Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿಂಗಾರಿ 'ಸತ್ಯ'ಕಥೆ ಹೇಳಿದ ಚಾಲೆಂಜಿಂಗ್ ಸ್ಟಾರ್
ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವ ಚಿತ್ರ ಚಿಂಗಾರಿಯ 'ಸಂತೋಷಕೂಟ' ಹೊಟೆಲ್ ಗೋಲ್ಡ್ ಪಿಂಚ್ ನಲ್ಲಿ ನೆರವೇರಿತು. ದರ್ಶನ್ ಹಾಗೂ ಇಡೀ ಚಿತ್ರತಂಡ ಈ ಕೂಟದಲ್ಲಿ ಭಾಗಿಯಾಗಿತ್ತು. ಎಲ್ಲರ ಮುಖದಲ್ಲಿ ಸಂತೋಷ, ಸಂಭ್ರಮ ಮನೆಮಾಡಿತ್ತು. ಚಿತ್ರ ಯಶಸ್ವಿಯಾಗಿದೆ ಎಂಬುದನ್ನು ವಿತರಕ 'ಸಮರ್ಥ್ ವೆಂಚರ್' ನ ಪ್ರಸನ್ನ, ಖುಷಿಯಿಂದ ಘೋಷಿಸಿದರು.
ಮಹದೇವ್ ಹಾಗೂ ಅವರ ಮಗ ಮನು ಗೌಡ ಈ ಚಿತ್ರ ನಿರ್ಮಾಣ ಮಾಡಿ, ನಂತರ ಸೇಲ್ ಮಾಡಿದ್ದಾರೆ. ಅವರಿಗೆ ಸಾಕಷ್ಟು ಲಾಭವಾಗಿದೆ. ಇದೀಗ ಚಿತ್ರ ಖರೀದಿಸಿರುವ ವಿತರಕ ಪ್ರಸನ್ನ ಕೂಡ ಲಾಭ ಗಳಿಸಿರುವುದು ಪಕ್ಕಾ ಆಗಿದೆ. ಮೊದಲ ವಾರವೇ 7 ಕೋಟಿ ಸಮೀಪದ ಕಲೆಕ್ಷನ್ ಆಗಿದ್ದು ಈಗ ಹಾಕಿರುವ ಹಣ ವಾಪಸ್ ಆಗಿ ಲಾಭ ಬಂದಿದೆ ಎಂದಿದ್ದಾರೆ ಪ್ರಸನ್ನ. ರಾಜ್ಯಾದ್ಯಂತ ಒಟ್ಟೂ 140 ಚಿತ್ರಮಂದಿರಗಳಲ್ಲಿ ಚಿಂಗಾರಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಚಿತ್ರದ ನಟ-ನಟಿಯರಾದ ದರ್ಶನ್, ದೀಪಿಕಾ ಕಾಮಯ್ಯ, ಭಾವನಾ, ಯಶಸ್ ಸೂರ್ಯ, ಮಧು, ಪ್ರದೀಪ್, ಅರುಣ್ ಸಾಗರ್, ಹಾಗೂ ತೇಜು ಸಂತೋಷಕೂಟದಲ್ಲಿ ಹಾಜರಿದ್ದರು. ಚಿಂಗಾರಿಯ ಕ್ಯಾಮರಾಮನ್ ವೇಣುರ ತಾರಾಪತ್ನಿ 'ತಾರಾ' ಆಗಮಿಸಿ ಸಂತೋಷದಲ್ಲಿ ಭಾಗಿಯಾದರು. ಇಡೀ ಚಿತ್ರತಂಡ ಒಗ್ಗಾಟನ್ನು ಪ್ರದರ್ಶಿಸಿ ಮಾದರಿ ಎನಿಸಿತು. ಕೋರಿಯೋಗ್ರಾಫರ್ ಆಗಿ ಪ್ರಸಿದ್ಧರಾಗಿದ್ದ ಎ ಹರ್ಷ, ಚಿಂಗಾರಿ ಚಿತ್ರದ ಮೂಲಕ ಯಶಸ್ವಿ ನಿರ್ದೆಶಕ ಪಟ್ಟಕ್ಕೇರಿದರು.
ಇಲ್ಲಿಯವರೆಗಿನ ಬಾಕ್ಸ್ ಆಫೀಸ್ ಗಳಿಕೆಯನ್ನು ಶೀಘ್ರವೇ ಮಾಧ್ಯಮಕ್ಕೆ ಬಿಡುಗಡೆ ಮಾಡಲಾಗುವುದೆಂಬ ಮಾತು ವಿತರಕರಿಂದ ಬಂತು. ಆಶ್ಚರ್ಯವೆಂದರೆ ಚಿಂಗಾರಿ ಚಿತ್ರದ ಕಥೆಯನ್ನು ಹಾಲಿವುಡ್ ಚಿತ್ರ 'ಟೇಕನ್'ನಿಂದ ತೆಗೆದುಕೊಳ್ಳಲಾಗಿದೆ ಎಂಬ ಮಾತನ್ನು ಸ್ವತಃ ದರ್ಶನ್ ಘೋಷಸಿದರು. ಅವರ ಮಾತನ್ನು ನಿರ್ದೇಶಕ ಹರ್ಷ ಅನುಮೋದಿಸಿದರು. ಒಟ್ಟಿನಲ್ಲಿ ಕನ್ನಡ ಚಿತ್ರರಂಗ ವರ್ಷದ ಪ್ರಾರಂಭದಲ್ಲಿ ಚಿಂಗಾರಿ ಚಿತ್ರದ ಮೂಲಕ ಯಶಸ್ಸು ಕಂಡಿದೆ.