Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಲಯ ನಿರ್ಮಾಣಕ್ಕೆ ಮುಂದಾದ ರಾಘವ ಲಾರೆನ್ಸ್
ರಾಘವ ಲಾರೆನ್ಸ್ ಎಂದರೆ ಸಾಮಾನ್ಯವಾಗಿ ಎಲ್ಲರೂ ಈತ ಕ್ರಿಶ್ಚಿಯನ್ ಇರಬಹುದೇನೋ ಎಂದು ಭಾವಿಸುತ್ತಾರೆ. ಈತನ ಮೂಲ ಹೆಸರು ರಾಘವ ಮುರುಗಯ್ಯನ್. ಚಿತ್ರರಂಗಕ್ಕೆ ಬಂದ ಬಳಿಕ ತನ್ನ ಹೆಸರನ್ನು ಲಾರೆನ್ಸ್ ರಾಘವೇಂದ್ರ ಎಂದು ಬದಲಾಯಿಸಿಕೊಂಡ. ಈತನ ಹಿಪ್ ಅಪ್ ಹಾಗೂ ಪಾಶ್ವಿಮಾತ್ಯ ನೃತ್ಯ ಸಂಯೋಜನೆಗಳಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಬಂದಿವೆ.
ವಿಷಯ ಏನಪ್ಪಾ ಅಂದ್ರೆ...ಡ್ಯಾನ್ಸ್ನಲ್ಲಿ ಪ್ರಭುದೇವ ನಂತರ ಅಷ್ಟೇ ಹೆಸರನ್ನು ಸಂಪಾದಿಸಿಕೊಂಡ ಈತ ಈಗ ದೇವಸ್ಥಾನವೊಂದನ್ನು ಕಟ್ಟಿಸಲು ಮುಂದಾಗಿದ್ದಾನೆ. ತಮಿಳುನಾಡಿನಲ್ಲಿ ಇದಕ್ಕಾಗಿ ಸ್ಥಳವನ್ನು ನೋಡಿದ್ದಾನೆ. ಈ ಹಿನ್ನೆಲೆಯಲ್ಲಿ ಈತ ತೀರಾ ಇತ್ತೀಚೆಗೆ ಆಂಧ್ರಪ್ರದೇಶದ ಶ್ರೀಕಾಳಹಸ್ತಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾನೆ.
ಶ್ರೀಕಾಳಹಸ್ತಿಯಲ್ಲಿ ರಾಘವ ಲಾರೆನ್ಸ್ಗೆ ವಿಐಪಿ ದರ್ಶನ ಕಲ್ಪಿಸಲಾಗಿತ್ತು. ಅಲ್ಲಿ ಆತ ರಾಹುಕೇತು ವಿಶೇಷ ಪೂಜೆಗಳನ್ನು ನಿರ್ವಹಿಸಿದ್ದಾನೆ. ಇದೆಲ್ಲಾ ಮಂದಿರ ನಿರ್ಮಾಣಕ್ಕಾಗಿ ಮಾಡಿ ಪೂಜೆ ಎನ್ನಲಾಗಿದೆ. ಈ ಹಿಂದೆ ಈತ ಬೆಳಗಾವಿ ಬೆಡಗಿ ಲಕ್ಷ್ಮಿ ರೈ ಜೊತೆ ಕುಚ್ ಕುಚ್ ನಡೆಸಿದ್ದ ಎಂಬ ಮಾತುಗಳು ಕೇಳಿಬಂದಿದ್ದವು. (ಏಜೆನ್ಸೀಸ್)