Don't Miss!
- News ಬೆಂಗಳೂರು ನಮ್ಮ ಮೆಟ್ರೋ ಬೆಳಗ್ಗೆ 03:35ಕ್ಕೆ ಆರಂಭ: ಏಕೆ? ಕಾರಣ ಇಲ್ಲಿದೆ
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪ್ರಭುದೇವ ನಂಬಿದ ನಯನತಾರಾಗೆ ಪಾನೀಪುರಿಗೇ ಕಾಸಿಲ್ಲ
ಒಂದಾನೊಂದು ಕಾಲದಲ್ಲಿ ಸೌತ್ ಇಂಡಿಯಾ ಸೆನ್ಸೇಷನ್ ಆಗಿದ್ದ ನಯನತಾರಾಗೆ ಈ ಗತಿ ಬರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಪಾಪ, ಈ ತಾರೆಯ 'ನಯನ'ದಲ್ಲೀಗ ಕಾವೇರಿ ನದಿ ಹರಿಯುವುದೊಂದೇ ಬಾಕಿ. ಏಕೆಂದರೆ ಸಿನಿಮಾರಂಗಕ್ಕೆ ಗುಡ್ ಬೈ ಹೇಳಿರುವ ನಯನತಾರೆಗೆ ಈಗ ಪಾನೀಪುರಿ ತಿನ್ನಲೂ ಕಾಸಿಲ್ಲವಂತೆ. ಎಲ್ಲದಕ್ಕೂ ಪಾಕೆಟ್ ಮನಿ ಪ್ರಭುದೇವರೇ ಕೊಡಬೇಕಂತೆ.
ಪ್ರಭುದೇವರನ್ನು ನಂಬಿ ಈ ತಾರಾ 'ಹಳ್ಳಕ್ಕೆ ಬಿದ್ಲಾ' ಎಂಬುದು ಈಗ ಆಕೆಗೂ ಸೇರಿ ಎದ್ದಿರುವ ಪ್ರಶ್ನೆ. ಏಕೆಂದರೆ ಕೋರಿಯೋಗ್ರಫಿ ಮಾಡಿ ಸಾಕಷ್ಟು ಸಂಪಾದಿಸುತ್ತಿದ್ದ ಪ್ರಭುದೇವ ಈಗ ಅದನ್ನು ಬಿಟ್ಟು ನಿರ್ದೇಶನ ಮಾಡುತ್ತೇನೆಂದು ಓಡಾಡುತ್ತಿದ್ದಾನಂತೆ. ನಯನತಾರಾ ಖರ್ಚಿಗೆ ಕೈಯೊಡ್ಡಿದರೆ ಪ್ರಭುದವರಿಂದ ಸಿಗುವುದು ಆಕೆಯ ಮಟ್ಟಿಗೆ ಚಿಲ್ಲರೆ ಕಾಸಂತೆ.
ಈಗ ತಪ್ಪು ಮಾಡಿದ್ದೇನೆ ಎಂದು ಆಕಗೇ ಅನಿಸಿರಲಿಕ್ಕೆ ಸಾಕು. ಅದು ಎಲ್ಲರಿಗೂ ಈ ಮೊದಲೇ ಅನಿಸಿತ್ತು. ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವಂತೆಯೂ ಇಲ್ಲ. ಇನ್ನೂ ಪೂರ್ತಿ ಕೆಟ್ಟಿಲ್ಲ, ಹಾಗಾಗಿಯೋ ಏನೋ, ಬುದ್ಧಿಯೂ ಪೂರ್ತಿ ಬಂದಿಲ್ಲ. ಆದರೆ ಪ್ರಭುದೇವ ಮಾತ್ರ ಯಾರದೋ ದುಡ್ಡು, ಎಲ್ಲಮ್ಮನ ಜಾತ್ರೆ ಅಂದಿದ್ದಾನೆ ಎಂಬ ಸುದ್ದಿ ಇಲ್ಲ. ನಯನತಾರಾ ಕಣ್ಣಲ್ಲಿ ನೀರು ಹರಿದು ಪ್ರಭುದೇವರಿಗೆ ಅಭಿಷೇಕ ಯಾವಾಗಲೋ...(ಒನ್ ಇಂಡಿಯಾ ಕನ್ನಡ)