twitter
    For Quick Alerts
    ALLOW NOTIFICATIONS  
    For Daily Alerts

    ಮೈಸೂರು ಲಲಿತ ಮಹಲ್‌ನಲ್ಲಿ ಮಣಿರತ್ನಂ ಮುಂದಿನ ಚಿತ್ರ

    By Rajendra
    |

    Manirathnam
    ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಮಣಿರತ್ನ ಅವರು ಇತ್ತೀಚೆಗೆ ಮೈಸೂರಿಗೆ ಭೇಟಿ ನೀಡಿ ಮೈಸೂರು ಅರಮನೆ ಮಂಡಳಿಯ ಉಪನಿರ್ದೇಶಕರ ಜೊತೆ ಮಾತುಕತೆ ನಡೆಸಿದರು. ತಮ್ಮ ಮುಂದಿನ ಚಿತ್ರಕ್ಕೆ ಸುಂದರ ತಾಣಗಳನ್ನು ಹುಡುಕುತ್ತಿರುವ ಅವರು ಮೈಸೂರಿನ ಲಲಿತಮಹಲ್‌ ಅರಮನೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಕ್ಟೋಬರ್‌ನಲ್ಲಿ ಸೆಟ್ಟೇರಲಿರುವ ತಮ್ಮ ಮುಂದಿನ ಚಿತ್ರವನ್ನು ಇಲ್ಲೇ ಚಿತ್ರೀಕರಿಸಲಿದ್ದಾರೆ.

    ಈ ಹಿಂದೆ ವರನಟ ಡಾ.ರಾಜ್ ಕುಮಾರ್ ಅವರ 'ಭಕ್ತ ಅಂಬರೀಷ' ಚಿತ್ರವನ್ನು ಮೈಸೂರು ಅರಮನೆಯಲ್ಲಿ ಚಿತ್ರೀಕರಿಸಲು ಅನುಮತಿ ನೀಡಲಾಗಿತ್ತು. ಆದರೆ ಆ ಚಿತ್ರ ಕಡೆಗೂ ಕನಸಾಗಿಯೇ ಉಳಿಯಿತು. 'ಭಕ್ತ ಅಂಬರೀಷ' ಚಿತ್ರವನ್ನು ಮಾಡಬೇಕು ಎಂಬ ಅಣ್ಣಾವ್ರ ಕನಸು ಕಡೆಗೂ ಕೈಗೂಡಲಿಲ್ಲ. ಈಗ ಮಣಿರತ್ನಂ ಅವರು ತಮ್ಮ ಮುಂದಿನ ಚಿತ್ರಕ್ಕೆ ಮೈಸೂರು ಅರಮನೆಯನ್ನು ಆಯ್ಕೆ ಮಾಡಿಕೊಂಡಿರುವುದು ವಿಶೇಷ.

    ಕಲ್ಕಿ ಕೃಷ್ಣಮೂರ್ತಿ ವಿರಚಿತ ತಮಿಳಿನ ಐತಿಹಾಸಿಕ ಕಾದಂಬರಿ 'ಪೊನ್ನಿಯಿನ್ ಸೆಲ್ವಂ' ಬೆಳ್ಳೆತೆರೆಗೆ ತರುತ್ತಿದ್ದಾರೆ ಮಣಿರತ್ನಂ. 10 ಮತ್ತು 11ನೇ ಶತಮಾನದ ಚೋಳರ ರಾಜಪರಂಪರೆಯ ಬಗ್ಗೆ ಚಿತ್ರ ಬೆಳಕು ಚೆಲ್ಲಲಿದೆ. ವಿಜಯ್ ಮತ್ತು ಮಹೇಶ್ ಬಾಬು ಮುಖ್ಯಭೂಮಿಕೆಯಲ್ಲಿರುವ ಚಿತ್ರದ ನಾಯಕಿ ಬೆಂಗಳೂರು ಬೆಡಗಿ ಅನುಷ್ಕಾ.

    ಈ ಚಿತ್ರದ ಬಜೆಟ್ ರು.200 ಕೋಟಿ ಎನ್ನಲಾಗಿದೆ. ಈ ಹಿಂದೆ 'ಗುರು' ಚಿತ್ರವನ್ನು ಬಾಗಲಕೋಟೆಯಲ್ಲಿ ಚಿತ್ರೀಕರಿಸಿದ್ದರು. 'ರಾವಣ್' ಚಿತ್ರವನ್ನು ಹೊಗೇನಕಲ್‌ನ ಸುಂದರ ತಾಣಗಳಲ್ಲಿ ಸೆರೆಹಿಡಿದಿದ್ದರು. ನನ್ನ ಚಿತ್ರಕ್ಕೆ ಮೈಸೂರು ಹೇಳಿಮಾಡಿಸಿದಂತಿದೆ. ಮೈಸೂರು ಸುತ್ತಮುತ್ತಲೂ ಚಿತ್ರೀಕರಣ ನಡೆಸುವುದಾಗಿ ಮಣಿರತ್ನಂ ತಿಳಿಸಿದ್ದಾರೆ.

    English summary
    Director Manirathnam visits Mysore Lalitha Mahal palace for his forthcoming project Kalki's Ponniyin Selvan. Starring by Vijay in the lead role, the shooting of the film will be begins in October. Earlier the Mysore Palace authorities have sanctioned the permission to shoot for Dr Rajakumar film ‘Bhaktha Ambarisha’, but it could not take off.
    Tuesday, March 15, 2011, 11:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X