Don't Miss!
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- News ಬೆಂಗಳೂರಿನಲ್ಲಿ ಮೋದಿ ಮತಬೇಟೆ; ರಾಜ್ಯಕ್ಕೆ ಪ್ರಧಾನಿ ಮೋದಿಯ ಕೊಡುಗೆ ಏನಿದೆ?: ಡಾ.ಜಿ ಪರಮೇಶ್ವರ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾವುಕ ಕ್ಷಣಗಳಲ್ಲಿ ಮಿಂದೆದ್ದ ಮಾಯದಂಥ ಮಳೆ
ಕಷ್ಟಪಟ್ಟು ಸಾಕಿಸಲುಹಿದ ಮಕ್ಕಳು ತಂದೆತಾಯಿ ಮುಂದೆ ಸತ್ತು ಹೋದರೆ ಹೆತ್ತವರಿಗೆ ಅದಕ್ಕಿಂತ ದುಖಃ ಬೇರೊಂದಿಲ್ಲ. 'ಮಾಯದಂಥ ಮಳೆ' ಚಿತ್ರದಲ್ಲೂ ಇಂತಹ ಪ್ರಸಂಗವೊಂದು ಜರಗುತ್ತದೆ. ಮಗಳನ್ನು ಕಳೆದುಕೊಂಡ ತಂದೆಯೊಬ್ಬ ದುಖಃ ತಾಳಲಾಗದೆ ಆತ್ಮಾಹುತಿಗೆ ಶರಣಾಗಲು ಮುಂದಾಗುತ್ತಾನೆ.
ಇದನ್ನು ಗಮನಿಸಿದ ನೆರೆಮನೆಯ ಯುವತಿಯೊಬ್ಬಳು ಅಲ್ಲಿಗೆ ಆಗಮಿಸಿ ಕೆಲವು ಧೈರ್ಯ ತುಂಬುವ ಮಾತುಗಳನಾಡಿ ಆತನನ್ನು ಸಾವಿನ ದವಡೆಯಿಂದ ಪಾರು ಮಾಡುತ್ತಾಳೆ. ಸುಂಕದಕಟ್ಟೆಯ ಖಾಸಗಿ ಮನೆಯೊಂದರಲ್ಲಿ ಚಿತ್ರೀಕರಣಗೊಂಡ ಈ ಸನ್ನಿವೇಶದಲ್ಲಿ ಹಿರಿಯ ನಟ ಶರತ್ಬಾಬು ಹಾಗೂ ದಿವ್ಯ ಅಭಿನಯಿಸಿದ್ದರು.
ಈ ಹಂತದ ಚಿತ್ರೀಕರಣದಲ್ಲಿ ಶರತ್ಬಾಬು ಹಾಗೂ ಶ್ರುತಿ ಅವರ ಅಭಿನಯಿಸಿದ ಕೆಲವು ದೃಶ್ಯಗಳನ್ನೂ ನಿರ್ದೇಶಕ ವೀರೇಶ್ದೊಡ್ಡಬಳ್ಳಾಪುರ ಧರ್ಮಗಿರಿ ಶ್ರೀಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಚಿತ್ರಿಸಿಕೊಂಡರು.ಗಂಗಾಪರಮೇಶ್ವರಿ ಪ್ರೋಡಕ್ಷನ್ಸ್ ಲಾಂಛನದಲ್ಲಿ ಕೆರೆಮಲ್ಲು ಬದ್ರಿ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
ಎ.ಸಿ.ಮಹೇಂದರ್ ಛಾಯಾಗ್ರಹಣ, ಮ್ಯೂಜಿಕ್ಮೋಹನ್ ಸಂಗೀತ, ಕೆಂಪರಾಜ್ ಅವರ ಸಂಕಲವಿರುವ ಚಿತ್ರಕ್ಕೆ ರವಿಚೇತನ್, ಭಾವನಾರಾವ್, ಅಜಿತ್, ದಿವ್ಯ, ಶರತ್ಬಾಬು, ಶ್ರುತಿ, ಪ್ರಕಾಶ್ಶೆಣೈ, ಸಿಹಿಕಹಿಚಂದ್ರು, ಪದ್ಮಜಾರಾವ್, ರೇಖಾಕುಮಾರ್, ಹೊನ್ನವಳಿ ಕೃಷ್ಣ, ಸುಂದರಶ್ರೀ, ಋತು, ಮಿಮಿಕ್ರಿ ರಾಜಗೋಪಾಲ್ ಮುಂತಾದವರ ತಾರಾಬಳಗವಿದೆ.