Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶಿವು ಜೊತೆ ನಟಿಸಿ, ರಾಜಣ್ಣನಿಗೆ ಶ್ರದ್ಧಾಂಜಲಿ -ಡಾ. ವಿಷ್ಣು
ಕಿರಿಯ ನಟರೊಂದಿಗೆ ಅಭಿನಯಿಸಲು ಆಸಕ್ತಿ ತೋರುತ್ತಿರುವ ಸಾಹಸಸಿಂಹ ಡಾ. ವಿಷ್ಣುವರ್ಧನ್, ಈಗ ಇನ್ನೊಂದು ಬಯಕೆಯನ್ನು ತೆರೆದಿಟ್ಟಿದ್ದಾರೆ.
ನಟ ಶಿವರಾಜ್ಕುಮಾರ್ ಜೊತೆ ಅಭಿನಯಿಸಲು ನಾನು ಇಷ್ಟಪಡುತ್ತೇನೆ. ಆ ಮೂಲಕ ಡಾ.ರಾಜ್ಕುಮಾರ್ಗೆ ಗೌರವ ಶ್ರದ್ಧಾಂಜಲಿ ಸಲ್ಲಿಸುವ ಹಂಬಲ ನನ್ನದು ಎನ್ನುವ ಮೂಲಕ ವಿಷ್ಣು, ಅಭಿಮಾನಿಗಳಿಗೆ ರೋಮಾಂಚನ ತಂದಿದ್ದಾರೆ.
ಸುದ್ದಿಗಾರರೊಂದಿಗೆ ಮನಬಿಚ್ಚಿ ಮಾತನಾಡುತ್ತಿದ್ದ ಅವರು, ಶಿವರಾಜ್ಕುಮಾರ್ರೊಂದಿಗೆ ನಾನು ನಟಿಸುವುದನ್ನು ನೋಡಲು ರಾಜ್ ಬಯಸಿದ್ದರು. ಅವರು ಈ ಬಗ್ಗೆ ನನಗೆ ಹೇಳಿದ್ದರು. ಸೂಕ್ತ ಕತೆ ಸೇರಿದಂತೆ ವಿವಿಧ ಕಾರಣಗಳಿಂದ ಆ ಭಾಗ್ಯ ಕೂಡಿಬರಲಿಲ್ಲ. ಈಗ ಆ ದಿನವನ್ನು ಎದುರು ನೋಡುತ್ತಿದ್ದೇನೆ ಎಂದು ವಿಷ್ಣು ಹೇಳಿದ್ದಾರೆ.
ಶಿವರಾಜ್ ಕುಮಾರ್ ಒಬ್ಬ ಒಳ್ಳೆ ನಟ. ಅಷ್ಟೇ ಒಳ್ಳೆಯ ಮನಸ್ಸುಳ್ಳವರು ಎಂದು ವಿಷ್ಣು ಪ್ರಶಂಸಿಸಿದ್ದಾರೆ. ಜಗ್ಗೇಶ್ರೊಂದಿಗೆ, ಮತ್ತೊಂದು ಕಡೆ ದರ್ಶನ್ ಜೊತೆ ವಿಷ್ಣು ಅಭಿನಯಿಸುತ್ತಿದ್ದಾರೆ.
ದರ್ಶನ್, ಜಯಪ್ರದಾರೊಂದಿಗಿನ ಹೊಸ ಚಿತ್ರ‘ಈ ಬಂಧನ’ ಬಗ್ಗೆ ಪ್ರಸ್ತಾಪಿಸಿದ ವಿಷ್ಣು, ಇದು ರೀಮೇಕ್ ಚಿತ್ರವಲ್ಲ. ಇಂಗ್ಲಿಷ್ ಕಾದಂಬರಿಯನ್ನು ಮೂಲವಾಗಿಟ್ಟುಕೊಂಡು ಹೊರಬರುತ್ತಿರುವ ಚಿತ್ರ. ಇದು ನನ್ನ ಹಿಂದಿನ ‘ಬಂಧನ’ವನ್ನು ನೆನಪಿಸುತ್ತಿದೆ ಎಂದರು.
ನಾನು ಸದ್ಯಕ್ಕೆ ಒಪ್ಪಿಕೊಂಡಿರುವ ಚಿತ್ರಗಳು ಮುಗಿದ ಮೇಲೆ, ನಿವೃತ್ತಿ ಪಡೆಯುವ ಬಗ್ಗೆ ಚಿಂತಿಸುತ್ತಿದ್ದೇನೆ. ಮತ್ತೊಂದು ಕಡೆ
ಉಪೇಂದ್ರರೊಂದಿಗಿನ ‘ಯುಗೇ ಯುಗೇ’ ಚಿತ್ರ ಯಾಕೋ ಮುಂದಕ್ಕೆ ಹೋಗುತ್ತಿದೆ. ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಜೊತೆ 10ಸುತ್ತಿನ ಚರ್ಚೆ ನಡೆದಿದೆ ಎಂದ ವಿಷ್ಣು ಮೌನಿಯಾದರು.