Don't Miss!
- News 140 ಕೋಟಿ ಜನ ನಿಮ್ಮನ್ನು ತಿರಸ್ಕರಿಸಿರುವುದರಲ್ಲಿ ಅಚ್ಚರಿ ಏನಿಲ್ಲ: ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಟೀಕೆ
- Lifestyle ಹೋಳಿ ದಿನ ಸ್ಕೂಟಿಯಲ್ಲಿ ಟೈಟಾನಿಕ್ ಪೋಸ್ ನೀಡಿ ದೊಪ್ಪೆಂದು ಬಿದ್ದ ಹುಡುಗಿಗೆ ಬಿತ್ತು ದುಬಾರಿ ಫೈನ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದುರ್ಗಾ ಶೆಟ್ಟಿ ಕನ್ನಡ ಅಷ್ಟಕ್ಕಷ್ಟೇರೀ..
ಇವತ್ತು
ಗಾಂಧಿ
ನಗರದ
ಹಾಟ್ಕೇಕ್
ಎಂದೇ
ಹೆಸರಾಗಿರುವ
ದುರ್ಗಾ
ಹೇಳುವುದಿಷ್ಟು-
ನನ್ನನ್ನು
ಚಿತ್ರರಂಗಕ್ಕೆ
ಪರಿಚಯಿಸಿದವರು
ನಿರಂಜನ್.
ನಾನು
ಕ್ಯಾಮರಾ
ಎದುರಿಸಿದ
ಮೊದಲ
ಚಿತ್ರ
'ಮೀಸೆ
ಚಿಗುರಿದಾಗ".
ಮೊದಲಿಗೆ
ಕ್ಯಾಮರಾ
ಮುಂದೆ
ನಿಂತಾಗ
ಅಯ್ಯೋ
ಏನಾಗಿಬಿಡುತ್ತೋ
ಏನೋ
ಎಂಬ
ಅಂಜಿಕೆ
ಇತ್ತು.
ಆದರೆ
ಚಿತ್ರತಂಡದವರ
ಆತ್ಮೀಯತೆ,
ಸಹಕಾರ
ನನ್ನ
ಅಂಜಿಕೆಯನ್ನು
ಓಡಿಸಿತು.
'ಮೀಸೆ ಚಿಗುರಿದಾಗ" ಮೊದಲ ಚಿತ್ರ. ನಾ ಅದರಲ್ಲಿ ತುಸು ಓವರ್ ಅನ್ನುವಂಥ ಗ್ಲಾಮರಸ್ ಪಾತ್ರದಲ್ಲಿ ಮಿಂಚಿದೆ. ಮೊದಲ ಚಿತ್ರ ಬಿಡುಗಡೆ ಆಗೋಕೆ ಮುಂಚೆಯೇ ಒಂದರ ಹಿಂದೊಂದು ಅವಕಾಶಗಳು ಸಿಕ್ಕವು ನೋಡಿ. ಆಗ ತುಂಬಾ ಖುಷಿಯಾಯಿತು. ಚಿತ್ರಗಳಲ್ಲಿ ಹಲವು ಜನರೆದುರು, ಹಲವು ಪಾತ್ರಗಳಿಗಾಗಿ ಅಭಿನಯಿಸಲು ನಿಂತೆನಲ್ಲ- ಆ ಸಂದರ್ಭದಲ್ಲಿ ನನ್ನ ನೆರವಿಗೆ ಬಂದದ್ದು ಹಿಂದೆ ಮಾಡೆಲಿಂಗ್ನಲ್ಲಿ ಕಲಿತಿದ್ದ ಅಭಿನಯ, ಅನುಭವ ಎನ್ನುವ ದುರ್ಗಾ ಶೆಟ್ಟಿ ಮುಂದುವರಿದು ಹೇಳುತ್ತಾರೆ-
'...ಸಿನಿಮಾ ರಂಗ ಕೆಟ್ಟದ್ದು ಅಂತ ಈವತ್ತಿನವರೆಗೂ ನಂಗೆ ಅನಿಸಿಲ್ಲ. ನಾವು ಒಳ್ಳೆಯವರಾಗಿ ನಡೆದುಕೊಂಡರೆ ಉಳಿದವರೂ ಒಳ್ಳೆಯವರಾಗಿ ವರ್ತಿಸುತ್ತಾರೆ. ನಾವು ಕೆಟ್ಟವರಾದರೆ, ಉಳಿದವರೂ ಕೆಟ್ಟವರಾಗಿ ನಡ್ಕೋತಾರೆ. ನನಗೀಗ ತೆಲುಗು, ತಮಿಳು ಚಿತ್ರರಂಗದಿಂದಲೂ ಅವಕಾಶಗಳು ಬರ್ತಾ ಇವೆ. ಬೆಸ್ಟ್ ಕ್ಯಾರೆಕ್ಟರ್ ಎಂಬಂಥ ಪಾತ್ರಗಳನ್ನು ಮಾತ್ರ ಆಯ್ಕೆ ಮಾಡ್ಕೋತಾ ಇದೀನಿ ನಾನು" ನಸು ನಕ್ಕರು ದುರ್ಗಾ.
ಈ ಪ್ರೊಫೆಷನ್ ಕುರಿತು ಚಿಕ್ಕ ಪುಟ್ಟ ಅಸಹನೆ ಇರೋದು ಸಹಜ. ಆದ್ರೆ ಮುಂದೆ ಕೂಡ ಸಿನಿಮಾ ರಂಗದಲ್ಲೇ ಉಳಿಯಬೇಕು. ಜನರು ಬಹುಕಾಲ ನೆನಪಿಡುವ ಹಾಗೆ, ಅವರಿಗೆ ಇಷ್ಟವಾಗುವ ಹಾಗೆ ನಟಿಸಬೇಕು ಎಂದೆಲ್ಲ ಕನಸು ಕಂಡಿರುವ ದುರ್ಗಾ ಶೆಟ್ಟಿಗೆ ಅಂದುಕೊಂಡಿದ್ದನ್ನೆಲ್ಲ ಸಾಧಿಸಲೇ ಬೇಕು ಎಂಬ ಛಲವೂ ಇದೆಯಂತೆ. ನನ್ನ ಪ್ರೊಫೆಷನ್ ಕತೆ ಹೇಳಿದ್ದಾಯ್ತಲ್ಲಾ ಸ್ವಾಮಿ, ಈಗ ನೀವೂ ನಂಗೊಂದು ಬೆಸ್ಟ್ ಆಫ್ ಲಕ್ ಹೇಳಿ ಎಂದು ಆರ್ಡರು ಎಸೆದೇ ಮಾತು ಮುಗಿಸಿದರು ದುರ್ಗಾ ಶೆಟ್ಟಿ.(ಸ್ನೇಹಸೇತು : ವಿಜಯ ಕರ್ನಾಟಕ)