Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ಯಾಂಡಲ್ ವುಡ್ ಗೆ ಬಾಲಿವುಡ್ ಶೆಹೆನ್ ಷಾ ಅಮಿತಾಬ್?
ನಮ್ಮ ಕಲಾಸಾಮ್ರಾಟ್ ಎಸ್ ನಾರಾಯಣ್ ಅವರ ಪುತ್ರರತ್ನ ಪಂಕಜ್ ಮುಖ್ಯ ಭೂಮಿಕೆಯಲ್ಲಿರುವ 'ಮರೆಯಲಾರೆ' ಚಿತ್ರದಲ್ಲಿ ಅಮಿತಾಬ್ ನಟಿಸಲಿದ್ದಾರೆನ್ನುವುದು ಚಿತ್ರತಂಡದ ಹೇಳಿಕೆ. ಚಿತ್ರದ ನಿರ್ಮಾಪಕ ಶಿವಾನಂದ ಮಾದಸೆಟ್ಟಿ, ಇತ್ತೀಚಿಗೆ ಬಿಡುಗಡೆಗೊಂಡ 12 ತಾಸಿನಲ್ಲಿ ಚಿತ್ರೀಕರಣಗೊಂಡು ಗಿನ್ನಿಸ್ ದಾಖಲೆ ನಿರ್ಮಿಸಿದ ಪೊಲೀಸ್ ಸ್ಟೋರಿ 3 ಚಿತ್ರದ ನಿರ್ಮಾಪಕರು.
ಕ್ಯಾಮೆರಾಮನ್ ಆಗಿ ಕೆಲಸ ಮಾಡಿದ್ದ ಸೆಲ್ವ ಅವರ ಚೊಚ್ಚಲ ನಿರ್ದೇಶನದ ಚಿತ್ರವಿದು. ಅಮಿತಾಬ್ ಚಿತ್ರದಲ್ಲಿ ನಟಿಸಲಿರುವುದರಿಂದ ಚಿತ್ರ ರಾಷ್ಟ್ರ ಮಟ್ಟದಲ್ಲಿ ಹೆಸರಾಗುತ್ತದೆ ಮತ್ತು ಬಿಗ್ ಬಿ ಚಿತ್ರದಲ್ಲಿ ನಟಿಸುತ್ತಿರುವುದು ನಮ್ಮ ಭಾಗ್ಯವೇ ಸರಿ ಅನ್ನುತ್ತಾರೆ ನಿರ್ಮಾಪಕ ಶಿವಾನಂದ ಮಾದಸೆಟ್ಟಿ.
ಈ ಹಿಂದೆ ಧ್ಯಾನ್ ಮತ್ತು ರಮ್ಯಾ ಪ್ರಮುಖ ಭೂಮಿಕೆಯಲ್ಲಿದ್ದ 'ಅಮೃತಧಾರೆ' ಚಿತ್ರದಲ್ಲಿ ಅಮಿತಾಬ್ ಅತಿಥಿಯಾಗಿ ನಟಿಸಿದ್ದರು. ಕ್ಯಾನ್ಸರ್ ಪೀಡಿತ ನಾಯಕಿಯ ಜೀವನದ ದೊಡ್ಡ ಬಯಕೆಯಂತೆ ನಾಯಕ ನಾಯಕಿಯನ್ನು ಅಮಿತಾಬ್ ಅವರನ್ನು ಒಮ್ಮೆ ಭೇಟಿ ಮಾಡುವ ಸನ್ನಿವೇಶದಲ್ಲಿ ಅವರು ಸುಮಾರು ಮೂರು ನಿಮಿಷಗಳಷ್ಟು ತೆರೆಯಲ್ಲಿ ಕಾಣಿಸಿಕೊಂಡಿದ್ದರು. ಚಿತ್ರ ಸೂಪರ್ ಹಿಟ್ ಆಗಿತ್ತು.
ವೀರು, ಚೈತ್ರದ ಚಂದ್ರಮ, ಚೆಲುವಿನ ಚಿಲಿಪಿಲಿ, ದುಷ್ಟ ಚಿತ್ರದ ನಂತರ ಪಂಕಜ್ ನಾರಾಯಣ್ ಅವರ ಐದನೇ ಚಿತ್ರವಿದು. ಈ ನಾಲ್ಕೂ ಚಿತ್ರಗಳಿಂದ ನಿರ್ಮಾಪಕರ ಕಿಸೆ ಖಾಲಿಯೂ ಆಗಲಿಲ್ಲ ತುಂಬಲೂ ಇಲ್ಲ. ಅಮಿತಾಬ್ ಈ ಚಿತ್ರದಲ್ಲಿ ನಟಿಸುತ್ತಾರಾ? ಕನ್ನಡಿಗರಿಗೆ ಮತ್ತೊಮ್ಮೆ 'ಮರೆಯಲಾರದ' ಅನುಭವ ನೀಡುವರಾ?