Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಾಯಕಿ ಚಿತ್ರಾ ಮಗಳ ದುರಂತ ಸಂಭವಿಸಿದ್ದಾದರೂ ಹೇಗೆ?
ಮಕ್ಕಳು ಎಂದ ಮೇಲೆ ಕೊಂಚ ಮೈಮರೆತರೂ ಏನೋ ಒಂದು ಆಪತ್ತು ತಂದುಕೊಂಡಿರುತ್ತವೆ. ಚಿತ್ರಾ ಅವರ ಚಿನ್ನುಮರಿಗೆ ಹಾಗಿದ್ದೂ ಹಾಗೆ. ನಂದನಾ ಹುಟ್ಟಿನಿಂದಲೇ ಡೌನ್ಸ್ ಸಿಂಡ್ರೋಮ್ನಿಂದ(ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತಗೊಳಿಸುವ ಕಾಯಿಲೆ) ಬಳಲುತ್ತಿದ್ದಳು. ಈ ಮಗುವನ್ನು ಚಿತ್ರಾ ದಂಪತಿಗಳು ಕಣ್ಣಿಗೆ ರೆಪ್ಪೆಯಂತೆ ನೋಡಿಕೊಳ್ಳುತ್ತಿದ್ದರೂ. ಹಾಗಿದ್ದೂ ಈ ದುರಂತ ಸಂಭವಿಸಿಬಿಟ್ಟಿದೆ.
ಚಿತ್ರಾ ದಂಪತಿಗಳು ಎಲ್ಲಿಗೇ ಹೋಗಲಿ ತಮ್ಮಂದೊಂದಿಗೆ ನಂದನಾಳನ್ನೂ ಕರೆದೊಯ್ಯುತ್ತಿದ್ದರು. ಮುಖ್ಯವಾಗಿ ವಿದೇಶಗಳಿಗೆ ಹೋದರೂ ನಂದನಾರನ್ನು ಜೊತೆಗೇ ಕರೆದೊಯ್ಯುತ್ತಿದ್ದರು. ಗುರುವಾರ ಬೆಳಗ್ಗೆ ಹಾಡಿನ ರಿಹರ್ಸಲ್ಗೆಂದು ಸಿದ್ಧತೆಗಳನ್ನು ಮಾಡಿಕೊಂಡು ಇನ್ನೇನು ಹೊರಡಬೇಕು ಎಂದಿರುವಾಗ ನಂದನಾ ಕಾಣಿಸಲಿಲ್ಲ. ಕಂಗಾಲಾದ ಪೋಷಕರು ಮನೆಯ ಒಳಗೆ, ಹೊರಗೆಲ್ಲಾ ಹುಡುಕಿದರು. ಬಳಿಕ ನಂದನಾ ಮನೆಯ ಆವರಣದ ಈಜು ಕೊಳಕ್ಕೆ ಬಿದ್ದುರುವುದನ್ನು ಗಮನಿಸಿ ತಕ್ಷಣ ಆಕೆಯನ್ನು ನೀರಿನಿಂದ ಹೊರಗೆ ತಂದರಾದರೂ ಅಷ್ಟರಲ್ಲಾಗಲೆ ಪ್ರಾಣಪಕ್ಷಿ ಹಾರಿಹೋಗಿತ್ತು.
ಪುಟ್ಟಪರ್ತಿ ಸಾಯಿಬಾಬಾ ಭಕ್ತರಾದಚಿತ್ರಾ ಮತ್ತು ವಿಜಯಶಂಕರ್ ದಂಪತಿಗಳಿಗೆ 15 ವರ್ಷಗಳ ಬಳಿಕ ನಂದನಾ ಜನಿಸಿದ್ದರು. ಚೆನ್ನೈನಲ್ಲಿ ಹೊಸ ಮನೆಯನ್ನು ನಿರ್ಮಿಸುತ್ತಿರುವ ಚಿತ್ರಾ ದಂಪತಿಗಳು ಶೀಘ್ರದಲ್ಲೇ ಅಲ್ಲಿಗೆ ಹೋಗುವ ಆಲೋಚನೆಯಲ್ಲಿದ್ದರು. ಮಕ್ಕಳ ಬಗ್ಗೆ ಪೋಷಕರು ಎಷ್ಟೇ ಎಚ್ಚರವಾಗಿದ್ದರೂ ಅಚಾನಕ್ಕಾಗಿ ಈ ರೀತಿಯ ಘಟನೆಗಳು ಸಂಭವಿಸಿಬಿಡುತ್ತವೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಆದಷ್ಟು ಜಾಗ್ರತ್ತೆ ವಹಿಸಲಿ ಎಂಬುದೇ ನಮ್ಮ ಉದ್ದೇಶ.