Don't Miss!
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- News ಐತಿಹಾಸಿಕ ಪ್ರಸಿದ್ಧ ವದ್ದಿಕೆರೆ ಸಿದ್ದಪ್ಪನ ಬಗ್ಗೆ ನಿಮಗೆಷ್ಟು ಗೊತ್ತು?-ಇಲ್ಲಿದೆ ಸಂಪೂರ್ಣ ವಿವರ
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಎಚ್.ಟಿ. ಸಾಂಗ್ಲಿಯಾನ ಮತ್ತೆ ಪೊಲೀಸ್ ಆಯುಕ್ತ!?
ಪೊಲೀಸ್ ಆಯುಕ್ತರಾಗಿ ಎಚ್.ಟಿ.ಸಾಂಗ್ಲಿಯಾನ ಮತ್ತೆ ಕಾರ್ಯನಿರ್ವಹಿಸಲಿದ್ದಾರೆ! ಆದರೆ, ನಿಜ ಬದುಕಿನಲ್ಲಲ್ಲ... ಕೇವಲ ಸಿನಿಮಾದಲ್ಲಿ!
ಹಾಲಿ ಸಂಸದ ಮತ್ತು ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತ ಎಚ್.ಟಿ. ಸಾಂಗ್ಲಿಯಾನ, ಶಿವರಾಜ್ಕುಮಾರ್ ಅಭಿನಯದ ‘ಸಂತ’ ಸಿನಿಮಾಕ್ಕಾಗಿ ಬಣ್ಣ ಹಚ್ಚಲಿದ್ದಾರೆ. ಭೂಗತ ಲೋಕದ ದೊರೆ ಸಂತೋಷ್ ಬದುಕಿನ ಕತೆ ಚಿತ್ರದಲ್ಲಿದೆ.
ಆರ್.ಶ್ರೀನಿವಾಸ್ ಮತ್ತು ಕೆ.ಪಿ.ಶ್ರೀಕಾಂತ್ ನಿರ್ಮಾಣದ ಈ ಚಿತ್ರದಲ್ಲಿ, ಅರತಿ ಛಾಬ್ರಿಯಾ, ಶ್ರೀದೇವಿಕಾ ಪ್ರಮುಖ ಪಾತ್ರದಲ್ಲಿದ್ದಾರೆ. ಮುರಳೀಧರ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಮುಂಬೈ, ದೆಹಲಿ, ಚಿತ್ರದುರ್ಗ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲು ಉದ್ದೇಶಿಸಲಾಗಿದೆ.
ಸಾಂಗ್ಲಿಯಾನ ಮೊದಲ ಬಾರಿಗೆ ‘ಸಂತ’ ಚಿತ್ರದ ಮೂಲಕ, ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ಆದರೆ ಅವರ ಮತ್ತು ಕನ್ನಡ ಚಿತ್ರರಂಗಕ್ಕೆ ಎರಡು ದಶಕಗಳ ನಂಟಿದೆ. 1980ರ ಸುಮಾರಿನಲ್ಲಿ ‘ಸಾಂಗ್ಲಿಯಾನ’ ಹೆಸರಲ್ಲಿ ಎರಡು ಚಿತ್ರಗಳು ಹೊರಬಂದಿದ್ದವು. ಶಂಕರ್ನಾಗ್ ಆ ಚಿತ್ರಗಳ ನಾಯಕರಾಗಿದ್ದರು. ನಂತರ ದೇವರಾಜ್ ನಾಯಕರಾಗಿದ್ದ ‘ಸಾಂಗ್ಲಿಯಾನ-ಭಾಗ 3’ ಪ್ರೇಕ್ಷಕರ ಮನಸ್ಸಲ್ಲಿ ಇನ್ನೂ ನೆನಪಾಗಿ ಉಳಿದಿದೆ.
(ದಟ್ಸ್ ಕನ್ನಡ ಸಿನಿಡೆಸ್ಕ್)