Don't Miss!
- News ಎಸ್ಸಿ, ಎಸ್ಟಿ ಮೀಸಲಾತಿ ಮುಸ್ಲಿಮರಿಗೆ ಹಂಚಿಕೆ: ಸ್ಪಷ್ಟನೆ ನೀಡಿದ ಸಿಎಂ ಸಿದ್ದರಾಮಯ್ಯ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ರಂಜಿತಾಗೆ ರು.100 ಕೋಟಿ ಕೊಡಲು ಬೆದರಿಕೆ
ಇಷ್ಟು ದಿನ ತಣ್ಣಗಾಗಿದ್ದ ಸ್ವಾಮಿ ನಿತ್ಯಾನಂದ ಹಾಗೂ ರಂಜಿತಾ ರಾಸಲೀಲೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿತು. "ನಕಲಿ ವಿಡಿಯೋಗಳನ್ನು ತಯಾರಿಸಿ ನನ್ನ ಹೆದರಿಸಿದರು. ಸನ್ ಟಿವಿ, ನಕ್ಕೀರನ್ ಪತ್ರಿಕೆಗಳು ಆಡಿದ ನಾಟಕವಿದು" ಎಂದು ನಿತ್ಯಾನಂದ ಹಾಗೂ ನಟಿ ರಂಜಿತಾ ಅವರು ಸನ್ ಟಿವಿ ಹಾಗೂ ನಕ್ಕೀರನ್ ಪತ್ರಿಕೆಗಳ ಮೇಲೆ ಆರೋಪಗಳ ಸುರಿಮಳೆಗರೆದಿದ್ದಾರೆ.
ನಟಿ ರಂಜಿತಾ ಹಾಗೂ ನಿತ್ಯಾನಂದ ಚೆನ್ನೈನಲ್ಲಿ ಬುಧವಾರ (ಜು.13) ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಈ ನೀಚ ಕೆಲಸಕ್ಕೆ ಕೈಹಾಕಿದ ಆ ಮೀಡಿಯಾ (ಸನ್ ಟಿವಿ, ನಕ್ಕೀರನ್) ಮೇಲೆ ಸರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ನಿತ್ಯಾನಂದಆಗ್ರಹಿಸಿದರು.
ಸನ್ಪಿಕ್ಚರ್ಸ್ ಪ್ರತಿನಿಧಿ ಸಕ್ಸೇನಾ, ನಕ್ಕೀರನ್ ಗೋಪಾಲ್ ರೌಡಿಗಳನ್ನು ಕಳುಹಿಸಿ ರು.100 ಕೋಟಿ ಕೊಡಿ ಎಂದು ಬೆದರಿಸಿದರು. ರು.60 ಕೋಟಿಗಳ ತನಕ ಕೊಡಬೇಕಾಯಿತು. ನನ್ನ ಜೀವಕ್ಕೇನಾದರೂ ಆದರೆ ಅದಕ್ಕೆ ಸಂಪೂರ್ಣ ಜವಾಬ್ದಾರಿ ಸನ್ ಟಿವಿ ಅವರೆ ಎಂದರು.
ಎಂಎಲ್ಎ ಪದವಿ ಕೊಡುತ್ತೇವೆ ಎಂದು ಆಸೆ ತೋರಿಸಿದರು. ನಡೆದದ್ದೆಲ್ಲಾ ನಿಜ ಎಂದು ಹೇಳಿ ಎಂದು ಡಿಎಂಕೆ ಕಡೆಯವರು ರಂಜಿತಾರನ್ನು ಭಯಗೊಳಿಸಿದರು ಎಂದು ನಿತ್ಯಾನಂದ ಈ ಸಂದರ್ಭದಲ್ಲಿ ಆರೋಪಿಸಿದ್ದಾರೆ. (ಏಜೆನ್ಸೀಸ್)