Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕುಹಕಿಗಳ ಬಾಯ್ಮಿಚ್ಚಿಸಿದ ಗುಂಡ್ರುಗೋವಿ
ನಿರ್ಮಾಪಕ ಟಿ.ಎನ್.ಗೋಪಾಲ ಕೃಷ್ಣ ಇದ್ದಕ್ಕಿದ್ದಂತೆ ಕಷ್ಟ ಮೈಮೇಲೆ ಎಳೆದುಕೊಂಡರು. ಕಾಸು ಇಲ್ಲದೇ ಹೋದಾಗ ಕಾರ್ಯಕಾರಿ ನಿರ್ಮಾಪಕ ಮಹೇಶ್ ಹಣ ಹೊಂದಿಸಿಕೊಟ್ಟರು. ಅದರ ಪರಿಣಾಮ ಸಿನಿಮಾ ಚಿತ್ರೀಕರಣ ಪೂರ್ಣ.
ಈ ಕಷ್ಟವನ್ನು ಇಡೀ ಚಿತ್ರತಂಡ ಮೊನ್ನೆ ಹಂಚಿಕೊಂಡು ನಿಟ್ಟುಸಿರಿಟ್ಟಿತು. ಚಿತ್ರದ ನಿರ್ದೇಶಕ ತಾರೇಶ್ ರಾಜ್. ಓಂ ಪ್ರಕಾಶ್ ರಾವ್ ಅವರ ಕಾರಿನ ಡ್ರೈವರ್ ಆಗಿದ್ದ ಇವರು ಮೊದಲಿಂದಲೂ ಕಥೆ ಬರೆಯುತ್ತಿದ್ದರು. ಕೇಳಲು ಮುಂದೆ ಬಂದವರಿಗೆ ಅದನ್ನು ಹೇಳುವುದು ನಡೆದೇ ಇತ್ತು. ನಟನಾಗುವ ಆಸೆಯಿಂದ ಗೋಪಾಲ ಕೃಷ್ಣ ಕಥೆ ಕೇಳಿದರು. ಅದನ್ನು ಕೇಳಿದ ಮೇಲೆ ತಾವೇ ಸಿನಿಮಾ ನಿರ್ಮಿಸಲು ಮುಂದಾದರು. ಚಿತ್ರದಲ್ಲಿ ಅವರು ಒಂದು ಮುಖ್ಯ ಪಾತ್ರವನ್ನೂ ನಿರ್ವಹಿಸಿದ್ದಾರೆ.
ನಾಯಕ ಸತ್ಯ ಕೂಡ ಕಷ್ಟವನ್ನು ಹಂಚಿಕೊಂಡು ಸುಖಪಟ್ಟರು. 'ಆ ದಿನಗಳು' ಚಿತ್ರದಲ್ಲಿ ಒಳ್ಳೆಯ ವಿಮರ್ಶೆ ಗಳಿಸಿದ್ದ ಅವರಿಗೆ ಮೊದಲು ನಿರ್ದೇಶಕರ ಮೇಲೆ ಅನುಮಾನವಿತ್ತಂತೆ. ಚಿತ್ರೀಕರಣ ಶುರುವಾದ ಎರಡು ಮೂರು ದಿನದಲ್ಲೇ ಆ ಅನುಮಾನ ಮಾಯವಾಗಿ ವಿಶ್ವಾಸ ಮೂಡಿದೆ. ನಾಯಕಿ ನಿತ್ಯಶ್ರೀ ಒಳ್ಳೆಯ ತಂಡದ ಜೊತೆ ಕೆಲಸ ಮಾಡಿದ ಖುಷಿ ಹಂಚಿಕೊಂಡರು. ಚಿತ್ರದಲ್ಲಿ ಅವರಿಗೆ ಬಜಾರಿ ಪಾತ್ರವಂತೆ. ಹಳ್ಳಿಯಲ್ಲಿ ನಡೆಯುವ ಕಥೆಯನ್ನು ಒಳಗೊಂಡ ಈ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದು ಅವರು ಮುಖ ಅರಳಿಸಿದರು.
ಏಪ್ರಿಲ್
ಹೊತ್ತಿಗೆ
ಚಿತ್ರವನ್ನು
ಬಿಡುಗಡೆ
ಮಾಡಲು
ಗೋಪಾಲ
ಕೃಷ್ಣ
ನಿರ್ಧರಿಸಿದ್ದಾರೆ.
ಯಾರು
ತಮ್ಮನ್ನು
ಆಡಿಕೊಂಡಿದ್ದರೋ
ಅವರೆಲ್ಲಾ
ಬಂದು
ಸಿನಿಮಾ
ನೋಡಲಿ
ಅನ್ನೋದು
ಅವರ
ಮುಕ್ತ
ಆಮಂತ್ರಣ.
ಪೂರಕ
ಓದಿಗೆ:
ಅರ್ಥವಿಲ್ಲದ
ಶೀರ್ಷಿಕೆಗಳ
ನಡುವೆ
'ಗುಂಡ್ರಗೋವಿ'!