Don't Miss!
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿನಿಮಾಗಳಲ್ಲಿನ ಅವಕಾಶದ ಕೊರತೆ.
ಸುಧಾರಾಣಿ
ಕಿರುತೆರೆಯಲ್ಲಿ
ಕಾಣಿಸಿಕೊಳ್ಳಲಿದ್ದಾರೆ
!
ಅರೆ.
ಇದು
ನಿಜಾನಾ..
ಟೀವಿ
ಎಂದರೆ
ಮಾರು
ದೂರ
ಹಾರುತ್ತಿದ್ದ
ರಾಣಿ
ಸೀರಿಯಲ್ನಲ್ಲಿ
ನಟಿಸಿಕೊಳ್ಳಲು
ಒಪ್ಪಿಕೊಂಡಿರುವುದು
ಸತ್ಯವಾ
ಎಂದು
ಸುದ್ದಿಯ
ಜಾಡು
ಹಿಡಿದು
ಹೋದರೆ,
ನೀವು
ಕೇಳಿದ
ಸುದ್ದಿ
ಹದಿನಾರಾಣೆ
ನಿಜ
ಎನ್ನುತ್ತಾರೆ
ಚಿ.ಗುರುದತ್.
ರಾಣಿಯನ್ನು
ಕಿರುತೆರೆಗೆ
ಕರೆ
ತರುತ್ತಿರುವವರು
ಅವರೇ.
'ಚಂದನದ ಚಿಗುರು' ಸಿನಿಮಾದ ಮೂಲಕ ಸುಧಾರಾಣಿ ಸ್ಯಾಂಡಲ್ವುಡ್ಗೆ ರೀ ಎಂಟ್ರಿ ಪಡೆದರೂ, ನಂತರದಲ್ಲಿ ಅವಕಾಶಗಳೇನೂ ಹುಡುಕಿಕೊಂಡು ಬರಲಿಲ್ಲ . 'ಬುಲೆಟ್' ಎನ್ನುವ ಮಾರಾಮಾರಿ ಚಿತ್ರದಲ್ಲೂ ಸುಧಾರಾಣಿ ಕಾಣಿಸಿಕೊಂಡರೂ, 'ಬುಲೆಟ್ ರಾಣಿ' ಎನ್ನಿಸಿಕೊಂಡಿದ್ದೇ ಲಾಭ. ಬುಲೆಟ್ ಇನ್ನೂ ತೆರೆ ಕಂಡಿಲ್ಲ . ರಾಣಿಗೆ ಹೊಸ ಅವಕಾಶಗಳೂ ಇಲ್ಲ . ಮಗುವನ್ನು ಎತ್ತಿಕೊಂಡು ಎಲ್ಲೆಡೆ ಕಾಣಿಸಿಕೊಳ್ಳುತ್ತಿರುವುದಕ್ಕೋ ಏನೋ ಸಿನಿಮಾ ಮಂದಿ ಕಣ್ಣೆತ್ತಿ ನೋಡುತ್ತಿಲ್ಲ. ಹಾಗಾಗಿ ಸುಧಾರಾಣಿ ಟೀವಿ ಮೂಲಕ ಮನೆಮನೆ ತಲುಪಲು ನಿರ್ಧರಿಸಿದ್ದಾರೆ.
ಸುಧಾರಾಣಿಗೆ ಧಾರಾವಾಹಿಯ ಕಥೆ ಒಪ್ಪಿಗೆಯಾಗಿದೆ. ನಾಯಕಿಯಾಗಿ ನಟಿಸಲು ಅವರು ಒಪ್ಪಿಕೊಂಡಿದ್ದಾರೆ. ಚಿತ್ರಕಥೆಯೂ ಸಿದ್ಧವಾಗಿದೆ ಎನ್ನುತ್ತಾರೆ ಕನ್ನಡ ಚಿತ್ರರಂಗದ ಮರೆಯಬಾರದ ಸಾಹಿತಿ ಚಿ.ಉದಯಶಂಕರ್ ಪುತ್ರ ಚಿ.ಗುರುದತ್.
ಸದ್ಯಕ್ಕೆ ಗುರುದತ್ ಅವರಿಗೂ ಸಿನಿಮಾದಲ್ಲಿ ಅವಕಾಶಗಳಿಲ್ಲ . ಆದರೆ, ಕಿರುತೆರೆಯಲ್ಲಿ ಗುರು 'ಗುರುಬಲ' ಚೆನ್ನಾಗಿದೆ. ಅವರ ನಿರ್ದೇಶನದ 'ಗೋಧೂಳಿ' ಸೀರಿಯಲ್ ಮುನ್ನೂರು ಕಂತು ಮೀರಿ ಮುಂದುವರೆದಿದೆ. ಗೋಧೂಳಿ ಇನ್ನೂ ಐವತ್ತು ಕಂತು ಪ್ರಸಾರವಾಗುತ್ತದಂತೆ.
ಅಂದಹಾಗೆ, ಗುರುದತ್ ನಿರ್ದೇಶನದ ಸುಧಾರಾಣಿ ಅಭಿನಯದ ಧಾರಾವಾಹಿ ಹೆಸರು 'ತುಳಸಿ'.