Don't Miss!
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Automobiles ಓಲಾ ಎಸ್ 1 ಪ್ರೋ VS ಏಥರ್ 450X: ಮದಗಜಗಳ ಹಣಾಹಣಿಯಲ್ಲಿ ಯಾರು ಬೆಸ್ಟ್?
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- News Government Employees; ಸರ್ಕಾರಿ ನೌಕರರ ಜೀವ ವಿಮೆ ಪಾಲಿಸಿ ಅವಧಿ ಏರಿಕೆ
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರದುರ್ಗ ಮದುವೆ ಮನೆಯೆಲ್ಲಾ ಗಣೇಶನ ಮಾತಿನ ಮನೆ
ಪ್ರೇಕ್ಷಕರು ನನ್ನನ್ನು ಹೇಗೆ ಓಡಬೇಕು ಎಂದು ಇಷ್ಟಪಡುತ್ತಾರೋ ಅದೇ ರೀತಿ ಪಾತ್ರವನ್ನು 'ಮದುವೆ ಮನೆ' ಚಿತ್ರದಲ್ಲಿ ಕಾಣಬಹುದಾಗಿದೆ. ಸುನೀಲ್ ಕುಮಾರ್ ಸಿಂಗ್ ಅವರ ಡೈಲಾಗ್ ಗಳು ನಾನು ಉದ್ದುದ್ದಾ ಡೈಲಾಗ್ ಹೇಳುವ ರೀತಿ ಮತ್ತೊಮ್ಮೆ ಮುಂಗಾರು ಮಳೆ ಪಾತ್ರವನ್ನು ನೆನಪಿಸುವಂತಿರುತ್ತದೆ ಎಂದು ಗೋಲ್ಡನ್ ಸ್ಟಾರ್ ಗಣೇಶ್ ಅವರು ಹೇಳಿದ್ದಾರೆ.
ಇತ್ತೀಚೆಗೆ ಚಿತ್ರದುರ್ಗದ ಹಳೆ ಪ್ರಾಥಮಿಕ ಶಾಲೆ ಮೈದಾನದಲ್ಲಿ ನಡೆದ ಅದ್ದ್ರೂರಿ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಗಣೇಶ್ ಮಾತನಾಡುತ್ತಿದ್ದರು. ಕಿರುತೆರೆಯಲ್ಲಿ ಈಗಾಗಲೇ ಸುನೀಲ್ ಕುಮಾರ್ ಅವರ ಡೈಲಾಗ್ಸ್ ಫೇಮಸ್ ಆಗಿದೆ.
ಮುಂಗಾರು ಮಳೆಯಲ್ಲಿ ಪ್ರೀತು ಹೊಡೆದ ಡೈಲಾಗ್ಸ್ ಹೇಗೆ ಎಲ್ಲರಲ್ಲೂ ರಂಜಿಸಿತ್ತು. ಅದೇ ರೀತಿ ಮದುವೆ ಮನೆ ಡೈಲಾಗ್ಸ್ ಕೂಡಾ ಮಜಾ ಕೊಡಲಿದೆ ನೋಡ್ತಾ ಇರಿ ಎಂದು ಗಣೇಶ್ ಹಲ್ಲು ಕಿರಿದರು.
ಈ ಚಿತ್ರದಲ್ಲಿ ನಾನು ಹೀರೋಯಿನ್ ಹಿಂದೆ ಸುತ್ತುವುದಿಲ್ಲ. ಆಕೆ ಕೂಡಾ ನನ್ನ ಹಿಂದೆ ಬೀಳಲ್ಲ ಆದರೂ ಕಥೆ ನಡೆಯುತ್ತೆ. ಚಿತ್ರದ ಕೊನೆಗೆ ಎಲ್ಲವೂ ಅರ್ಥವಾಗುತ್ತದೆ. ಚಿತ್ರದುರ್ಗ ಮೂಲದ ನಿರ್ಮಾಪಕ ವಿತರಕ ರೆಹಮಾನ್ ಈಗಾಗಲೇ ಯಜಮಾನ, ಹುಚ್ಚ ದಂಥ ಭರ್ಜರಿ ಯಶಸ್ವಿ ಚಿತ್ರಗಳನ್ನು ನೀಡಿದ್ದಾರೆ.
ಇದೇ ಮ್ಯಾಜಿಕ್ ಮತ್ತೊಮ್ಮೆ ಮದುವೆ ಮನೆ ಚಿತ್ರದ ಮೂಲಕ ಆಗುವ ನಿರೀಕ್ಷೆಯಿದೆ ಎಂದು ಗಣೇಶ್ ಹೇಳಿದರು.