twitter
    For Quick Alerts
    ALLOW NOTIFICATIONS  
    For Daily Alerts

    ಸೈಕಾಲಜಿ ಬಗ್ಗೆ ಅಮೂಲ್ಯ ಹೊಸ ಮನಸಾಲಜಿ

    By Rajendra
    |

    ಮನಸಿನ ಬಗ್ಗೆ ಹೇಳಬೇಕೆಂದರೆ ಮನಶಾಸ್ತ್ರಜ್ಞರೇ ಆಗಬೇಕೆಂದೇನು ಇಲ್ಲ. ಕವಿ ಹೃದಯವುಳ್ಳವರು ಗೀತ ಸಾಹಿತಿ ಕೆ ಕಲ್ಯಾಣ್ ತರಹ "ಮನಸೇ ಓ ಮನಸೇ ಎಂಥಾ ಮನಸೇ, ಮನಸೇ ಎಳೆ ಮನಸೇ..." ಎಂದು ಹಾಡನ್ನು ಗೀಚಬಹುದು . ಈಗ ಮನಸ್ಸಿನ ಸೈಕಾಲಜಿ ಬಗ್ಗೆ ಹೇಳಲು ಬರುತ್ತಿದ್ದಾರೆ ನಟಿ ಅಮೂಲ್ಯ!

    ಚುಂಬನ ಪ್ರಕರಣದ ಬಳಿಕ ಅಮೂಲ್ಯ ಕೊಂಚ ಕಾಲ ತೆರೆಮರೆಗೆ ಸರಿದಿದ್ದರು. ಈಗ ಮತ್ತೆ ಅವರು ಹೊಸ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರದ ಹೆಸರು 'ಮನಸಾಲಜಿ'. ಶೀರ್ಷಿಕೆ ವಿಚಿತ್ರವಾಗಿದೆಯಲ್ಲವೆ? ಈ ಹಿಂದೆ ಅಮೂಲ್ಯ ಮುಖ್ಯಭೂಮಿಕೆಯಲ್ಲಿದ್ದ ಚಿತ್ರಕ್ಕೆ ಇದೇ ರೀತಿಯಲ್ಲಿ ವಿಚಿತ್ರವಾಗಿ 'ಪ್ರೇಮಿಸಂ' ಎಂದು ಹೆಸರಿಡಲಾಗಿತ್ತು.

    ಅಂದಹಾಗೆ 'ಮನಸಾಲಜಿ' ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ಅಮೂಲ್ಯ ಅವರ ಅಣ್ಣ ದೀಪಕ್. ಈ ಚಿತ್ರದ ಮೂಲಕ ಅವರು ನಿರ್ದೇಶಕರಾಗಲು ಹೊರಟಿದ್ದಾರೆ. ಚಿತ್ರದ ನಾಯಕ ನಟ 'ಜೋಶ್' ಖ್ಯಾತಿಯ ರಾಕೇಶ್. ಮುಂದಿನ ತಿಂಗಳು 'ಮನಸಾಲಜಿ' ಚಿತ್ರೀಕರಣ ಆರಂಭವಾಗಲಿದೆ.

    Tuesday, September 14, 2010, 16:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X