Don't Miss!
- Finance Tumakuru namma metro: ಮಾದಾವರದಿಂದ ತುಮಕೂರು ಮೆಟ್ರೋ ಕಾರಿಡಾರ್ ಅಪಡೇಟ್
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನಸುಗಳ ಮಾತು ಮಧುರ ಆನಂದ್ 'ಜೈ ಹೋ..'
ವರದಕ್ಷಿಣೆ ಕಿರುಕುಳ, ಅಕ್ರಮ ಸಂಬಂಧ ಆರೋಪಗಳಿಂದ ನ್ಯಾಯಾಲಯ ಮುಕ್ತ ಗೊಳಿಸಿದ ನಂತರ ನಟ ಆನಂದ್ ಈಗ ಮತ್ತೆ ವೃತ್ತಿ ಜೀವನದತ್ತ ಮರಳುತ್ತಿದ್ದಾರೆ. ನಿರೂಪಕ, ನಟರಾಗಿ ವೃತ್ತಿಜೀವನದಲ್ಲಿ ಒಂದು ಹಂತಕ್ಕೆ ಬಂದು ಇನ್ನೇನು ಮೇಲೇರಬೇಕು ಎನ್ನುತ್ತಿದ್ದಂತೆ ವೈಯಕ್ತಿಕ ಸಮಸ್ಯೆಯ ಸುಳಿಗೆ ಸಿಕ್ಕಿ ನಲುಗಿಹೋಗಿದ್ದರು ಆನಂದ್. ಇದೀಗ 'ಆರೋಪ ಮುಕ್ತ'ರಾಗಿ ನಿರಾಳವಾಗಿರುವ ಆನಂದ್ ಸದ್ಯದಲ್ಲೇ ಹೊಸ ಚಿತ್ರವೊಂದರಲ್ಲಿ ನಾಯಕರಾಗಿ ನಟಿಸಲಿದ್ದಾರೆ.
ಇದೀಗ ಆನಂದ್ ಮೊದಲಿನಂತಿಲ್ಲ. 'ರಫ್ ಅಂಡ್ ಟಫ್' ಪಾತ್ರಕ್ಕೂ ಸೈ ಎನ್ನುವಂತೆ ದೇಹವನ್ನು ಹುರಿಗೊಳಿಸಿದ್ದಾರೆ. 'ಸಿಕ್ಸ್ ಪ್ಯಾಕ್ ಆಬ್ಸ್' ಹೊಂದಿ ಗುರುತು ಸಿಗದಷ್ಟು ಹ್ಯಾಂಡ್ ಸಮ್ ಆಗಿದ್ದಾರೆ. ಚಿತ್ರರಂಗದಿಂದ ಅನಿರೀಕ್ಷಿತವಾಗಿ ಸಿಕ್ಕ 'ಶಾರ್ಟ್ ಬ್ರೇಕ್' ನಲ್ಲಿ ಆನಂದ್ ದೇಹ ಹಾಗೂ ನಟವಳಿಕೆ ನಂಬಲಾಗದಷ್ಟು ಬೆಳೆದಿದೆ, ಬದಲಾಗಿದೆ. ಮುಖದಲ್ಲಿ ಮೊದಲಿಗಿಂತ ಹೆಚ್ಚು ಆತ್ಮವಿಶ್ವಾಸ ಮನೆಮಾಡಿದೆ. ಸಾಕ್ಷಿ ಬೇಕಾದರೆ ಫೋಟೋ ನೋಡಿ.
ಆನಂದ್ ಗೆಳೆಯ ಹಾಗೂ ನಟ ತರುಣ್ ಸುಧೀರ್, ಆನಂದ್ ಗಾಗಿ ಚಿತ್ರವೊಂದನ್ನು ಸದ್ಯದಲ್ಲಿಯೇ ನಿರ್ದೆಶಿಸಲಿದ್ದಾರೆ. ಖಾಸಗಿ ಕೆಲಸದ ಕಾರಣಕ್ಕೆ ಇಂದು (ಫೆಬ್ರವರಿ 15, 2012) ವಿದೇಶಕ್ಕೆ ಹೊರಟಿರುವ ಆನಂದ್, ಮರಳಿಬಂದ ನಂತರ ಹೊಸ ಚಿತ್ರದ ಮುಹೂರ್ತ ದಿನ ನಿಗದಿಯಾಗಲಿದೆ. ಈ ವಿಷಯವನ್ನು ಸ್ವತಃ ಆನಂದ್, 'ಒನ್ ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.
ಇದೀಗ ಆತ್ಮವಿಶ್ವಾಸಕ್ಕೆ ಇನ್ನೊಂದು ಹೆಸರು ಎಂಬಂತಿರುವ ಆನಂದ್ ನೋಡಿದರೆ ಆಶ್ಚರ್ಯವಾಗುವುದು ಖಂಡಿತ. ಬಂದ ಸಮಸ್ಯೆಯನ್ನು ಧೈರ್ಯದಿಂದ ಎದುರಿಸಿ, ಮತ್ತೆ ಹೇಗೆ ಪುನರ್ಜನ್ಮ ಪಡೆದು ಮಿಂಚಬೇಕೆಂದು ಆನಂದ್ ನೋಡಿ ಕಲಿಯಬೇಕೆಂದರೆ ಅತಿಶಯೋಕ್ತಿ ಅಲ್ಲ. ಅವರನ್ನೀಗ ನೋಡದರೆ 'ಆದದ್ದೆಲ್ಲಾ ಒಳಿತೇ ಆಯಿತು...' ಎಂಬ ಪುರಂದರ ದಾಸರ ಹಾಡು ಬೇಡಬೇಡವೆಂದರೂ ನೆನಪಾಗುವಂತಿದೆ.