twitter
    For Quick Alerts
    ALLOW NOTIFICATIONS  
    For Daily Alerts

    ಉದಯ ವಿರುದ್ಧ ಕೇಬಲಿಗರ ಬಂಡಾಯ

    By Super
    |

    ಬೆಂಗಳೂರು: ಕನ್ನಡದ ಜನಪ್ರಿಯ ಚಾನಲ್‌ ಉದಯ ಟೀವಿ ಪೇ ಚಾನಲ್‌ ಆಗಿ ಬದಲಾಗಿರುವುದು ಕೇಬಲ್‌ ಆಪರೇಟರ್‌ಗಳ ಅಸಮಾಧಾನಕ್ಕೆ ಕಾರಣವಾಗಿದ್ದು , ಕರ್ನಾಟಕ ಕೇಬಲ್‌ ಆಪರೇಟರ್‌ಗಳ ಸಂಘ ಉದಯ ಟೀವಿಯ ವಿರುದ್ಧ ಆಗಸ್ಟ್‌ 16ರಂದು ಭಾರೀ ಪ್ರತಿಭಟನೆ ಹಮ್ಮಿಕೊಂಡಿದೆ.

    ಆ.16ರ ಸೋಮವಾರ ಬೆಳಗ್ಗೆ 10.30 ಕ್ಕೆ ಬೆಂಗಳೂರು ಚಲೋ ನಡೆಸಲು ಕೇಬಲ್‌ ಆಪರೇಟರ್‌ಗಳ ಸಂಘ ನಿರ್ಧರಿಸಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ. ರಾಜ್ಯದಲ್ಲಿ ಸುಮಾರು 2000ಕ್ಕೂ ಹೆಚ್ಚು ಕೇಬಲ್‌ ಟಿವಿ ಅಪರೇಟರ್‌ಗಳಿದ್ದು ಅವರೆಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ಸಂಘ ಕರೆ ನೀಡಿದೆ.

    ಬೆಂಗಳೂರಿನ ವಸಂತನಗರದಲ್ಲಿರುವ ಉದಯ ಟೀವಿ ಕಚೇರಿ ಎದುರು ಧರಣಿ ನಡೆಸಲಾಗುವುದು. ಪೇ ಚಾನಲ್‌ ನಿರ್ಧಾರದಿಂದ ಉದಯ ಹಿಂದೆ ಸರಿಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಭಾರೀ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕೇಬಲ್‌ ಆಪರೇಟರ್‌ಗಳು ಎಚ್ಚರಿಸಿದದಾರೆ.

    ಸನ್‌ ಹಾಗೂ ಸೂರ್ಯ ಚಾನಲ್‌ಗಳು ಉಚಿತ ಚಾನಲ್‌ಗಳಾಗಿ ಮುಂದುವರಿದಿದ್ದರೂ, ಉದಯಟಿವಿಯನ್ನು ಮಾತ್ರ ಪೇ ಚಾನಲ್‌ ಆಗಿ ಪರಿವರ್ತಿಸುವ ಕ್ರಮ ಸರಿಯಾದುದಲ್ಲ ಎಂದು ಕೇಬಲ್‌ ಆಪರೇಟರ್‌ಗಳ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

    ಕೇಬಲ್‌ ದುಬಾರಿ : ಸೇವಾ ತೆರಿಗೆ ಮತ್ತು ಶೈಕ್ಷಣಿಕ ಸೆಸ್‌ ಏರಿಕೆ ಹಿನ್ನೆಲೆಯಲ್ಲಿ ಕೇಬಲ್‌ ದರ ಏರಿಸಲು ಕೇಬಲ್‌ ಆಪರೇಟರ್‌ಗೆ ದೂರವಾಣಿ ನಿಯಂತ್ರಣ ಪ್ರಾಧಿಕಾರ ಅನುಮತಿ ನೀಡಿದೆ.(ಏಜನ್ಸೀಸ್‌)

    English summary
    Karnataka State Cable TV Operators' Association decided to take out Bangalore Chalo protest march on August 16 at 10.30 am against Udaya TV network for its decision to convert Kannada channels from freetoair channels to pay channels
    Monday, July 22, 2013, 15:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X