twitter
    For Quick Alerts
    ALLOW NOTIFICATIONS  
    For Daily Alerts

    ಇನ್ನಷ್ಟು ಕಾದಂಬರಿ ಆಧಾರಿತ ಚಿತ್ರ -ದ್ವಾರ್ಕಿ

    By Super
    |

    ಭದ್ರಾವತಿ : ಹೆಚ್ಚು ಹೆಚ್ಚು ಕಾದಂಬರಿ ಆಧಾರಿತ ಕನ್ನಡ ಚಿತ್ರಗಳನ್ನು ನಿರ್ಮಾಣ ಮಾಡಿದ್ದೇನೆ. ಇನ್ನು ಮುಂದೆಯೂ ಕಾದಂಬರಿ ಆಧಾರಿತ ಚಿತ್ರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ನಿರ್ಮಿಸಲು ಉದ್ದೇಶಿಸಿದ್ದೇನೆ ಎಂದು ನಟ-ನಿರ್ದೇಶಕ ದ್ವಾರಕೀಶ್‌ ಹೇಳಿದ್ದಾರೆ.

    ತಮ್ಮ ನಿರ್ಮಾಣದ 'ಆಪ್ತಮಿತ್ರ" ಚಿತ್ರ ಭದ್ರಾವತಿಯ ವೆಂಕಟೇಶ್ವರ ಚಿತ್ರಮಂದಿರದಲ್ಲಿ ತೆರೆಕಂಡ ಸಂದರ್ಭದಲ್ಲಿ ಭದ್ರಾವತಿಗೆ ಆಗಮಿಸಿದ್ದ ದ್ವಾರಕೀಶ್‌ ಸುದ್ದಿಗಾರರೊಂದಿಗೆ ಮಾತನಾಡಿದರು. ಹನ್ನೊಂದು ವರ್ಷಗಳ ಹಿಂದಿನ ಮಣಿಚಿತ್ರತ್ತಾಳ್‌ ಚಿತ್ರದ ರಿಮೇಕ್‌ ಚಿತ್ರವಾದ ಆಪ್ತಮಿತ್ರ ಕರ್ನಾಟಕದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ ಎಂದರು.

    ನನ್ನ ಹಾಗೂ ವಿಷ್ಣುವರ್ಧನ್‌ (ಆಪ್ತಮಿತ್ರ) ನಡುವಿನ ಸ್ನೇಹ ಸಂಬಂಧ ಮುಂದುವರೆಯುತ್ತದೆ. ವಿಷ್ಣು ನಾಯಕತ್ವದಲ್ಲಿ ಕಾದಂಬರಿ ಆಧಾರಿತ ಹೊಸ ಚಿತ್ರ ತಯಾರಿಸುವ ಯೋಜನೆ ರೂಪಿಸುತ್ತಿದ್ದೇನೆ ಎಂದೂ ದ್ವಾರಕೀಶ್‌ ತಿಳಿಸಿದರು.

    ನಟಿ ಸೌಂದರ್ಯ, ವಿಷ್ಣುವರ್ಧನ್‌, ಗುರುಕಿರಣ್‌ 'ಆಪ್ತಮಿತ್ರ" ಚಿತ್ರಕ್ಕೆ ಜೀವತುಂಬಿದ್ದಾರೆ. ಮನೆ ಹೊಕ್ಕಿರುವ ಟಿ.ವಿ ಸೆಟ್‌ಗಳಿಂದ ಚಿತ್ರೋದ್ಯಮ ಸಂಕಷ್ಟದಲ್ಲಿದೆ. ಸ್ಪರ್ಧಾತ್ಮಕ ಪ್ರಪಂಚದಲ್ಲಿ ರೀಮೇಕ್‌, ಸ್ವಮೇಕ್‌ ಚಿತ್ರ ಎನ್ನುವುದಕ್ಕಿಂತ ಚಿತ್ರದ ಯಶಸ್ಸು ಮಾತ್ರ ಮುಖ್ಯವಾಗುತ್ತದೆ. ಪ್ರೇಕ್ಷಕರ ನಿರ್ಧಾರವೇ ಅಂತಿಮ ಎಂದರು.

    ಈ ಸಂದರ್ಭದಲ್ಲಿ ದ್ವಾರಕೀಶ್‌ಪುತ್ರರು ಹಾಗೂ ಚಿತ್ರಮಂದಿರದ ಮಾಲೀಕ ರಾಜು ಹಾಜರಿದ್ದರು.

    (ಇನ್ಫೋ ವಾರ್ತೆ)

    English summary
    Dwarakish promises more novel based films
    Sunday, September 22, 2013, 12:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X