಡಿಮೆಯಾಗುವ ಪ್ರಶ್ನೆಯೇ ಇಲ್ಲ ಎಂದು ಶ್ರೀಕಾಂತ್ ಹೇಳಿದರು.
ಸಮ್ಮುಖ ನರ್ಸಿಂಗ್ ಹೋಂನ ವ್ಯವಸ್ಥಾಪಕ ನಿರ್ದೇಶಕಿ ಡಾ.ಶಶಿರೇಖಾ ಸತೀಶ್, ರೋಟರಿ ಸಂಸ್ಥೆಯ ಕೆ.ರಘುನಾಥ್ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು. 300 ಕ್ಕೂ ಹೆಚ್ಚು ಮಂದಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು.
ತಾರಾ ಭಾಗವಹಿಸುವಿಕೆಯಿಂದ ರಕ್ತದಾನ ಶಿಬಿರಕ್ಕೆ ತಾರಾಕಳೆ ಬಂತೆನ್ನಿ !
ತಾರಾ ಓ ತಾರಾ