Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರದುರ್ಗ ಮದುವೆ ಮನೆಯೆಲ್ಲಾ ಗಣೇಶನ ಮಾತಿನ ಮನೆ
ಪ್ರೇಕ್ಷಕರು ನನ್ನನ್ನು ಹೇಗೆ ಓಡಬೇಕು ಎಂದು ಇಷ್ಟಪಡುತ್ತಾರೋ ಅದೇ ರೀತಿ ಪಾತ್ರವನ್ನು 'ಮದುವೆ ಮನೆ' ಚಿತ್ರದಲ್ಲಿ ಕಾಣಬಹುದಾಗಿದೆ. ಸುನೀಲ್ ಕುಮಾರ್ ಸಿಂಗ್ ಅವರ ಡೈಲಾಗ್ ಗಳು ನಾನು ಉದ್ದುದ್ದಾ ಡೈಲಾಗ್ ಹೇಳುವ ರೀತಿ ಮತ್ತೊಮ್ಮೆ ಮುಂಗಾರು ಮಳೆ ಪಾತ್ರವನ್ನು ನೆನಪಿಸುವಂತಿರುತ್ತದೆ ಎಂದು ಗೋಲ್ಡನ್ ಸ್ಟಾರ್ ಗಣೇಶ್ ಅವರು ಹೇಳಿದ್ದಾರೆ.
ಇತ್ತೀಚೆಗೆ ಚಿತ್ರದುರ್ಗದ ಹಳೆ ಪ್ರಾಥಮಿಕ ಶಾಲೆ ಮೈದಾನದಲ್ಲಿ ನಡೆದ ಅದ್ದ್ರೂರಿ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಗಣೇಶ್ ಮಾತನಾಡುತ್ತಿದ್ದರು. ಕಿರುತೆರೆಯಲ್ಲಿ ಈಗಾಗಲೇ ಸುನೀಲ್ ಕುಮಾರ್ ಅವರ ಡೈಲಾಗ್ಸ್ ಫೇಮಸ್ ಆಗಿದೆ.
ಮುಂಗಾರು ಮಳೆಯಲ್ಲಿ ಪ್ರೀತು ಹೊಡೆದ ಡೈಲಾಗ್ಸ್ ಹೇಗೆ ಎಲ್ಲರಲ್ಲೂ ರಂಜಿಸಿತ್ತು. ಅದೇ ರೀತಿ ಮದುವೆ ಮನೆ ಡೈಲಾಗ್ಸ್ ಕೂಡಾ ಮಜಾ ಕೊಡಲಿದೆ ನೋಡ್ತಾ ಇರಿ ಎಂದು ಗಣೇಶ್ ಹಲ್ಲು ಕಿರಿದರು.
ಈ ಚಿತ್ರದಲ್ಲಿ ನಾನು ಹೀರೋಯಿನ್ ಹಿಂದೆ ಸುತ್ತುವುದಿಲ್ಲ. ಆಕೆ ಕೂಡಾ ನನ್ನ ಹಿಂದೆ ಬೀಳಲ್ಲ ಆದರೂ ಕಥೆ ನಡೆಯುತ್ತೆ. ಚಿತ್ರದ ಕೊನೆಗೆ ಎಲ್ಲವೂ ಅರ್ಥವಾಗುತ್ತದೆ. ಚಿತ್ರದುರ್ಗ ಮೂಲದ ನಿರ್ಮಾಪಕ ವಿತರಕ ರೆಹಮಾನ್ ಈಗಾಗಲೇ ಯಜಮಾನ, ಹುಚ್ಚ ದಂಥ ಭರ್ಜರಿ ಯಶಸ್ವಿ ಚಿತ್ರಗಳನ್ನು ನೀಡಿದ್ದಾರೆ.
ಇದೇ ಮ್ಯಾಜಿಕ್ ಮತ್ತೊಮ್ಮೆ ಮದುವೆ ಮನೆ ಚಿತ್ರದ ಮೂಲಕ ಆಗುವ ನಿರೀಕ್ಷೆಯಿದೆ ಎಂದು ಗಣೇಶ್ ಹೇಳಿದರು.