Don't Miss!
- Sports CSK vs LSG IPL 2024: ಐಪಿಎಲ್ನಲ್ಲಿ ಈ ದಾಖಲೆ ಮಾಡಿದ ಮೊದಲ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್
- News India weather: ಮಳೆಗಾಗಿ ಕಾಯುತ್ತಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ
- Finance ಅಯೋಧ್ಯೆಯಲ್ಲಿ ಓಲಾ ಕ್ಯಾಬ್ ಸೇವೆ ಆರಂಭ
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಜಯ್; ನಾರಾಯಣ್ ಕೃಪೆಯಿಂದ ಈಗ ಚಂಡ!
ಅಭಿಮಾನಿಗಳಿಂದ ಕಲಾ ಸಾಮ್ರಾಟರೆಂದೂ, ವಿರೋಧಿಗಳಿಂದ ರೀಮೇಕ್ ಕಿಂಗ್ ಎಂದೂ ಕರೆಸಿಕೊಳ್ಳುವ ಎಸ್.ನಾರಾಯಣ್, ಹೊಸ ಸಿನಿಮಾ ಕೆಲಸದಲ್ಲೀಗ ಸಕತ್ತು ಬಿಝಿ.
ಸಿನಿಮಾದ ಹೆಸರು ಚಂಡ! ಅದು ಚಂಡವಿರಲಾರದು ಚೆಂದವಿರಬೇಕು ಎಂದು ಬಹುತೇಕರು ಭಾವಿಸಿದ್ದರು. ಇಲ್ಲ ಚಿತ್ರದ ಹೆಸರು ಚಂಡನೇ ಎಂದು ನಾರಾಯಣ್ ಸ್ಪಷ್ಟಪಡಿಸಿದ್ದಾರೆ. ಮೊನ್ನೆಯಷ್ಟೇ ಚೆಲುವಿನ ಚಿತ್ತಾರ ಎಂಬ ಚೆಂದದ ಹೆಸರಿಟ್ಟ ನಾರಾಯಣ್, ಎಲ್ಲರೂ ಬೆಚ್ಚಿಬೀಳುವಂತಹ ಹೆಸರನ್ನು ಈಗ ಆಯ್ಕೆ ಮಾಡಿಕೊಂಡಿದ್ದಾರೆ.
ದುನಿಯಾದ ಕರಿ ಹುಡುಗ ವಿಜಯ್, ಚಿತ್ರದ ನಾಯಕ. ಶುಭ ಪೂಂಜಾ ಚಿತ್ರದ ನಾಯಕಿ. ಮೈಸೂರಿನಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ. ತಾಯಿಯ ಮಡಿಲು ನಿರ್ಮಾಣ ಮಾಡಿ ಕೈಸುಟ್ಟುಕೊಂಡಿದ್ದ ನಾರಾಯಣ್, ಗಣೇಶ್ರನ್ನು ಹಾಕಿಕೊಂಡು ಚೆಲುವಿನ ಚಿತ್ತಾರ ಮಾಡಿ ನಾಲ್ಕು ಕಾಸು ಎಣಿಸುತ್ತಿದ್ದಾರೆ. ಇನ್ನೂ ನಾಲ್ಕು ಕಾಸು ಎಣಿಸಬೇಕೆಂದು ವಿಜಯ್ ಹಿಂದೆ ಬಿದ್ದಿದ್ದಾರೆ.
ಚಂಡ ಯಾವ ಚಿತ್ರದ ರೀಮೇಕು ಎಂಬುದನ್ನು ನಾರಾಯಣ್ ಸದ್ಯಕ್ಕೆ ಬಾಯಿಬಿಟ್ಟಿಲ್ಲ. ಓದುಗರು ಊಹಿಸಿ ತಿಳಿಸಿದರೆ ನಮ್ಮದೇನು ಅಡ್ಡಿಯಿಲ್ಲ.