Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಭಾವುಕ ಕ್ಷಣಗಳಲ್ಲಿ ಮಿಂದೆದ್ದ ಮಾಯದಂಥ ಮಳೆ
ಕಷ್ಟಪಟ್ಟು ಸಾಕಿಸಲುಹಿದ ಮಕ್ಕಳು ತಂದೆತಾಯಿ ಮುಂದೆ ಸತ್ತು ಹೋದರೆ ಹೆತ್ತವರಿಗೆ ಅದಕ್ಕಿಂತ ದುಖಃ ಬೇರೊಂದಿಲ್ಲ. 'ಮಾಯದಂಥ ಮಳೆ' ಚಿತ್ರದಲ್ಲೂ ಇಂತಹ ಪ್ರಸಂಗವೊಂದು ಜರಗುತ್ತದೆ. ಮಗಳನ್ನು ಕಳೆದುಕೊಂಡ ತಂದೆಯೊಬ್ಬ ದುಖಃ ತಾಳಲಾಗದೆ ಆತ್ಮಾಹುತಿಗೆ ಶರಣಾಗಲು ಮುಂದಾಗುತ್ತಾನೆ.
ಇದನ್ನು ಗಮನಿಸಿದ ನೆರೆಮನೆಯ ಯುವತಿಯೊಬ್ಬಳು ಅಲ್ಲಿಗೆ ಆಗಮಿಸಿ ಕೆಲವು ಧೈರ್ಯ ತುಂಬುವ ಮಾತುಗಳನಾಡಿ ಆತನನ್ನು ಸಾವಿನ ದವಡೆಯಿಂದ ಪಾರು ಮಾಡುತ್ತಾಳೆ. ಸುಂಕದಕಟ್ಟೆಯ ಖಾಸಗಿ ಮನೆಯೊಂದರಲ್ಲಿ ಚಿತ್ರೀಕರಣಗೊಂಡ ಈ ಸನ್ನಿವೇಶದಲ್ಲಿ ಹಿರಿಯ ನಟ ಶರತ್ಬಾಬು ಹಾಗೂ ದಿವ್ಯ ಅಭಿನಯಿಸಿದ್ದರು.
ಈ ಹಂತದ ಚಿತ್ರೀಕರಣದಲ್ಲಿ ಶರತ್ಬಾಬು ಹಾಗೂ ಶ್ರುತಿ ಅವರ ಅಭಿನಯಿಸಿದ ಕೆಲವು ದೃಶ್ಯಗಳನ್ನೂ ನಿರ್ದೇಶಕ ವೀರೇಶ್ದೊಡ್ಡಬಳ್ಳಾಪುರ ಧರ್ಮಗಿರಿ ಶ್ರೀಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಚಿತ್ರಿಸಿಕೊಂಡರು.ಗಂಗಾಪರಮೇಶ್ವರಿ ಪ್ರೋಡಕ್ಷನ್ಸ್ ಲಾಂಛನದಲ್ಲಿ ಕೆರೆಮಲ್ಲು ಬದ್ರಿ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
ಎ.ಸಿ.ಮಹೇಂದರ್ ಛಾಯಾಗ್ರಹಣ, ಮ್ಯೂಜಿಕ್ಮೋಹನ್ ಸಂಗೀತ, ಕೆಂಪರಾಜ್ ಅವರ ಸಂಕಲವಿರುವ ಚಿತ್ರಕ್ಕೆ ರವಿಚೇತನ್, ಭಾವನಾರಾವ್, ಅಜಿತ್, ದಿವ್ಯ, ಶರತ್ಬಾಬು, ಶ್ರುತಿ, ಪ್ರಕಾಶ್ಶೆಣೈ, ಸಿಹಿಕಹಿಚಂದ್ರು, ಪದ್ಮಜಾರಾವ್, ರೇಖಾಕುಮಾರ್, ಹೊನ್ನವಳಿ ಕೃಷ್ಣ, ಸುಂದರಶ್ರೀ, ಋತು, ಮಿಮಿಕ್ರಿ ರಾಜಗೋಪಾಲ್ ಮುಂತಾದವರ ತಾರಾಬಳಗವಿದೆ.