Don't Miss!
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- News ಹಿರಿಯೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಆಟೋ ಪಲ್ಟಿ: NHAIನ ಆ ಒಂದು ಯಡವಟ್ಟಿನ ವಿರುದ್ಧ ಭುಗಿಲೆದ್ದ ಆಕ್ರೋಶ
- Technology Poco: ಹೊಸದಾಗಿ ಲಾಂಚ್ ಆದ ಪೊಕೊ X6 ಪ್ರೊ 5G ಸ್ಮಾರ್ಟ್ಫೋನ್ಗೆ 17% ರಿಯಾಯಿತಿ!8 GB RAM
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ರಂಜಿತಾಗೆ ರು.100 ಕೋಟಿ ಕೊಡಲು ಬೆದರಿಕೆ
ಇಷ್ಟು ದಿನ ತಣ್ಣಗಾಗಿದ್ದ ಸ್ವಾಮಿ ನಿತ್ಯಾನಂದ ಹಾಗೂ ರಂಜಿತಾ ರಾಸಲೀಲೆ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿತು. "ನಕಲಿ ವಿಡಿಯೋಗಳನ್ನು ತಯಾರಿಸಿ ನನ್ನ ಹೆದರಿಸಿದರು. ಸನ್ ಟಿವಿ, ನಕ್ಕೀರನ್ ಪತ್ರಿಕೆಗಳು ಆಡಿದ ನಾಟಕವಿದು" ಎಂದು ನಿತ್ಯಾನಂದ ಹಾಗೂ ನಟಿ ರಂಜಿತಾ ಅವರು ಸನ್ ಟಿವಿ ಹಾಗೂ ನಕ್ಕೀರನ್ ಪತ್ರಿಕೆಗಳ ಮೇಲೆ ಆರೋಪಗಳ ಸುರಿಮಳೆಗರೆದಿದ್ದಾರೆ.
ನಟಿ ರಂಜಿತಾ ಹಾಗೂ ನಿತ್ಯಾನಂದ ಚೆನ್ನೈನಲ್ಲಿ ಬುಧವಾರ (ಜು.13) ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಈ ನೀಚ ಕೆಲಸಕ್ಕೆ ಕೈಹಾಕಿದ ಆ ಮೀಡಿಯಾ (ಸನ್ ಟಿವಿ, ನಕ್ಕೀರನ್) ಮೇಲೆ ಸರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ನಿತ್ಯಾನಂದಆಗ್ರಹಿಸಿದರು.
ಸನ್ಪಿಕ್ಚರ್ಸ್ ಪ್ರತಿನಿಧಿ ಸಕ್ಸೇನಾ, ನಕ್ಕೀರನ್ ಗೋಪಾಲ್ ರೌಡಿಗಳನ್ನು ಕಳುಹಿಸಿ ರು.100 ಕೋಟಿ ಕೊಡಿ ಎಂದು ಬೆದರಿಸಿದರು. ರು.60 ಕೋಟಿಗಳ ತನಕ ಕೊಡಬೇಕಾಯಿತು. ನನ್ನ ಜೀವಕ್ಕೇನಾದರೂ ಆದರೆ ಅದಕ್ಕೆ ಸಂಪೂರ್ಣ ಜವಾಬ್ದಾರಿ ಸನ್ ಟಿವಿ ಅವರೆ ಎಂದರು.
ಎಂಎಲ್ಎ ಪದವಿ ಕೊಡುತ್ತೇವೆ ಎಂದು ಆಸೆ ತೋರಿಸಿದರು. ನಡೆದದ್ದೆಲ್ಲಾ ನಿಜ ಎಂದು ಹೇಳಿ ಎಂದು ಡಿಎಂಕೆ ಕಡೆಯವರು ರಂಜಿತಾರನ್ನು ಭಯಗೊಳಿಸಿದರು ಎಂದು ನಿತ್ಯಾನಂದ ಈ ಸಂದರ್ಭದಲ್ಲಿ ಆರೋಪಿಸಿದ್ದಾರೆ. (ಏಜೆನ್ಸೀಸ್)