ರಿಲಯನ್ಸ್ ಮನರಂಜನಾ ಸಂಸ್ಥೆಗೆ ಕಾಸರವಳ್ಳಿ ಚಿತ್ರ

ನಂತರ ಹಲವಾರು ಕಾದಂಬರಿಗಳ ಹುಡುಕಾಟದಲ್ಲಿ ಕಾಸರವಳ್ಳಿ ನಿರತರಾಗಿ ಕಡೆಗೆ 'ಸವಾರಿ'ಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಾದಂಬರಿ ಹೆಸರನ್ನೆ ಚಿತ್ರಕ್ಕೂ ಇಡಬೇಕು ಎಂದು ಕಾಸವಳ್ಳಿ ನಿರ್ಧರಿಸಿದರು. ಪೀಕಲಾಟ ಶುರುವಾಗಿದ್ದೆ ಇಲ್ಲಿ. 'ಸವಾರಿ' ಶೀರ್ಷಿಕೆಯನ್ನು ಅದಾಗಲೆ ರಿಜಿಸ್ಟರ್ ಮಾಡಿಕೊಳ್ಳಲಾಗಿತ್ತು. ಶ್ರೀನಗರ ಕಿಟ್ಟಿ ನಟಿಸುತ್ತಿರುವ ರೀಮೇಕ್ ಚಿತ್ರಕ್ಕೆ ಆ ಹೆಸರು ನೋಂದಣಿಯಾಗಿದೆ. ತೆಲುಗಿನ 'ಗಮ್ಯಂ' ಚಿತ್ರವನ್ನು ನಿರ್ಮಾಪಕ ರಾಮೋಜಿ ರಾವ್ ಕನ್ನಡಕ್ಕೆ ತರುತ್ತಿದ್ದಾರೆ.
ಸರಿ ವಿಧಿ ಇಲ್ಲದೆ ಕಾಸರವಳ್ಳಿ ಮತ್ತೊಂದು ಶೀರ್ಷಿಕೆಯ ಹುಡುಕಾಟದಲ್ಲಿದ್ದಾರೆ. ಅಂದಹಾಗೆ ಈ ಚಿತ್ರದಲ್ಲಿ ವೈಜಯಂತಿ ಬಿರಾದಾರ ಮುಖ್ಯ ಭೂಮಿಕೆಯಲ್ಲಿದ್ದು, ಉಮಾಶ್ರೀ, ಪವಿತ್ರಾ ಲೋಕೇಶ್ ನಟನೆಯೂ ಇದೆ. ಡಿ.20 ರಂದು ಚಿತ್ರ ಸೆಟ್ಟೇರಲಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications