Don't Miss!
- News ಷೇರು ಮಾರುಕಟ್ಟೆಯಲ್ಲಿ ಮಹಾ ಕುಸಿತ & ಏರಿಕೆ!
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿವರಾಜ್ ಕುಮಾರ್ ಜೊತೆ ಒಲವೇ ಮಂದಾರ ಚೆಲುವೆ
'ಒಲವೇ ಮಂದಾರ' ಚಿತ್ರದ ಮುಗ್ಧ ಚೆಲುವಿನ ಮೂಲಕ ಗಮನಸೆಳೆದನಟಿ ಆಕಾಂಕ್ಷಾ ನರೇಶ್. ತಮ್ಮ ಚೊಚ್ಚಲ ಚಿತ್ರದಮೂಲಕವೇ ಆಕಾಂಕ್ಷಾ ಚಿತ್ರೋದ್ಯಮದ ಗಮನವನ್ನೂ ಸೆಳೆದಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿದ್ದ ಈಕೆ ಮೂಲತಃ ಸಿಂಧಿ ಕುಟುಂಬದ ಹಿನ್ನೆಲೆಯುಳ್ಳವರು. ಈಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರದಲ್ಲಿ ಅಭಿನಯಿಸಲು ಆಫರ್ ಬಂದಿದೆ.ಇನ್ನೂ ಹೆಸರಿಡದ ಈ ಚಿತ್ರವನ್ನು ಸೂರಪ್ಪ ಬಾಬು ನಿರ್ಮಿಸಲಿದ್ದಾರೆ. ಆಕ್ಷನ್, ಕಟ್ ಹೇಳುತ್ತಿರುವವರು ರವಿ ಶ್ರೀವತ್ಸ.
ಇದರ ಜೊತೆಗೆ 'ದೇವಿ' ಚಿತ್ರದಲ್ಲಿ ಎರಡನೇ ನಾಯಕಿಯಾಗಿ ನಟಿಸುವ ಅವಕಾಶವೂ ಆಕಾಂಕ್ಷ ಅವರಪಾಲಾಗಿದೆ. ಈ ಬೆಳವಣಿಗೆಗಳಿಂದ ಖುಷಿಯಾಗಿರುವ ಆಕೆ ಕನ್ನಡ ಚಿತ್ರರಂಗದಲ್ಲೇ ನೆಲೆಯೂರುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲೇ ಒಂದು ಸ್ವಂತ ಮನೆಯನ್ನೂ ಕೊಳ್ಳುವ ಕನಸು ಹೊಂದಿದ್ದಾರೆ. ಈ ಹಿಂದೆ ರೇಶ್ಮೆ ಸೀರೆ ಜಾಹೀರಾತುಗಳಲ್ಲೂ ಈಕೆ ಮಿಂಚಿದ್ದರು.
"ಫೆಮಿನಾ ಮಿಸ್ ಇಂಡಿಯಾ ಬ್ಯೂಟಿಫುಲ್ ಐಸ್" 2008ರ ಪ್ರಶಸ್ತಿಗೆ ಆಕಾಂಕ್ಷಾ ಭಾಜನರಾಗಿದ್ದರು. 'ಒಲವೇ ಮಂದಾರ' ಚಿತ್ರದ ಚುಂಬನ ಪಾತ್ರದಲ್ಲಿ ಆಕಾಂಕ್ಷ ಕಾಣಿಸಿದ್ದರಾದರೂ ತೀರಾ ಅಸಭ್ಯ ಚುಂಬನ ಪಾತ್ರಗಳನ್ನ್ನು ಒಲ್ಲೆ ಎಂದಿದ್ದಾರೆ. ಬಿಲ್ ಕುಲ್ ಅಂದ್ರು ಬಿಕಿನಿ ತೊಡಲ್ಲ ಎಂಬುದು ಆಕಾಂಕ್ಷಾ ಅವರ ಪ್ರತಿಜ್ಞೆ.