Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುದೀಪ್ಗೆ ಅಣ್ಣನಾದ ಚಾಲೆಂಜಿಂಗ್ ಸ್ಟಾರ್ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಣ್ಣನಾಗಿದ್ದಾರೆ. ಯಾರಿಗೆ ಅಂತೀರಾ? ಇನ್ಯಾರಿಗೆ ಕಿಚ್ಚ ಸುದೀಪ್ಗೆ. ಇವರಿಬ್ಬರೂ ಒಂದು ಕಾಲದಲ್ಲಿ ನಾನೊಂದು ತೀರೆ ನೀನೊಂದು ತೀರ ಎಂಬಂತಿದ್ದರು. ಆದರೆ ಇತ್ತೀಚೆಗೆ 'ಸಾರಥಿ' ಶತದಿನೋತ್ಸವ ಸಂಭ್ರಮದಲ್ಲಿ ಸುದೀಪ್ ಪಾಲ್ಗೊಂಡು ದರ್ಶನ್ಗೆ ಬೆನ್ನುತಟ್ಟಿದ್ದರು. ಈ ಮೂಲಕ ಇಬ್ಬರ ನಡುವಿನ ಅಡ್ಡಗೆರೆ ಅಳಿಸಿಹೋಗಿದೆ.
ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ವೇಳೆ ಇಬ್ಬರೂ ಮತ್ತಷ್ಟು ಹತ್ತಿರವಾಗಿದ್ದರು. ಈಗ ಇವರಿಬ್ಬರನ್ನು ಇನ್ನಷ್ಟು ಹತ್ತಿರಕ್ಕೆ ತರುತ್ತಿದ್ದಾರೆ ಉದ್ಯಮಿ ಹಾಗೂ ಚಿತ್ರ ನಿರ್ಮಾಪಕ ಅಶೋಕ್ ಖೇಣಿ. ಇವರಿಬ್ಬರನ್ನು ಹಾಕಿಕೊಂಡು ಮಲ್ಟಿಸ್ಟಾರ್ ಸಿನಿಮಾ ಮಾಡುವುದಾಗಿ ಖೇಣಿ ಔಪಚಾರಿಕವಾಗಿ ಸೋಮವಾರ (ಫೆ.13) ಘೋಷಿಸಿದ್ದಾರೆ.
ಇದೊಂದು ಅಣ್ಣತಮ್ಮಂದಿರ ಕತೆಯಂತೆ. ಅಣ್ಣನದು ಹಳ್ಳಿಗಾಡಾದರೆ ತಮ್ಮ ಸಿಟಿಯವ. ಅಣ್ಣತಮ್ಮನ ಸೆಂಟಿಮೆಂಟೇ ಚಿತ್ರದ ಜೀವಾಳ. ಇದಿಷ್ಟರ ಬಗ್ಗೆ ಸುಳಿವು ನೀಡಿರುವ ಖೇಣಿ ಉಳಿದ ವಿವರಗಳನ್ನು ಇನ್ನಷ್ಟೇ ಪ್ರಕಟಿಸುವುದಾಗಿ ಹೇಳಿದ್ದಾರೆ. ಅಲ್ಲಿಯವರೆಗೂ ಕಾಯಬೇಕು. (ಒನ್ಇಂಡಿಯಾ ಕನ್ನಡ ವಿಶೇಷ)