ಬೆಳ್ಳಿ ಹೆಜ್ಜೆಯಲ್ಲಿ ಪ್ರತಿಮಾ ದೇವಿ ಬಂಗಾರದ ನೆನಪುಗಳು

ಕರ್ನಾಟಕ ಚಲನಚಿತ್ರ ಅಕಾಡೆಮಿ ಶನಿವಾರ ಏರ್ಪಡಿಸಿದ್ದ ಮಾಸಿಕ ಕಾರ್ಯಕ್ರಮ ಬೆಳ್ಳಿ ಹೆಜ್ಜೆಯಲ್ಲಿ ಮಾತನಾಡುತ್ತಿದ್ದರು.ಮೊದಮೊದಲು ಮೈಸೂರಿನಲ್ಲಿ ಚಲನಚಿತ್ರ ಚಟುವಟಿಕೆಗಳು ಹೆಚ್ಚಾಗಿದ್ದವು. ನಮ್ಮ ಸಂಸ್ಥೆಯ ಬಹುತೇಕ ಎಲ್ಲಾ ಚಿತ್ರಗಳ ಚಿತ್ರೀಕರಣ ಹಾಗೂ ನಂತರದ ಕೆಲಸಗಳು ಮೊದಲು ಮೈಸೂರಿನಲ್ಲೇ ನಡೆದಿದ್ದವು ನಂತರ ಅವು ಮದ್ರಾಸ್-ಬೆಂಗಳೂರಿನಲ್ಲಿ ಆರಂಭಗೊಂಡವು ಎಂದು ಅವರು ಹಳಯ ನೆನಪುಗಳನ್ನು ಮೆಲುಕು ಹಾಕಿದರು.
ತಮ್ಮ ಇಡೀ ಕುಟುಂಬವೇ ಕನ್ನಡ ಚಿತ್ರರಂಗದದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದ ಮೂರು ತಲೆಮಾರುಗಳ ನಂತರವೂ ನಮ್ಮ ಕುಟುಂಬದ ಸದಸ್ಯರು ಕನ್ನಡ ಚಿತ್ರರಂಗದೊಂದಿಗೆ ಒಡನಾಡುತ್ತಿದ್ದಾರೆ ಎಂದರು. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿ ಬರಹ ಸಂಚಿಕೆಯನ್ನು ನಟಿ ಪ್ರತಿಮಾ ದೇವಿ ಅವರು ಬಿಡುಗಡೆಗೊಳಿಸಿದರು.
ಅಕಾಡೆಮಿಯ ಅಧ್ಯಕ್ಷ ಟಿ.ಎಸ್.ನಾಗಾಭರಣ, ರಿಜಿಸ್ಟ್ರಾರ್ ಜಗನ್ನಾಥ ಪ್ರಕಾಶ್, ಚಿತ್ರ ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬು, ವಿಜಯಲಕ್ಷ್ಮೀ ಸಿಂಗ್, ನಟ ಜೈಜಗದೀಶ್ ಮೊದಲಾದವರು ಬೆಳ್ಳಿ ಹೆಜ್ಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











