Don't Miss!
- News ಕುಡುಕರಿಗೆ ಎಣ್ಣೆ ಸಿಗುತ್ತಿಲ್ಲ, ಪರದಾಟ ನೋಡಲು ಆಗುತ್ತಿಲ್ಲ!
- Sports DC vs GT IPL 2024: ಅಕ್ಷರ್, ಪಂತ್ ಭರ್ಜರಿ ಬ್ಯಾಟಿಂಗ್; ಗುಜರಾತ್ಗೆ ಸವಾಲಿನ ಗುರಿ ನೀಡಿದ ಡೆಲ್ಲಿ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಐಶ್ವರ್ಯ ರೈ ಡೆಲಿವರಿಯಂದೇ ತೆರೆಗೆ ವಿಷ್ಣುವರ್ಧನ!
ಕೆಂಪೇಗೌಡ ಚಿತ್ರದ ಬಳಿಕ ನಟ ಸುದೀಪ್ ಅಭಿನಯದ ಯಾವ ಚಿತ್ರವೂ ತೆರೆಕಂಡಿಲ್ಲ. ಸದ್ಯಕ್ಕೆ ಸುದೀಪ್ ತೆಲುಗಿನಲ್ಲೂ ಬ್ಯುಸಿಯಾಗಿದ್ದು ಕನ್ನಡದಲ್ಲಿ ಸಾಕಷ್ಟು ಚಿತ್ರಗಳು ನಿರ್ಮಾಣ ಹಂತದಲ್ಲಿವೆ. ಅವುಗಳಲ್ಲಿ ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದ ಚಿತ್ರ 'ವಿಷ್ಣುವರ್ಧನ'.
ಈಗ ಈ ಚಿತ್ರದ ಕೊನೆಯ ಹಾಡಿನ ಚಿತ್ರೀಕರಣ ಇತ್ತೀಚೆಗೆ ರಾಜಸ್ತಾನದ ಜೈಸಲ್ಮೇರ್ನಲ್ಲಿ ನಡೆಯಿತು. ಸುದೀಪ್ ಜೊತೆಗೆ ಚಿತ್ರದ ನಾಯಕಿಯರಾದ ಭಾವನಾ, ಪ್ರಿಯಾಮಣಿ ಕೂಡ ಭಾಗವಹಿಸಿದ್ದರು. ಹರ್ಷ ಅವರ ನೃತ್ಯ ಸಂಯೋಜನೆಯಲ್ಲಿ ಹಾಡನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ನಟ, ನಿರ್ದೇಶಕ ದ್ವಾರಕೀಶ್ ನಿರ್ಮಿಸುತ್ತಿರುವ ಮಹತ್ವಾಕಾಂಕ್ಷಿ ಚಿತ್ರವಿದು. ಶೀಘ್ರದಲ್ಲೆ ಚಿತ್ರದ ಆಡಿಯೋ ಬಿಡುಗಡೆ ಮಾಡುವುದಾಗಿಯೂ ದ್ವಾರಕೀಶ್ ತಿಳಿಸಿದ್ದಾರೆ.
ವಿ ಕುಮಾರ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ನವೆಂಬರ್ 11ರಂದು ತೆರೆಕಾಣಲಿದೆ. ಅಂದೇ ಬಾಲಿವುಡ್ ತಾರೆ ಐಶ್ವರ್ಯ ರೈಗೆ ಡೆಲೆವರಿ ಡೇಟ್ ಸಹ ಕೊಡಲಾಗಿದೆ! ವಿ ಹರಿಕೃಷ್ಣ ಸಂಗೀತ ನೀಡುರುವ ಚಿತ್ರದ ಹಾಡುಗಳು ಅದ್ಭುತವಾಗಿ ಮೂಡಿಬಂದಿವೆ ಎಂದು ಸುದೀಪ್ ತಿಳಿಸಿರುವುದು ಚಿತ್ರದ ಬಗೆಗಿನ ನಿರೀಕ್ಷೆಗಳು ಇಮ್ಮಡಿಸುವಂತೆ ಮಾಡಿವೆ. (ಒನ್ಇಂಡಿಯಾ ಕನ್ನಡ)