Don't Miss!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- News ಅರವಿಂದ್ ಕೇಜ್ರಿವಾಲ್ ಹತ್ಯೆ ಮಾಡಲು ಸಂಚು ನಡೆಯುತ್ತಿದೆ: ಎಎಪಿ ಗಂಭೀರ ಆರೋಪ
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಕ್ಷನ್, ಕಟ್ ಹೇಳಲಿದ್ದಾರೆ ಗೀತ ಸಾಹಿತಿ ಕೆ ಕಲ್ಯಾಣ್
ಕನ್ನಡ ಚಿತ್ರಗೀತೆಗಳ ಮೂಲಕ ಹೊಸ ಪುಳಕ ಉಂಟು ಮಾಡಿದ ಗೀತ ಸಾಹಿತಿ ಕೆ ಕಲ್ಯಾಣ್. ಅವರ ಸ್ವಚ್ಛ, ಸುಂದರ, ಸುಮಧುರ ಗೀತೆಗಳು ಕಲಾರಸಿಕರ ಮನತಣಿಸಿವೆ. "ಈ ಸುಂದರ ಬೆಳದಿಂಗಳ.. ಈ ತಂಪಿನ ಅಂಗಳದಲ್ಲಿ..." ಎಂದು ಬರೆದಕಲ್ಯಾಣ್ ಈಗ ರಮೇಶ್ ಅರವಿಂದ್ ಅವರಿಗೆ ಆಕ್ಷನ್, ಕಟ್ ಹೇಳಲು ಹೊರಟಿದ್ದಾರೆ. ಸದ್ಯಕ್ಕೆ ಚಿತ್ರಕತೆ, ಕತೆ ಹೆಣೆಯುವಲ್ಲಿ ಕಲ್ಯಾಣ್ ಮಗ್ನರಾಗಿದ್ದಾರೆ.
"ಚಿತ್ರ ಆರಂಭವಾಗಲು ಇನ್ನೂ ಸ್ವಲ್ಪ ಸಮಯ ಹಿಡಿಸುತ್ತದೆ. ಮೊದಲು ಚಿತ್ರಕತೆ ಸಿದ್ಧವಾಗಬೇಕು. ಚೊಚ್ಚಲ ಚಿತ್ರವಾದ ಕಾರಣ ಹೆಚ್ಚಿನ ಕಾಳಜಿ ವಹಿಸುತ್ತಿದ್ದೇನೆ.ಸಂಗೀತ ನಿರ್ದೇಶಕನಾಗಿ ಈಗಾಗಲೆ ಯಶಸ್ಸು ಕಂಡಿದ್ದೇನೆ. ಚಿತ್ರನಿರ್ದೇಶನದಲ್ಲೂ ಗೆಲ್ಲಬೇಕೆಂಬ ಆಸೆ ಇದೆ " ಎಂದಿದ್ದಾರೆ ಕಲ್ಯಾಣ್.
"ಕಲ್ಯಾಣ್ ಅವರ ಶಕ್ತಿ ಸಾಮರ್ಥ್ಯಗಳ ಬಗ್ಗೆ ನನಗೆ ನಂಬಿಕೆ ಇದೆ. ಚಿತ್ರ ನಿರ್ದೇಶನದಲ್ಲೂ ಅವರು ಗೆದ್ದೇ ಗೆಲ್ಲುತ್ತಾರೆ" ಎಂಬ ವಿಶ್ವಾಸವನ್ನು ರಮೇಶ್ ಅರವಿಂದ್ ವ್ಯಕ್ತಪಡಿಸಿದ್ದಾರೆ. ಕಲ್ಯಾಣ್ ನಿರ್ದೇಶನ ಎಂದ ಮೇಲೆ ಕತೆ, ಚಿತ್ರಕತೆ ಯಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳದ ರಮೇಶ್ ಕೂಡಲೆ ಒಪ್ಪಿ ಚಿತ್ರಕ್ಕೆ ಸಹಿಹಾಕಿದ್ದಾರಂತೆ.