Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಆಪ್ತರಕ್ಷಕ' ನೋಡಿ ಗದ್ಗದಿತರಾದ ರಜನಿ
ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಭಿನಯದ ಕಟ್ಟಕಡೆಯ ಹಾಗೂ 200ನೇ ಚಿತ್ರ 'ಆಪ್ತರಕ್ಷಕ'. ಈ ಚಿತ್ರದ ವಿಶೇಷ ಪ್ರದರ್ಶನವನ್ನು ನೋಡಿದ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಕಣ್ಣೀರಾದ ಘಟನೆ ಚೆನ್ನೈನಲ್ಲಿ ನಡೆದಿದೆ. 'ಆಪ್ತರಕ್ಷಕ' ಬಗ್ಗೆ ರಜನಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಚೆನ್ನೈನ ಎವಿಎಂ ಸ್ಟುಡಿಯೋದಲ್ಲಿ ಆಪ್ತರಕ್ಷಕ ಚಿತ್ರದ ಎರಡು ವಿಶೇಷ ಪ್ರದರ್ಶನವನ್ನು ನಿರ್ದೇಶಕ ಪಿ ವಾಸು ಆಯೋಜಿಸಿದ್ದರು. ಒಂದು ಪ್ರದರ್ಶನ ರಜನಿಕಾಂತ್ ಅವರಿಗಾದರೆ ಮತ್ತೊಂದು ಶಿವಾಜಿ ಗಣೇಶನ್ ಅವರ ಕುಟುಂಬಕ್ಕಾಗಿ.
ಆಪ್ತರಕ್ಷಕ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಕುತೂಹಲ ತಡೆಯಲಾಗದೆ ರಜನಿ ಕುರ್ಚಿಯಿಂದ ಎದ್ದು ನಿಂತರಂತೆ. ಬಳಿಕ ಚಿತ್ರದ ನಿರ್ದೇಶಕ ವಾಸು ಅವರನ್ನು ಅಪ್ಪಿಕೊಂಡು ಕಣ್ಣೀರಿಟ್ಟರಂತೆ. ಹಾಗೆಯೇ ಶಿವಾಜಿ ಪ್ರಭು ಅವರು ಭಾವುಕರಾಗಿ ವಾಸು ಅವರನ್ನು ಅಪ್ಪಿಕೊಂಡ ಪ್ರಸಂಗವೂ ನಡೆದಿದೆ ಎನ್ನುತ್ತವೆ ಮೂಲಗಳು.
'ಆಪ್ತರಕ್ಷಕ' ಚಿತ್ರ ತಮಿಳಿನಲ್ಲಿ 'ಚಂದ್ರಮುಖಿ ಭಾಗ 2' ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ರಜನಿಕಾಂತ್ ಚಿತ್ರದ ನಾಯಕ ನಟ ಎಂಬುದು ಅಷ್ಟೇ ಸತ್ಯ. ಅಂದಹಾಗೆ ಆಪ್ತರಕ್ಷಕ ಚಿತ್ರ ಫೆಬ್ರವರಿ 19ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. 'ಆಪ್ತಮಿತ್ರ' ಚಿತ್ರದ ಮುಂದಿನ ಭಾಗ 'ಆಪ್ತರಕ್ಷಕ' ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಆಪ್ತರಕ್ಷಕ ಚಿತ್ರದ ನಾಯಕಿಯರು ಭಾವನಾ, ಸಂಧ್ಯಾ, ಲಕ್ಷ್ಮಿ ಗೋಪಾಲಸ್ವಾಮಿ, ವಿಮಲಾ ರಾಮನ್.