Don't Miss!
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ಸುದೀಪ್ ತೆಲುಗು 'ಈಗ' ಶೂಟಿಂಗ್ ಫಿನಿಶ್
ಎಸ್ ಎಸ್ ರಾಜಮೌಳಿ ನಿರ್ದೇಶನದ ತೆಲುಗು 'ಈಗ' ಚಿತ್ರದ ತಮ್ಮ ಭಾಗದ ಚಿತ್ರೀಕರಣವನ್ನು ನಟ ಸುದೀಪ್ ಮುಗಿಸಿದ್ದಾರೆ. ಮಂಗಳವಾರ (ಡಿ.13) ಹೈದರಾಬಾದಿನಲ್ಲಿ ತಮ್ಮ ಭಾಗದ ಚಿತ್ರೀಕರಣವನ್ನು ಸುದೀಪ್ ಮುಗಿಸಿ ಬೆಂಗಳೂರಿಗೆ ಹಿಂತಿರುಗಿದ್ದಾರೆ.
'ಓನ್ಲಿ ವಿಷ್ಣುವರ್ಧನ' ಚಿತ್ರ ಯಶಸ್ವಿಯಾಗಿದ್ದೆ ತಡ ಸುದೀಪ್ಗೆ ಸಾಲು ಸಾಲು ಚಿತ್ರಗಳ ಆಫರ್ಗಳು ಬರುತ್ತಿವೆ. ಕನ್ನಡದ ಚಿತ್ರ ನಿರ್ಮಾಪಕರು ನಾಮುಂದು ತಾಮುಂದು ಎಂದು ಸುದೀಪ್ ಕಾಲ್ ಶೀಟ್ಗಾಗಿ ಕಾಯುವಂತಾಗಿದೆ. ಏತನ್ಮಧ್ಯೆ ಸುದೀಪ್ ಒಪ್ಪಿಕೊಂಡಿರುವ ಮತ್ತೊಂದು ಕನ್ನಡ ಚಿತ್ರ 'ವರದನಾಯಕ' ಚಿತ್ರೀಕರಣವೂ ಭರದಿಂದ ಸಾಗಿದೆ.
ಹೈದರಾಬಾದಿನಿಂದ ಬುಧವಾರ ಬೆಂಗಳೂರಿಗೆ ಹಿಂತಿರುಗಿರುವ ಸುದೀಪ್, ಸ್ವಲ್ಪ ದಿನಗಳ ಕಾಲ ರಿಲ್ಯಾಕ್ಸ್ ಆಗಿ ಮತ್ತೆ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲಿದ್ದೇನೆ. 'ಈಗ' ಚಿತ್ರದ ಬಿಜಿ ಶೆಡ್ಯೂಲ್ನಿಂದ ಅವರು ಬಳಲಿರುವುದಾಗಿ ತಿಳಿಸಿದ್ದಾರೆ. 'ವರದನಾಯಕ' ಚಿತ್ರದಲ್ಲಿ ಸುದೀಪ್ ಅವರು ಪ್ರಮುಖ ಪಾತ್ರವನ್ನು ಪೋಷಿಸುತ್ತಿರುವುದು ಗೊತ್ತೇ ಇದೆ.
ಜನವರಿಯಲ್ಲಿ 'ವರದನಾಯಕ' ಚಿತ್ರದ ಚಿತ್ರೀಕರಣದಲ್ಲಿ ಸುದೀಪ್ ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ಅವರು 25 ದಿನಗಳ ಕಾಲ್ ಶೀಟನ್ನು ಕೊಟ್ಟಿದ್ದಾರೆ. ಜನವರಿ 19ರಂದು ನಿರ್ಮಾಪಕ ಹಾಗೂ ವಿತರಕ ಎನ್ ಕುಮಾರ್ ನಿರ್ಮಾಣದ ಸುದೀಪ್ ಅವರ ಮತ್ತೊಂದು ಚಿತ್ರ ಸೆಟ್ಟೇರಲಿದೆ. (ಏಜೆನ್ಸೀಸ್)